ಆಳಂದ: ಪಟ್ಟಣದಲ್ಲಿ ಬಸವಗಂಗಾ ಮೆಡಿಕಲ್ಸ್ ಮತ್ತು ಉರಮಗಾದ ಡಾ ಯೇಳಾಪೂರ ಸಂಗಮೇಶ್ವರ ಸ್ಪೇಷಾಲಿಟಿ ಆಸ್ಪತ್ರೆ ಆಶ್ರಯುದಲ್ಲಿ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ಶಿಬಿರದಲ್ಲಿ ನೂರಾರು ಮಂದಿಗೆ ತಪಾಸಣೆ ಚಿಕಿತ್ಸೆ ಕೈಗೊಳ್ಳಲಾಯಿತು.
ಆಳಂದ: ಪಟ್ಟಣದ ಬಸ್ ನಿಲ್ದಾಣ ಹತ್ತಿರದ ಬಸವಗಂಗಾ ಮೆಡಿಕಲ್ಸ್ನ ರಮೇಶ ಲೋಹಾರ ಆಶ್ರಯದಲ್ಲಿ ಉಮರಗಾದ ಡಾ. ಯೇಳಾಪೂರ ಸಂಗಮೇಶ್ವರ ಸ್ಪೇμÁಲಿಟಿ ಆಸ್ಪತ್ರೆಯ ವೈದ್ಯಕೀಯ ತಂಡದ ಸಹಯೋಗದೊಂದಿಗೆ ಸಂಗಮೇಶ್ವರ ಕ್ಲಿನಿಕ್ನ ಪ್ರಾರಂಭೋತ್ಸವದ ಅಂಗವಾಗಿ ಆಯೋಜಿಸಲಾದ ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿಯಾಗಿ ನಡೆಯಿತು.
ಈ ಶಿಬಿರದಲ್ಲಿ ನೂರಾರು ರೋಗಿಗಳಿಗೆ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ಒದಗಿಸಲಾಯಿತು.
ನುರಿತ ತಜ್ಞ ವೈದ್ಯರಾದ ಡಾ. ಸುಭಾಷ ಯಾಳಾಪೂರ, ಡಾ. ನೀಲೇಶ ಸುಭಾಷ ಯಾಳಾಪೂರ, ಡಾ. ನೇಹಾ, ಮತ್ತು ಡಾ. ತ್ರಿವೇದಿ ರಾಹುಲ್ ಪ್ರಸಾದ್ ಅವರು ಶಿಬಿರಕ್ಕೆ ಆಗಮಿಸಿದ ರೋಗಿಗಳಿಗೆ ಸಕ್ಕರೆ ಕಾಯಿಲೆ, ರಕ್ತದೊತ್ತಡ, ದಮ್ಮಾ, ಶ್ವಾಸಕೋಶ ಸಮಸ್ಯೆ, ಕ್ಷಯರೋಗ, ಹೃದಯ ಸಂಬಂಧಿತ ರೋಗಗಳು, ಸ್ತ್ರೀರೋಗ ಸಮಸ್ಯೆ, ಬಂಜೇತನ, ಮುಟ್ಟಿನ ದೋಷ, ಚರ್ಮರೋಗ, ಲೈಂಗಿಕ ಸಮಸ್ಯೆ, ಲಕ್ವಾ, ಕಿಡ್ನಿ, ಥೈರಾಯ್ಡ್, ಕುಷ್ಠರೋಗ, ಮತ್ತು ರಕ್ತಹೀನತೆಯಂತಹ ವಿವಿಧ ಆರೋಗ್ಯ ಸಮಸ್ಯೆಗಳಿಗೆ ತಪಾಸಣೆ ನಡೆಸಿ, ಅಗತ್ಯ ಚಿಕಿತ್ಸೆಯೊಂದಿಗೆ ಸಲಹೆ-ಸೂಚನೆಗಳನ್ನು ನೀಡಿದರು.
ಬಸವಗಂಗಾ ಮೆಡಿಕಲ್ಸ್ನ ರಮೇಶ ಲೋಹಾರ ಮತ್ತು ಜಿಪಂ ಮಾಜಿ ಸದಸ್ಯೆ ಪೂಜಾ ರಮೇಶ ಲೋಹಾರ ಅವರ ನೇತೃತ್ವದಲ್ಲಿ ನಡೆದ ಈ ಶಿಬಿರದಲ್ಲಿ ವೈದ್ಯರು, ಸಿಬ್ಬಂದಿ, ಮತ್ತು ಸಾಮಾಜಿಕ ಕಾರ್ಯಕರ್ತರು ಸಕ್ರಿಯವಾಗಿ ಭಾಗವಹಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಸಮಾಜದ ಬಡವರಿಗೆ ಮತ್ತು ಆರೋಗ್ಯ ಸೇವೆಯಿಂದ ವಂಚಿತರಿಗೆ ಉಚಿತ ಚಿಕಿತ್ಸೆ ಒದಗಿಸುವ ಈ ಉದಾತ್ತ ಕಾರ್ಯಕ್ರಮ ಸಾಮಾಜಿಕ ಸೇವೆಯ ಮಾದರಿಯಾಗಿ ಮೆಚ್ಚುಗೆಗೆ ಪಾತ್ರವಾಯಿತು.
ಈ ಶಿಬಿರವು ಸ್ಥಳೀಯ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆಯನ್ನು ತಲುಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದು, ಭವಿಷ್ಯದಲ್ಲಿಯೂ ಇಂತಹ ಕಾರ್ಯಕ್ರಮಗಳು ಮುಂದುವರಿಯಲಿವೆ ಎಂದು ಆಯೋಜಕರು ತಿಳಿಸಿದ್ದಾರೆ. ಬಂತೇ ಅಮರಜೋತಿ ಅವರು ಶಿಬಿರದ ಆಯೋಜಕರಿಗೆ ಸನ್ಮಾನಿಸಿ ಆಶೀರ್ವದಿಸಿದರು. ಮಹೇಶ ಈ. ಲೋಹಾರ, ಗಯಬುಸಾಬ ಈ ಸೇರಿದಂತೆ ವಿವಿಧ ಧರ್ಮದ ಧಾರ್ಮಿಕ ಗುರುಗಳು, ವೈದ್ಯರು, ಹೋರಾಟಗಾರರು ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Comments are closed.