ಆಳಂದ: ಸಿಯುಕೆಯಲ್ಲಿ ಆಚರಿಸಿದ ಬಸವ ಜಯಂತಿ ಸಮಾರಂಭವನ್ನು ಕುಲಸಚಿವ ಪ್ರೊ. ಆರ್.ಆರ್. ಬಿರಾದಾರ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಡಾ. ಗಣಪತಿ ಸಿನ್ನೂರ ಇತರರು ಇದ್ದರು.
ಆಳಂದ: ಜಗತ್ತಿಗೆ ಕಾಯಕವೇ ಕೈಲಾಸ, ದಾಸೋಹ, ಸಮಾನತೆ ಮತ್ತು ಭಾವೈಕ್ಯತೆ, ಭಕ್ತಿ, ಪ್ರಜಾಪ್ರಭುತ್ವದ ನಾಯಕತ್ವ, ತರ್ಕಬದ್ಧ ಚಿಂತನೆ, ನೀತಿ ಶಾಸ್ತ್ರ ಮತ್ತು ಅಹಿಂಸೆ ಬಸವೇಶ್ವರರ ಅಭಿವೃದ್ಧಿ ಮಾದರಿಯ ಪ್ರಮುಖ ತತ್ವಗಳಾಗಿವೆ. ಈ ತತ್ವಗಳನ್ನು ಅನುಸರಿಸುವುದು ವಿಕಸಿತ ಭಾರತವನ್ನು ಸಾಧಿಸಲು ಖಂಡಿತವಾಗಿಯೂ ಸಹಾಯ ಮಾಡುತ್ತದೆ ಎಂದು ಸಿಯುಕೆ ಕುಲಸಚಿವ ಪೆÇ್ರ. ಆರ್. ಆರ್. ಬಿರಾದಾರ್ ಅವರು ಹೇಳಿದರು.
ತಾಲೂಕಿನ ಕಡಗಂಚಿ ಬಳಿಯಿರುವ ಕರ್ನಾಟಕ ಕೇಂದ್ರೀಯ ವಿಶ್ವ ವಿದ್ಯಾಲಯದಲ್ಲಿ ಹಮ್ಮಿಕೊಂಡ ಮಹಾತ್ಮ ಬಸವೇಶ್ವರರ 892 ನೇ ಜನ್ಮ ದಿನಾಚರಣೆಯ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈ ನಾಡು, ದೇಶ ಕಂಡ ಅಪರೂಪದ ಸಾಮಾಜಿಕ ಮತ್ತು ಧಾರ್ಮಿಕ ಮಹಾನ್ ವ್ಯಕ್ತಿತ್ವದ ಬಸವೇಶ್ವರರಂತಹ ನಾಯಕರನ್ನು ವಿಚಾರಗಳಲ್ಲಿ ಎಲ್ಲ ಸಮಸ್ಯೆಗಳಿಗೆ ಉತ್ತರ ನೀಡನೀಡುತ್ತದೆ. ಇಂಥ ತತ್ವಗಳು ಅನುಸರಿಸಬೇಕು, ಏಕೆಂದರೆ ಇದು ಇಂದಿನ ಅಗತ್ಯವಾಗಿದೆ. ಇಂದಿನ ಸಮಾಜಗಳಲ್ಲಿನ ಸಂಸ್ಥೆಯಲ್ಲಿ ನಮ್ಮ ಕ್ರೂರ ಮನೋಭಾವದಿಂದಾಗಿ ಜನರಲ್ಲಿ ನಂಬಿಕೆಯ ಕೊರತೆಯಿದೆ, ಆದ್ದರಿಂದ ಸಂಸ್ಥೆಗಳು ಅನೇಕ ಸಮಸ್ಯೆಗಳಿಂದ ಬಳಲುತ್ತಿವೆ. ನಾವು ಶರಣರ ತತ್ವಗಳನ್ನು ಅನುಸರಿಸಬೇಕು ಮತ್ತು ನಿಜವಾದ ಮನುಷ್ಯರಾಗಲು ದಾರಿ ತೋರಿವೆ. ಈ ತತ್ವಗಳನ್ನು ಅಧ್ಯಯನ ಮಾಡಿ ಆಚರಣೆ ಸಾಮಾನ್ಯವಾಗಿ ನಡೆಯಬೇಕು ಎಂದು ಅವರು ಹೇಳಿದರು.
ಈ ಮೊದಲು ಸಿಯುಕೆ ಬಸವ ಪೀಠದ ಸಂಯೋಜಕ ಡಾ. ಗಣಪತಿ ಬಿ ಸಿನ್ನೂರ ಅವರು “ಅನುಭವ ಮಂಟಪ ಮತ್ತು ಮಹಾಮನೆ: ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರಗಳು” ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿ, “ಅನುಭವ ಮಂಟಪ ಮತ್ತು ಮಹಾಮನೆ ನಿಜರ್ಥದಲ್ಲಿ ಮಾನವ ಅಭಿವೃದ್ಧಿಯ ಕೇಂದ್ರಗಳಾಗಿದ್ದವು. “ಬಸವರೇಶ್ವರರು ಒಬ್ಬ ಮಹಾನ್ ಮಾನವತಾವಾದಿ ನಾಯಕರಾಗಿದ್ದರು ಮತ್ತು ಅವರು ಸಾಮಾನ್ಯ ಜನರನ್ನು ಅಸಾಧಾರಣ ಮನುಷ್ಯರನ್ನಾಗಿ ಪರಿವರ್ತಿಸಲು ಅನುಭವ ಮಂಟಪ ಮತ್ತು ಮಹಾಮನೆಯನ್ನು ಕಟ್ಟಿದರು. ಅμÁ್ಟವರಣ, ಪಂಚಾಚಾರ ಮತ್ತು ಷ್ಟಸ್ಥಲಗಳು ಶರಣರ ಮಾನವ ಅಭಿವೃದ್ಧಿಯ ಪಠ್ಯಪುಸ್ತಕಗಳಾಗಿದ್ದವು. ಜನರನ್ನು ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಿಸಲು ಈ ತತ್ವಗಳು ಇಂದಿನ ಸಂಘಟನೆಗೆ ಬಹಳ ಪ್ರಸ್ತುತವಾಗಿವೆ ಎಂದರು.
ಕಾರ್ಯಕ್ರಮ ಸಂಯೋಜಕ ಪೆÇ್ರ. ವೀರೇಶ ಕಸಬೇಗೌಡರ ಸ್ವಾಗತಿಸಿ ಪ್ರಾಸ್ತಾವಿಕ ಭಾಷಣ ಮಾಡಿದರು. ಡಾ. ಶೈಲಜಾ ಕೊನೆಕ್ ಕಾರ್ಯಕ್ರಮವನ್ನು ನಿರೂಪಿಸಿದರು, ಡಾ. ಸ್ವಪ್ನಿಲ್ ಚಾಪೇಕರ್ ಮತ್ತು ಸಂಗೀತ ಮತ್ತು ಲಲಿತಕಲಾ ವಿಭಾಗದ ವಿದ್ಯಾರ್ಥಿಗಳು ವಚನಗಳು ಮತ್ತು ರಾಷ್ಟ್ರಗೀತೆಯನ್ನು ಹಾಡಿದರು.
ಈ ಸಂದರ್ಭದಲ್ಲಿ ಹಣಕಾಸು ಅಧಿಕಾರಿ ಡಿ.ರಾಮದೊರೈ ಪೆÇ್ರ.ಚನ್ನವೀರ ಆರ್.ಎಂ., ಪೆÇ್ರ.ಬಸವರಾಜ ಡೋಣೂರು, ಪೆÇ್ರ.ವಿಕ್ರಂ ವಿಸಾಜಿ, ಪೆÇ್ರ.ಜಿ.ಆರ್.ಅಂಗಡಿ, ಪೆÇ್ರ.ಪವಿತ್ರಾ ಆಲೂರ್, ಪೆÇ್ರ.ಭೋಸ್ಲೆ, ಪೆÇ್ರ.ಕೆ.ಪದ್ಮಶ್ರೀ, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Comments are closed.