ಆಳಂದ: ತಡಕಲ್ ಗ್ರಾಮದಲ್ಲಿ ಅಶ್ವರೂಢ ಬಸವೇಶ್ವರ ಪ್ರತಿಮೆಯನ್ನು ಮಾದನಹಿಪ್ಪರಗಾ ಶ್ರೀ ಅಭಿನವ ಶಿವಲಿಂಗ ಮಹಾಸ್ವಾಮಿಗಳು ಮಾಜಿ ಶಾಸಕ ಸುಭಾಷ ಗುತ್ತೇದಾರ, ಸಿದ್ಧಮಲ್ಲ ಶಿವಾಚಾರ್ಯರು ಲೋಕಾರ್ಪಣೆ ಕೈಗೊಂಡರು. ಶಿವುಪುತ್ರ ಬೆಳ್ಳೆ ಇತರರು ಇದ್ದರು.
ಆಳಂದ: ತಾಲೂಕಿನ ತಡಕಲ್ ಗ್ರಾಮದಲ್ಲಿ ಬಸವ ಜಯಂತಿಯನ್ನು ಬುಧವಾರದಂದು ವಿಜೃಂಭಣೆಯಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮದ ರಾಜ್ಯ ಹೆದ್ದಾರಿಯ ಚೌಕದಲ್ಲಿ 11 ಅಡಿ ಎತ್ತರದ ಅಶ್ವಾರೂಢ ಬಸವೇಶ್ವರ ಶಿಲಾ ಪ್ರತಿಮೆಯನ್ನು ಮಾದನಹಿಪ್ಪರಗ ಶಿವಲಿಂಗೇಶ್ವರ ವಿರಕ್ತಮಠದ ಶ್ರೀ ಅಭಿನವ ಶಿವಲಿಂಗ ಮಹಾಸ್ವಾಮಿಗಳು ಪ್ರತಿಮೆಯ ದಾನಿಗಳಾದ ಮಾಜಿ ಶಾಸಕ ಸುಭಾμï ಗುತ್ತೇದಾರ್ ಮತ್ತು ಗ್ರಾಮದಲ್ಲಿನ ಮಠದ ಶ್ರೀ ಸಿದ್ಧಮಲ್ಲ ಶಿವಾಚಾರ್ಯರು ಸೇರಿ ಲೋಕಾರ್ಪಣೆಗೊಳಿಸಿದರು.
ಲೋಕಾರ್ಪಣೆಯ ನಂತರ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಶ್ರೀ ಶಿವಲಿಂಗ ಮಹಾಸ್ವಾಮಿಗಳು, “ಬಸವಣ್ಣನವರು ಸಮಾಜದ ಎಲ್ಲ ಜಾತಿಯ ಶರಣರನ್ನು ಮತ್ತು ಬಾಂಧವರನ್ನು ಮುಖ್ಯವಾಹಿನಿಗೆ ತಂದವರು. ಅಂಬಿಗರ ಚೌಡಯ್ಯ, ಮಾದರ ಚೆನ್ನಯ್ಯ, ಗಾಣದ ಕಣ್ಣಪ್ಪ, ಸಕಲೇಶ ಮಾದರಸ, ಹಡಪದ ಅಪ್ಪಣ್ಣ, ಡೋಹರ ಕಕ್ಕಯ್ಯ, ಆಯ್ದಕ್ಕಿ ಲಕ್ಕಮ್ಮ, ಉರಿಲಿಂಗ ಪೆದ್ದಿ ಮುಂತಾದ ಶರಣರಿಗೆ ವೇದಿಕೆ ಕಲ್ಪಿಸಿದವರು ಬಸವಣ್ಣನವರೇ. ಶಿವಾಜಿ ಮಹಾರಾಜ, ಶ್ರೀರಾಮಚಂದ್ರ ಮತ್ತು ಇತರ ಮಹಾತ್ಮರು ನಮಗೆ ಆದರ್ಶವಾದರೂ, ವಿಶ್ವಗುರು ಬಸವಣ್ಣನವರಿಗೆ ಪ್ರಥಮ ಆದ್ಯತೆ ನೀಡಬೇಕು. ಅವರು ವೀರಶೈವ-ಲಿಂಗಾಯತ ಸಮಾಜಕ್ಕೆ ಸಂಸ್ಕಾರ, ಧರ್ಮ ಮತ್ತು ಸಂಸ್ಕøತಿಯ ತಳಪಾಯವನ್ನು ಹಾಕಿದವರು,” ಎಂದು ಹೇಳಿದರು.
“12ನೇ ಶತಮಾನದಲ್ಲಿ ಬಸವಣ್ಣನವರು ಕಾಯಕ, ದಾಸೋಹ ಮತ್ತು ಸಮಾನತೆಯ ತತ್ವಗಳನ್ನು ಬೋಧಿಸಿದರು. ಸಂವಿಧಾನಕ್ಕೂ ಮುನ್ನವೇ ಸರ್ವರೂ ಸಮಾನರು ಎಂಬ ದಿವ್ಯ ಸಂದೇಶವನ್ನು ನೀಡಿದವರು ಬಸವಣ್ಣ. ಇತ್ತೀಚೆಗೆ ರಾಜ್ಯ ಸರ್ಕಾರ ಬಿಡುಗಡೆ ಮಾಡಿದ ಜಾತಿ ಜನಗಣತಿಯಲ್ಲಿ ವೀರಶೈವ-ಲಿಂಗಾಯತ ಸಮುದಾಯದ ವೈವಿಧ್ಯತೆ ಗೋಚರಿಸುತ್ತದೆ. ಗಾಣಿಗ, ಪಂಚಮಿ, ಜಂಗಮ, ಕುರುಬ, ನೇಕಾರ ಮುಂತಾದವರನ್ನು ಒಂದುಗೂಡಿಸಿದ ಬಸವಣ್ಣನವರ ಆದರ್ಶಗಳನ್ನು ಎಂದಿಗೂ ಮರೆಯಬಾರದು,” ಎಂದರು.
ಮಾಜಿ ಶಾಸಕ ಸುಭಾμï ಗುತ್ತೇದಾರ್ ಮಾತನಾಡಿ, “ಬಸವಕಲ್ಯಾಣದಲ್ಲಿ ರಾಜನ ಕೈಯಲ್ಲಿ ಮಂತ್ರಿಯಾಗಿದ್ದ ಬಸವಣ್ಣನವರು, ಸಮಾಜ ಸುಧಾರಣೆಗಾಗಿ ಅಲ್ಲಮ ಪ್ರಭುವನ್ನು ಶೂನ್ಯ ಪೀಠದ ಅಧ್ಯಕ್ಷರನ್ನಾಗಿ ನೇಮಿಸಿದರು. ಅವರ ವಚನಗಳು ಕರ್ನಾಟಕ, ಮಹಾರಾಷ್ಟ್ರ, ಭಾರತ ಮಾತ್ರವಲ್ಲದೆ, ಇಂಗ್ಲೆಂಡ್ ಸೇರಿದಂತೆ ವಿಶ್ವದಾದ್ಯಂತ ಜಾತ್ಯತೀತ ಸಮಾಜದ ಸಂದೇಶವನ್ನು ಸಾರಿವೆ. ಬಸವಣ್ಣನವರ ಮಹಾನ್ ಕಾರ್ಯವು ಸಮಾಜ ಸುಧಾರಣೆಗೆ ಮಾದರಿಯಾಗಿದೆ,” ಎಂದು ತಿಳಿಸಿದರು.
ಪ್ರತಿಮೆ ಸ್ಥಾಪನೆ ಸಮಿತಿ ಅಧ್ಯಕ್ಷ ವಿಜಯಕುಮಾರ ಮಹೇಶ ಬೆಳ್ಳೆ ಮಾತನಾಡಿ, ಗ್ರಾಮದಲ್ಲಿ ಬಸವ ಗುರುವಿನ ಪ್ರತಿಮೆ ಸ್ಥಾಪನೆಯ ಬೇಡಿಕೆಯನ್ನು ಈಗ ಮಾಜಿ ಶಾಸಕ ಸುಭಾಷ ಗುತ್ತೇದಾರ ಅವರ ಸಹಾಯದಿಂದ ಈಡೇರಿದೆ, ಬಸವಣ್ಣಣವರ ತತ್ವಾಚರಣೆಯಲ್ಲಿ ಸಾಗೋಣಾ ಎಂದರು.
ಗ್ರಾಮದ ಸಿದ್ಧಮಲ್ಲ ಶಿವಾಚಾರ್ಯರು ಸಮಾರಂಭದ ಸಾನ್ನಿಧ್ಯ ವಹಿಸಿದ್ದರು.
ಸಮಿತಿಯ ಕಾರ್ಯದರ್ಶಿ ಗಣೇಶ ಕೆ. ನಾಮಣೆ, ಸೋಮನಾಥ ನಿಂಗಶೆಟ್ಟಿ, ವೈಜನಾಥ ಬಿ. ಶಿರೋಳೆ, ಮಲ್ಲಿಕಾರ್ಜುನ ಹುಂಡೇಕಾರ, ಗ್ರಾಪಂ ಮಾಜಿ ಅಧ್ಯಕ್ಷ ಶಿವುಪುತ್ರ ಬೆಳ್ಳೆ, ಬಾಬುಗೌಡ ಶುಕ್ರವಾಡಿ, ಮುನ್ನೊಹಳ್ಳಿಯ ಭೀಮಾಶಂಕರ ಶೀರೂರೆ, ಅರುಣಕುಮಾರ ಹುಂಡೇಕಾರ, ಕಣ್ಮಸ್ದ ಸೂರ್ಯಕಾಂತ ಕಾಳೆ, ಶ್ರೀಮಂತ ನಾಮಣೆ, ಶರಣ ರಾಜೇಂದ್ರ ಗುಂಡೆ, ತಿಪ್ಪಯ್ಯಾ ಗುತ್ತೇದಾರ, ಕಲ್ಯಾಣಿ ತುಕಾಣೆ, ವಿಎಸ್ಎಸ್ಎಸ್ ಅಧ್ಯಕ್ಷ ದೇವಿಂದ್ರ ಕಾಂದೆ, ಸಿದ್ಧರಾಮ ಪೊಲೀಸ್ಬಿರಾದಾರ, ಚಂದ್ರಕಾಂತ ಶಿರೋಳೆ, ಅನಿಲ ಜಮಾದಾರ, ಯಲ್ಲಪ್ಪ ಬಿ. ಪೂಜಾರಿ, ಸಚೀನ ಗುಗರೆ, ಸಂತೋಷ ಹೂಗಾರ, ಪುರಸಭೆ ಸದಸ್ಯ ಶಿವುಪುತ್ರ ನಡಗೇರಿ ಕಾರ್ಯಕ್ರಮದಲ್ಲಿ ಗ್ರಾಮಸ್ಥರು, ಭಕ್ತರು ಹಾಗೂ ವಿವಿಧ ಸಮುದಾಯದ ನಾಯಕರು ಭಾಗವಹಿಸಿ, ಬಸವಣ್ಣನವರ ಆದರ್ಶಗಳನ್ನು ಸ್ಮರಿಸಿದರು.
ಪಿಡಿಒ ಗೋವಿಂದ ಹುಸೇನಖಾನ್ ನಿರೂಪಿಸಿದರು. ತಿಪ್ಪಯ್ಯಾ ಗುತ್ತೇದಾರ ವಂದಿಸಿದರು.
Comments are closed.