ಆಳಂದ: ಮಾದನಹಿಪ್ಪರಗಾ ಶ್ರೀ ಶಿವಲಿಂಗೇಶ್ವರ ಮಠದಿಂದ ನೀಡುವ ಸಾಸಿರ ನಾಡಿನ ಸಾಧಕ ಪ್ರಶಸ್ತಿಗೆ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್. ಢಗೆ ಅವರನ್ನು ಆಯ್ಕೆ ಮಾಡಿದ ಬಗ್ಗೆ ಶ್ರೀಮಠದ ಆಮಂತ್ರಣ ನೀಡಲಾಯಿತು.
ಆಳಂದ: ತಾಲೂಕಿನ ಮಾದನಹಿಪ್ಪರಗಿಯ ಶ್ರೀಶಿವಲಿಂಗೇಶ್ವರ ವಿರಕ್ತ ಮಠದಿಂದ ಪ್ರತಿವರ್ಷ ನೀಡುವ ಸಾಸಿರನಾಡಿನ ಸಾಧಕ ಪ್ರಶಸ್ತಿಗೆ ಈ ಬಾರಿ ತಾಲೂಕಿನ ಖಜೂರಿ ಗ್ರಾಮದವರು ಹಾಗೂ ಕಲಬುರಗಿ ನಗರ ಪೋಲಿಸ್ ಆಯುಕ್ತರಾದ ಡಾ. ಶರಣಪ್ಪ ಢಗೆ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಶ್ರೀಮಠ ಪ್ರಕಟಣೆ ತಿಳಿಸಿದೆ.
ಶ್ರೀಮಠದ ಶ್ರೀ ಅಭಿನವ ಶಿವಲಿಂಗ ಮಹಾಸ್ವಾಮಿಗಳವರ ನೇತೃತ್ವದಲ್ಲಿ, ಪ್ರತಿ ವರ್ಷವು ಈ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ. ಅಧಿಕೃತವಾಗಿ ಪತ್ರ ನೀಡಿ ಶ್ರೀಮಠ ವತಿಯಿಂದ ನೀಡಲಾಗುವ ಪ್ರಶಸ್ತಿಯನ್ನು ವರ್ಷದ ಸಾಸಿರ ನಾಡಿನ ಸಾಧಕ ಪ್ರಶಸ್ತಿ ಸ್ವೀಕರಿಸಲು ಶ್ರೀಮಠದಿಂದ ಆಮಂತ್ರಣವನ್ನು ನೀಡಲಾಯಿತು ಶ್ರೀಮಠದ ಭಕ್ತಾದಿಗಳ ಪರ ಪ್ರಮುಖರು ಆಯುಕ್ತರ ಕಚೇರಿಯಲ್ಲಿ ಆಮಂತ್ರಣ ನೀಡಿದರು.
ಈ ಸಂದರ್ಭದಲ್ಲಿ ಶರಣು ಅರಳಿಮಾರ, ನಾಗನಾಥ ಕಾವಳೆ, ಬಸವರಾಜ ಅರಳಿಮಾರ ಸಂತೋಷಕುಮಾರ ಸ್ವಾಮಿ ಇದ್ದರು.
ಶ್ರೀಗಳ ಸ್ಪಷ್ಟನೆ:
ಶ್ರೀ ಮಠದಿಂದ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಕಳೆದ ನಾಲ್ಕು ವರ್ಷದಿಂದ ಈ ಸಾಸಿರ ನಾಡಿನ ಸಾಧಕ ಪ್ರಶಸ್ತಿ ನೀಡಲಾಗುತ್ತಿದೆ. ಈ ಬಾರಿ ನಮ್ಮ ತಾಲೂಕಿನವರು ಹಾಗೂ ಕಲಬುರಗಿ ನಗರ ಪೋಲಿಸ್ ಆಯುಕ್ತರಾದ ಡಾ,ಶರಣಪ್ಪ ಢಗೆ ಅವರನ್ನು ಆಯ್ಕೆ ಮಾಡಲಾಗಿದೆ. ಅವರು ಬಡತನದಲ್ಲಿ ಓದಿ ಐಪಿಎಸ್ ಪಾಸು ಮಾಡಿ ರಾಜ್ಯದ ವಿವಿಧ ಕಡೆ ಉತ್ತಮ ಕೆಲಸ ಮಾಡಿ ಹೆಸರು ಮಾಡಿದ್ದಾರೆ, ನಮ್ಮ ಭಾಗದವರು ಉನ್ನತ ಸಾಧನೆಯನ್ನು ಮಾಡಿ ತಾಲೂಕಿಗೆ ಹೆಮ್ಮೆ ಹಾಗೂ ಮಾದರಿ ಆಗಿದ್ದಾರೆ ಅವರ ಸಾಧನೆ ಗುರುತಿಸಿ ಅವರಿಗೆ ಪ್ರಶಸ್ತಿ ಪತ್ರ ನಾಮಫಲಕ 15 ಸಾವಿರ ನೀಡಿ ಗೌರವಿಸಲಾಗುತ್ತಿದೆ. ಜಾತ್ರೆಯ ಸಮಯದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ,
ಶ್ರೀಅಭಿನವ ಶಿವಲಿಂಗ ಮಹಾಸ್ವಾಮಿಗಳು
ಶಿವಲಿಂಗೇಶ್ವರ ವಿರಕ್ತಮಠ ಮಾದನUಹಿಪ್ಪರಗಿ
Comments are closed.