ಆಳಂದ ಪಟ್ಟಣದಲ್ಲಿ ಶುಕ್ರವಾರ ಮಿಲಿಟರಿ ಹೋಟಲ್ ಮಾಲಿಕ ನಿವೃತ್ತ ಸೈನಿಕ ಹರಿನಂದ ಕೊಡಮೂಡ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದ ಸಾಮಾಜಘಾತುಕ ಆರೋಪಿಗಳನ್ನು ಬಂಧಿಸುವಲ್ಲಿ ಆಳಂದ ಪೊಲೀಸರು ಯಶಸ್ವಿಯಾಗಿದ್ದಾರೆ.
ಶುಕ್ರವಾರ ಸಾಯಂಕಾಲ ಕುಡಿದ ಮತ್ತಿನಲ್ಲಿ ಹೊಟೇಲಗೆ ನುಗ್ಗಿದ ಸಮಾಜಘಾತುಕರು 72 ವರ್ಷ ವಯಸ್ಸಿನ ಹಿರಿಜೀವ, ಮಾಜಿ ಸೈನಿಕ ಹರಿನಂದ ಕೊಡಮೂಡ ಮೇಲೆ ದೈಹಿಕ ಹಲ್ಲೆ ಮಾಡಿದ್ದಲ್ಲದೇ ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಸಮಾಜಘಾತುಕರನ್ನು ಬಂಧಿಸಿ ಉಗ್ರ ಶಿಕ್ಷೆಗೆ ಗುರಿ ಪಡಿಸುವಂತೆ ಸಾರ್ವಜನಿಕರು ಆಗ್ರಹಪಡಿಸಿದ್ದರು.
ಇನ್ನೂ 72 ವರ್ಷ ವಯಸ್ಸಿನ ಹರಿನಂದ ಕೊಡಮೂಡ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದವರು. ಭಾರತ ಚೀನಾ ಯುದ್ಧದ ಸಮಯದಲ್ಲಿ ರಣಾಂಗಣದಲ್ಲಿ ತೊಡೆ ತಟ್ಟಿ ಶತ್ರುಗಳ ಜೊತೆ ಕಾದಾಟ ನಡೆಸಿದವರು. ಇವರ ಸೇವೆಯನ್ನು ಗುರುತಿಸಿ ಭಾರತೀಯ ಸೇನೆಯು ಇವರಿಗೆ ಎರಡು ಪದಕಗಳನ್ನು ನೀಡಿ ಗೌರವಿಸಿದೆ. ಇಂತಹ ದೇಶಪುತ್ರನನ್ನು ಸಮಾಜಘಾತುಕ ಶಕ್ತಿಗಳು ಸಾರ್ವಜನಿಕವಾಗಿ ಹೀಗೆ ಹಲ್ಲೆ ಮಾಡಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.
ತಂದೆಯ ಸ್ಥಾನದಲ್ಲಿರುವ, ಹಿರಿಯ ವಯಸ್ಸಿನ ಮಾಜಿ ಸೈನಿಕರ ಮೇಲೆ ಈ ರೀತಿ ಹಲ್ಲೆ ಮಾಡುವುದು ನ್ಯಾಯವೇ?. ಇಂತಹ ಸಮಾಜಘಾತುಕ ಕ್ರಿಮಿಗಳನ್ನು ಬಂಧಿಸಿ ಉಗ್ರ ಶಿಕ್ಷೆಗೆ ಒಳಪಡಿಸುವಂತೆ ಒಕ್ಕೊರಲಿನ ಆಗ್ರಹ ಕೇಳಿ ಬಂದಿತ್ತು.
ಹಲ್ಲೆ ನಡೆಸಿದ ಆರೋಪಿಗಳನ್ನು ಸತ್ರೋದ್ದೀನ್ ಅನ್ಸಾರಿ ಮತ್ತು ಮಾರುತಿ ಎಂದು ಗುರುತಿಸಲಾಗಿದ್ದು, ಆರೋಪಿಗಳನ್ನು ಬಂಧಿಸಿ ಕಲಬುರಗಿಯ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ.
Comments are closed.