ಆಳಂದ: ತಾಲೂಕು ಆಡಳಿತಸೌಧನಲ್ಲಿ ನಡದ ಬಸವ ಜಯಂತಿ ಸಮಾರಂಭದಲ್ಲಿ ತಹಸೀಲ್ದಾರ ಅಣ್ಣಾರಾವ್ ಪಾಟೀಲ ಮಾತನಾಡಿದರು. ಶ್ರೀ ಸಿದ್ಧೇಶ್ವರ ಶಿವಾಚಾರ್ಯರು, ಪುರಸಭೆ ಅಧ್ಯಕ್ಷ ಫೀರದೋಸ ಅನ್ಸಾರಿ, ಉಪಾಧ್ಯಕ್ಷೆ ಕವಿತಾ ನಾಯಕ, ಇಒ ಮಾನಪ್ಪ ಕಟ್ಟಿಮನಿ, ಸಿಒ ಸಂಗಮೇಶ ಇದ್ದರು.
ಆಳಂದ: ಪಟ್ಟಣದ ಹೊರವಲಯದ ಸಂಗೋಳಗಿ ಪುನರವಸತಿ ಕೇಂದ್ರದಲ್ಲಿ ಆಚರಿಸಿದ ಬಸವ ಜಯಂತಿಯನ್ನು ಮಾಜಿ ಶಾಸಕ ಸುಭಾಷ ಗುತ್ತೇದಾರ ಉದ್ಘಾಟಿಸಿದರು. ಸಿದ್ಧುಗೌಡ ಪಾಟೀಲ ಹಿರೋಳಿ, ಶಿವುಪುತ್ರ ನಡಗೇರಿ, ಯುವ ಕಾರ್ಯಕರ್ತರು ಇದ್ದರು.
ಆಳಂದ: ಪಟ್ಟಣದ ಬಸ್ ನಿಲ್ದಾಣ ಮುಂದಿನ ಬಸವ ಚೌಕ್ನಲ್ಲಿ ಬಸವ ಜಯಂತಿ ನಿಮಿತ್ತ ಸಮಾಜ ಬಾಂಧವರು ಭಾವಚಿತ್ರಕ್ಕೆ ಪುಷ್ಪಾಚನೆ ನೆರವೇರಿಸಿದರು.
ಆಳಂದ: ಪಟ್ಟಣದಲ್ಲಿ ತಾಲೂಕು ಆಡಳಿತ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ವಿಶ್ವಗುರು ಬಸವಣ್ಣನವರ ಜಯಂತಿ ಅಂಗವಾಗಿ ಹಲವಡೆ ಜಾತ್ರೆ ಪಲ್ಲಕ್ಕಿ ಉತ್ಸವ ರಥೋತ್ಸವ ಮತ್ತು ಬಸವ ಜಯಂತಿ ಕಾರ್ಯಕ್ರಮಗಳು ಸಡಗರ ಸಂಭ್ರಮದ ಮಧ್ಯ ಎಲ್ಲಡೆ ಅದ್ಧೂರಿಯಾಗಿ ಜರುಗಿದವು.
ಪಟ್ಟಣದಲ್ಲಿ ಬೆಳಗಿನ ಜಾವ ವೀರಶೈವ ಲಿಂಗಾಯತ್ ಭವನದಲ್ಲಿನ ಅಶ್ವರೂಢ ಬಸವೇಶ್ವರ ಪ್ರತಿಮೆಗೆ ಸಮಾಜ ಅಧ್ಯಕ್ಷ ಶರಣು ಪಾಟೀಲ, ಕೆ.ಎಂಎಫ್ ಅಧ್ಯಕ್ಷ ಆರ್.ಕೆ. ಪಾಟೀಲ, ಸಮಾಜ ಉಪಾಧ್ಯಕ್ಷ ಸಿದ್ಧುಗೌಡ ಮಗ್ಗಿ, ಶ್ರೀಶೈಲ ಖಜೂರಿ, ಕಾರ್ಯದರ್ಶ ಕಲ್ಲಪ್ಪ ಹತ್ತರಕಿ, ಪಂಚಮಸಾಲಿ ಸಮಾಜ ಅಧ್ಯಕ್ಷ ಆನಂದ ದೇಶಮುಖ, ಜಯಂತಿ ಸಮಿತಿ ಅಧ್ಯಕ್ಷ ಬಾಬಾಸಾಹೇಬ ವಿ.ಪಾಟೀಲ ಸೇರಿದಂತೆ ಹಿರಿಯರು ಮತ್ತು ಯುವಕರು ಪುಷ್ರ್ಪಾನೆ ನೆರವೇರಿಸಿದರು.
ಬಳಿಕ ಬಸ್ ನಿಲ್ದಾಣ ಬಳಿ ಈ ಮುಖಂಡರು ಭಾವಚಿತ್ರಕ್ಕೆ ಪೂಜೆ ನೆರವೇರಿಸಿದರು, ಕೆಎಂಎಫ್ ಅಧ್ಯಕ್ಷ ಆರ್.ಕೆ.ಪಾಟೀಲ, ಪುರಸಭೆ ಅಧ್ಯಕ್ಷ ಫಿರದೋಸ್ಗೌಡ ಅನ್ಸಾರಿ, ಉಪಾಧ್ಯಕ್ಷೆ ಕವಿತಾ ಎಸ್. ನಾಯಕ, ಮುಖ್ಯಾಧಿಕಾರಿ ಸಂಗಮೇಶ ಪನಶೆಟ್ಟಿ, ಹಿರಿಯ ಮುಖಂಡ ಮಲ್ಲಪ್ಪ ಹತ್ತರಕಿ, ಬಾಬುರಾವ್ ಮಡ್ಡೆ, ಶಂಕರರಾವ್ ಹತ್ತಿ, ಸಂಜಯ ಮಿಸ್ಕಿನ್, ಮಹಾನಿಂಗಪ್ಪ ಜಮಾದಾರ, ಶಿವುಕುಮಾರ ವಾಲೆ, ಸಮಾಜದ ಕಾರ್ಯಕರ್ತರು ಭಾಗವಹಸಿದ್ದರು.
ತಾಲೂಕು ಆಡಳಿತಸೌಧನಲ್ಲಿ ಬಸವೇಶ್ವರ ಭಾವಚಿತ್ರಕ್ಕೆ ತಹಸೀಲ್ದಾರ ಅಣ್ಣಾರಾವ್ ಪಾಟೀಲ ಪೂಜೆ ನೆರವೇರಿಸಿದರು. ಸಮಾಜ ಕಾರ್ಯಕರ್ತರು, ಮುಖಂಡರು, ಅಧಿಕಾರಿಗಳು ಭಾಗವಹಿಸಿದ್ದರು.
ಬಳಿಕ ಸಭಾಂಗಣದಲ್ಲಿ ನಡೆದ ಸಮಾರಂಭದ ಸಾನ್ನಿಧ್ಯವಹಿಸಿದ್ದ ಸ್ಥಳೀಯ ಸಂಸ್ಥಾನ ಹಿರೇಮಠದ ಶ್ರೀ ಸಿದ್ಧೇಶ್ವರ ಶಿವಾಚಾರ್ಯರು, ತಹಸೀಲ್ದಾರ ಅಣ್ಣಾರಾವ್ ಪಾಟೀಲ, ಉಪನ್ಯಾಸ ನೀಡದ ನೆಲ್ಲೂರ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಗಜಾನಂದ ಕುಂಬಾರ ಮತ್ತಿತರು ಬಸವೇಶ್ವರ ಜೀವನ ಸಾಧನೆ ಕುರಿತು ಇಂದಿನ ಸಮಾಜಕ್ಕೆ ಪ್ರಸ್ತುತತೆ ಕುರಿತು ಮಾತನಾಡಿದರು.
ಪುರಸಭೆ ಅಧ್ಯಕ್ಷ ಫಿರದೋಸ್ ಅನ್ಸಾರಿ, ಉಪಾಧ್ಯಕ್ಷೆ ಕವಿತಾ ಎಸ್. ನಾಯಕ, ತಾಪಂ ಇಒ ಮಾನಪ್ಪ ಕಟ್ಟಿಮನಿ, ಮುಖ್ಯಾಧಿಕಾರಿ ಸಂಗಮೇಶ ಪನಶೆಟ್ಟಿ, ಸಮಾಜ ಅಧ್ಯಕ್ಷ ಶರಣಬಸಪ್ಪ ಪಾಟೀಲ, ಕಾರ್ಯದರ್ಶಿ ಕಲ್ಲಪ್ಪ ಹತ್ತರಕಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ನಾಗರಿಕರು ಪಾಲ್ಗೊಂಡಿದ್ದರು.
ಅಲ್ಲದೆ, ತಾಲೂಕಿನ ಸಾಲೇಗಾಂವದಲ್ಲಿ ಬಸವೇಶ್ವರ ಜಾತ್ರೆ ನಿಮಿತ್ತ ಪ್ರಮುಖ ರಸ್ತೆಗಳಲ್ಲ ಪಲ್ಲಕ್ಕಿ ಉತ್ಸವ ಹಾಗೂ ಸಂಜೆ ರಥೋತ್ಸವ ಅಗ್ನಿ ಹಾಯುವ ಕಾರ್ಯಕ್ರಮ ರಾತ್ರಿ ಧಾರ್ಮಿಕ ಕಾರ್ಯಕ್ರಮ ನಡೆಯಿತು.
ಕಿಣ್ಣಿಸುಲ್ತಾನ ಗ್ರಾಮದಲ್ಲಿ ಬಸವ ಜಯಂತಿ ಪ್ರಯುಕ್ತ ರಥೋತ್ಸವ ನಡೆಯಿತು. ಮುನ್ನೊಹಳ್ಳಿ ಗ್ರಾಮದಲ್ಲಿ ಶರಣ ಗಜೇಶಮಸಣ್ಣನವರ ಜಾತ್ರಾ ಮಹೋತ್ಸವ ನಿಮಿತ್ತ ಪಲ್ಲಕ್ಕಿ ಉತ್ಸವ ಹಾಗೂ ರಥೋತ್ಸವ ಕಾರ್ಯಕ್ರಮ ನಡೆಯಿತು.
ಸಂಗೋಳಗಿ ಪುನರವಸತಿ ಕೇಂದ್ರದಲ್ಲಿ ಬಸವ ಜಯಂತಿ ನಿಮಿತ್ತ ನಡೆದ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಸುಭಾಷ ಗುತ್ತೇದಾರ ಉದ್ಘಾಟಿಸಿದರು. ಪುರಸಭೆ ಸದಸ್ಯ ಶಿವುಪುತ್ರ ನಡಗೇರಿ, ಸಿದ್ಧುಗೌಡ ಪಾಟೀಲ ಹಿರೋಳಿ ಸೇರಿದಂತೆ ಸ್ಥಳೀಯ ಬಸವಾಭಿಮಾನಿ ಕಾರ್ಯಕರ್ತರು ಉಪಸ್ಥಿತರಿದ್ದರು.
ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿನ ಸರ್ಕಾರಿ ಕಚೇರಿ ಮತ್ತು ಸಂಘ ಸಂಸ್ಥೆಗಳಲ್ಲಿ ಬಸವ ಜಯಂತಿ ಆಚರಿಸಲಾಯಿತು.
Comments are closed.