Shubhashaya News

467 ತೆರೆದ ಬಾವಿಗಳ ಕಾಮಗಾರಿ ಅಕ್ರಮ ಬಯಲು:  ಹಾಳತಡಕಲ್ ಪಿಡಿಒ ರಾಚಣ್ಣಗೌಡ ಅಮಾನತು 

ಆಳಂದ: ತಾಲೂಕಿನ ಹಾಳತಡಕಲ್ ಗ್ರಾಮ ಪಂಚಾಯಿತಿಯಲ್ಲಿ ಮನರೇಗಾ (ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ) ಅಡಿಯಲ್ಲಿ ನಡೆದ ತೆರೆದ ಬಾವಿ ಕಾಮಗಾರಿಯಲ್ಲಿ ಗಂಭೀರ ಅಕ್ರಮಗಳು ಬೆಳಕಿಗೆ ಬಂದಿವೆ.

ಈ ಪ್ರಕರಣದಲ್ಲಿ ಗ್ರಾಮ ಪಂಚಾಯಿತಿಯ ಪ್ರಭಾರಿ ಅಭಿವೃದ್ಧಿ ಅಧಿಕಾರಿ (Pಆಔ) ರಾಚಣ್ಣಗೌಡ ಅವರನ್ನು ಜಿಲ್ಲಾ ಪಂಚಾಯತ್ ಸಿಇಒ ಭಂವರಸಿಂಗ್ ಮೀನಾ ಅಮಾನತುಗೊಳಿಸಿದ್ದಾರೆ. ಅಲ್ಲದೆ, ಅಕ್ರಮದಿಂದ ಸರ್ಕಾರಕ್ಕೆ ಉಂಟಾದ ರೂ. 1,01,757 ನಷ್ಟವನ್ನು ಭರಿಸುವಂತೆ ಸೂಚಿಸಿದ್ದಾರೆ.

ಅಕ್ರಮದ ಹಿನ್ನೆಲೆ: ಮಾಜಿ ಶಾಸಕ ಸುಭಾಷ ಗುತ್ತೇದಾರ ಮತ್ತು ಜಿಪಂ ಮಾಜಿ ಉಪಾಧ್ಯಕ್ಷ ಹμರ್Áನಂದ ಎಸ್. ಗುತ್ತೇದಾರ, ಆಳಂದ ತಾಲೂಕಿನ 467 ತೆರೆದ ಬಾವಿಗಳ ಕಾಮಗಾರಿಯಲ್ಲಿ ವ್ಯಾಪಕ ಭ್ರμÁ್ಟಚಾರ ನಡೆದಿದೆ ಎಂದು ಆರೋಪಿಸಿದ್ದರು. ಈ ದೂರಿನ ಆಧಾರದ ಮೇಲೆ ಜಿಲ್ಲಾ ಪಂಚಾಯತ್ ಸಿಇಒ ಚಿತ್ತಾಪೂರ ಮತ್ತು ಅಫಜಲಪೂರ ತಾಲೂಕಿನ ಅಧಿಕಾರಿಗಳ ತಂಡವನ್ನು ಪರಿಶೀಲನೆಗೆ ನೇಮಿಸಿತ್ತು. ತಂಡದ ವರದಿಯಲ್ಲಿ ಮನರೇಗಾ ಮಾರ್ಗಸೂಚಿಗಳ ಉಲ್ಲಂಘನೆ, ಸರ್ಕಾರಿ ಖಜಾನೆಗೆ ಹಾನಿ, ಮತ್ತು ಸುಳ್ಳು ದಾಖಲೆಗಳ ಸೃಷ್ಟಿಯ ವಿವರಗಳು ಬಯಲಾಗಿವೆ.

ಬೆಳಕಿಗೆ ಬಂದ ಅವ್ಯವಹಾರಗಳು: ಸರ್ವೆ ಸಂಖ್ಯೆ ದೋಷ ಹಾಳತಡಕಲ್ ಗ್ರಾಮದ ಸರ್ವೆ ನಂ. 122ರಲ್ಲಿ ಕಾಮಗಾರಿ ನಡೆಸಬೇಕಿದ್ದರೂ, ಸರ್ವೆ ನಂ. 123ರಲ್ಲಿ ಕಾಮಗಾರಿ ನಡೆಸಲಾಗಿದೆ. ಇದರಿಂದ ರೂ. 79,911 ಹೆಚ್ಚುವರಿ ಕೂಲಿ ಮೊತ್ತ ಪಾವತಿಯಾಗಿದೆ.

ನಸೀರವಾಡಿಯಲ್ಲಿ ಬಬ್ರುವಾಹನ ಪಾಟೀಲರ ಹೊಲದಲ್ಲಿ ತೆರೆದ ಬಾವಿ ಕಾಮಗಾರಿಯಲ್ಲಿ ಭೌತಿಕ ಕಾಮಗಾರಿಗಿಂತ ರೂ. 21,846 ಹೆಚ್ಚುವರಿ ಕೂಲಿ ಪಾವತಿಯಾಗಿದೆ.

ಸುಳ್ಳು ಜಾಬ್ ಕಾರ್ಡ್‍ಗಳು: ವಿದೇಶದಲ್ಲಿರುವ ವ್ಯಕ್ತಿಗಳು, ಮಹಾರಾಷ್ಟ್ರದ ವಿದ್ಯಾರ್ಥಿಗಳು, ಕಾಲೇಜು ವಿದ್ಯಾರ್ಥಿಗಳು, ಮತ್ತು ಕಂಪನಿಗಳಲ್ಲಿ ಕೆಲಸ ಮಾಡುವವರ ಹೆಸರನ್ನು ಕೂಲಿಕಾರರೆಂದು ಸೇರಿಸಿ ಸುಳ್ಳು ಜಾಬ್ ಕಾರ್ಡ್‍ಗಳನ್ನು ಸೃಷ್ಟಿಸಲಾಗಿದೆ. ನಸೀರವಾಡಿಯಲ್ಲಿ 128 ಜಾಬ್ ಕಾರ್ಡ್‍ಗಳು ಒಬ್ಬರೇ ಸದಸ್ಯರ ಹೆಸರಿನಲ್ಲಿದ್ದು, ಮಾರ್ಗಸೂಚಿಗಳನ್ನು ಉಲ್ಲಂಘಿಸಲಾಗಿದೆ. ಹಾಳತಡಕಲ್ ಗ್ರಾಮದಲ್ಲಿ ಮರಣ ಹೊಂದಿದ ಫಲಾನುಭವಿಯ ಹೆಸರಿನಲ್ಲಿ ಕಾಮಗಾರಿಗೆ ಅನುಮೋದನೆ ಪಡೆದು ಅನುμÁ್ಠನಗೊಳಿಸಲಾಗಿದೆ. ಮನರೇಗಾ ಕಾಮಗಾರಿಯಲ್ಲಿ ಜೆಸಿಬಿ ಮತ್ತು ಇತರ ಯಂತ್ರಗಳನ್ನು ಬಳಸಿ ನಿಯಮ ಉಲ್ಲಂಘಿಸಿದ್ದ ಬೆಳಕಿಗೆ ಬಂದಿದೆ.

ಕೈಗೊಂಡ ಕ್ರಮಗಳು: ಪಿಡಿಒ ರಾಚಣ್ಣಗೌಡ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಅವರಿಂದ ಒಟ್ಟು ರೂ. 1,01,757 (ರೂ. 79,911 + ರೂ. 21,846) ವಸೂಲಿಗೆ ಆದೇಶಿಸಲಾಗಿದೆ.

ಪ್ರಕರಣದ ವ್ಯಾಪಿ:

ಈ ಅಕ್ರಮಗಳು ಕೇವಲ ಹಾಳತಡಕಲ್‍ನಲ್ಲಿ ಮಾತ್ರವಲ್ಲದೆ, ಕಡಗಂಚಿ ಮತ್ತು ಮಾದನಹಿಪ್ಪರಗಾ ಗ್ರಾಮ ಪಂಚಾಯಿತಿ ಸೇರಿ ಹಲವೆಡೆಗಳಲ್ಲೂ ಬೆಳಕಿಗೆ ಬಂದಿವೆ. ತಾಲೂಕಿನ 467 ತೆರೆದ ಬಾವಿಗಳ ಕಾಮಗಾರಿಯಲ್ಲಿ ಒಟ್ಟು ಬಹುತೇಕ ಎಲ್ಲ ಕಾಮಗಾರಿಗಳಲ್ಲಿ ಭ್ರμÁ್ಟಚಾರದ ಆರೋಪಗಳಿವೆ. ಈ ಘಟನೆಯಿಂದ ಮನರೇಗಾ ಯೋಜನೆಯ ವಿಶ್ವಾಸಾರ್ಹತೆಯೇ ಪ್ರಶ್ನೆಗೆ ಒಳಗಾಗಿದೆ.

ಕಾಮಗಾರಿ ತಡೆಗೆ ಒತ್ತಾಯ: ಮಾಜಿ ಶಾಶಕ ಸುಭಾಷ ಗುತ್ತೇದಾರ, ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ನಡೆಯುತ್ತಿರುವ ತೆರೆದ ಬಾವಿ ಕಾಮಗಾರಿಗಳನ್ನು ತಡೆಯಬೇಕು ಮತ್ತು ಹಣ ಪಾವತಿಯನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ. ಒಪ್ಪದಿದ್ದರೆ ಸಾವಿರಾರು ಕೂಲಿಕಾರರೊಂದಿಗೆ ಜಿಲ್ಲಾ ಪಂಚಾಯತ್ ಕಚೇರಿ ಮುಂದೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ಸುಭಾಷ ಗುತ್ತೇದಾರರು, ಈ ರೀತಿಯ ಲೂಟಿಯನ್ನು ತಡೆಗಟ್ಟಲು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಅಕ್ರಮದಲ್ಲಿ ಭಾಗಿಯಾದ ಎಲ್ಲಾ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಮತ್ತು ಕಾಮಗಾರಿಗಳ ಸಂಪೂರ್ಣ ತನಿಖೆಗೆ ಒತ್ತಾಯಿಸಿದ್ದಾರೆ.

Comments are closed.

Don`t copy text!