ಆಳಂದ: ತಾಪಂ ಸಭಾಂಗಣದಲ್ಲಿ ನಡೆದ ಗ್ರಾಪಂ ಅಧಿಕಾರಿಗಳ ಸಭೆಯಲ್ಲಿ ಜಿಪಂ ಸಿಇಒ ಭಂವರಸಿಂಗ್ ಮೀನಾ ಮಾತನಾಡಿದರು, ಇಒ ಮಾನಪ್ಪ ಕಟ್ಟಿಮನಿ ಇತರರು ಇದ್ದರು.
ಆಳಂದ: ಮುನ್ನಹಳ್ಳಿ ಗ್ರಾಮದಲ್ಲಿ ನರೇಗಾದಡಿ ಕೈಗೊಂಡ ಮಾದರಿ ತೆರೆದ ಬಾವಿಯನ್ನು ಜಿಪಂ ಸಿಇಒ ವೀಕ್ಷಿಸಿದರು.
ಆಳಂದ: ಹೋದಲೂರ ಗ್ರಾಮಕ್ಕೆ ಭೇಟಿ ನೀಡಿದ ಸಿಇಒ ಭಂವರಸಿಂಗ್ ಮೀನಾ ಅವರು ಸಮಸ್ಯೆ ಆಲಿಸಿದರು. ಇಒ ಮಾನಪ್ಪ ಕಟ್ಟಿಮನಿ ಇತರರು ಇದ್ದರು.
ಆಳಂದ: ಪ್ರತಿ ಗ್ರಾಪಂನಲ್ಲಿ ಪ್ರತಿದಿನ ಕನಿಷ್ಟ ಸಾವಿರ ಜನರಿಗೆ ಕೆಲಸಕೊಡಬೇಕು. ಹಿಂದೇಟು ಹಾಕುವ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ ಮೇಲೆ ಮೂಲಾಜಿಲ್ಲದೆ ಶಿಸ್ತು ಕ್ರಮಜರುಗಿಸಲಾಗುವುದು ಎಂದು ಜಿಲ್ಲಾ ಪಂಚಾಯತ್ ಸಿಇಒ ಭಂವರಸಿಂಗ್ ಮೀನಾ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಾಲೂಕಿನ ವಿವಿಧ ಗ್ರಾಮಗಳಲ್ಲಿನ ಬೇಸಿಗೆ ನೀರಿನ ಸಮಸ್ಯೆ ನಿರ್ವಹಣೆ ಹಾಗೂ ಉದ್ಯೋಗ ಖಾತ್ರಿ ಕಾಮಗಾರಿ ಪರಿಶೀಲಿಸಿದ ಬಳಿಕ ಪಟ್ಟಣದ ತಾಪಂ ಕಚೇರಿಯಲ್ಲಿ ಕರೆದ ಗ್ರಾಪಂ ಅಧಿಕಾರಿಗಳ ಮತ್ತು ಸಿಬ್ಬಂದಿಗಳ ಸಭೆಯಲ್ಲಿ ಅವರು ಮಾತನಾಡಿ ತಾಕೀತು ಮಾಡಿದರು.
ತಾಪಂ ಇಒ ಮಾನಪ್ಪ ಕಟ್ಟಿಮನಿ ಅವರು ಗ್ರಾಪಂಗಳ ವರದಿ ಮಂಡಿಸಿ ಮಂಗಳವಾರ ತಾಲೂಕಿನ ವಿವಿಧ ಗ್ರಾಪಂಗಳಲ್ಲಿ 16 ಸಾವಿರ ಕಾರ್ಮಿಕರು ಕೆಲಸ ನಿರ್ವಹಿಸಿದ್ದಾರೆ. ಒಟ್ಟು 25 ಸಾವಿರ ಕಾರ್ಮಿಕರಿಗೆ ಕೆಲಸ ನೀಡುವುದು, ಅಲ್ಲದೆ ಜೂನ್ 2ರವರೆಗೆ ಮಳೆ ಬರುವ ತನಕ ಕಾಮಗಾರಿ ನೀಡುವ ಗುರಿ ಹೊಂದಲಾಗಿದೆ ಎಂದು ಸಭೆಯಲ್ಲಿ ಸಿಇಒ ಅವರ ಗಮನಕ್ಕೆ ತಂದು, ಪ್ರತಿದಿನ 25 ಸಾವಿರ ಕೆಲಸ ಕೊಡುವ ಗುರಿಯನ್ನು ವಾರದಲ್ಲಿ ತಲುಪಲಾಗುವುದು ಎಂದು ಭರವಸೆ ನೀಡಿದರು.
ಬೇಸಿಗೆ ಮುಗಿಯುವತನ ಪ್ರತಿದಿನ ಪ್ರತಿ ಗ್ರಾಪಂನಲ್ಲಿ ಸಾವಿರ ಜನಕ್ಕೆ ಉದ್ಯೋಗ ಖಾತ್ರಿಯಡಿ ಕೆಲಸ ಕೊಡಲೇ ಬೇಕು ಇಲ್ಲವಾದಲ್ಲಿ ಕ್ರಮ ಜರುಗಿಸಲಾಗುವುದು ಎಂದು ಸಭೆಯಲ್ಲಿದ್ದ ಪಿಡಿಒಗಳಿಗೆ ಅವರು ತಾಕೀತು ಮಾಡಿದರು.
ನೀರಿಲ್ಲದಕ್ಕೆ ಖಾಸಗಿ ನೀರು ತೆಗೆದುಕೊಂಡವರ ಹಣ ಪಾವತಿಗೆ ವಿಳಂಬವಾದರೆ ಸಂಬಂಧಿತ ಗ್ರಾಪಂ ಅಭಿವೃದ್ಧಿ ಅಧಿಕಾರಿಯ ಮೇಲೆ ಕ್ರಮ ಜರುಗಿಸಲಾಗುವುದು ತಕ್ಷಣಕ್ಕೆ ನೀರು ಕೊಟ್ಟವರಿಗೆ ಹಣ ಪಾವತಿಸಬೇಕು. ಅಲ್ಲದೆ, ಜನತೆಗೆ ಕುಡಿಯಲು ಶುದ್ಧ ನೀರು ಕೊಡಬೇಕು. ಪಂಪ್ ಆಪರೇಟರ್ಗಳಿಗೆ ನೀಡಿದ ನೀಡಿದ ಕಿಟ್ಗಳ ಮೂಲಕ ಪ್ರತಿ ವಾರಕೊಮ್ಮೆ ನೀರಿನ ಮಟ್ಟವನ್ನು ಪರಿಶೀಲಿಸಿ ಪೂರೈಸಬೇಕು. ಬೇಸಿಗೆ ನೀರಿನ ಪ್ರಮಾಣ ಕಡಿಮೆಯಾದ ಬಗ್ಗೆ ಶುದ್ಧ ನೀರಿನ ಬಗ್ಗೆ ಮಾಹಿತಿ ನೀಡಬೇಕು. ನೀರು ಕುಡಿಯಲು ಯೋಗ್ಯವಾಗದಿದ್ದಲ್ಲಿ ಜನರಿಗೆ ನೀರು ಕುಡಿಯದಂತೆ ನಾಮಫಲಕ ಹಾಕಬೇಕು ಎಂದು ಹೇಳೀದ ಅವರು, ಪೂರೈಕೆಯ ಎಲ್ಲಾ ನೀರಿನ ಮೂಲಗಳನ್ನು ಕಾಲಕಾಲಕ್ಕೆ ಸ್ವಚ್ಛತೆ ಕೈಗೊಳ್ಳಿ, ನೀರು ಸೋರಿಕೆಯಾಗದಂತೆ ನೋಡಿಕೊಂಡು ನೀರು ಮಿತವಾಗಿ ಬಳಕೆ ಮುಂದಾಗಬೇಕು ಎಂದು ಅವರು ಎಚ್ಚರಿಸಿದರು.
ಜಿಪಂ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಭಂವರಸಿಂಗ್ ಮೀನಾ ಅವರು ಪ್ರಧಾನಮಂತ್ರಿ ಸುರಕ್ಷಾ ಭೀಮಾ ಯೋಜನೆಯ ಕುರಿತು ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕೆಂದು ಸಲಹೆ ನೀಡಿದರು.
18 ರಿಂದ 50 ವರ್ಷ ಮತ್ತು 18 ರಿಂದ 60 ವರ್ಷದೊಳಗಿನವರು ಈ ಯೋಜನೆಯ ಲಾಭ ಪಡೆಯಬಹುದೆಂದು. ಈ ಪಾಲಿಸಿಗೆ ಸರ್ಕಾರಿ ನೌಕರರು, ಕೂಲಿ ಕಾರ್ಮಿಕರು, ರೈತರು ಸೇರಿದಂತೆ ಸಮಾಜದ ಎಲ್ಲಾ ವರ್ಗದವರು ಅರ್ಹರಾಗಿದ್ದಾರೆ ಎಂದು ಹೇಳಿದರು.
ಪಾಲಿಸಿಯ ಲಾಭ ಪಡೆಯಲು ಖಾತೆದಾರರು ಪ್ರತಿ ವರ್ಷ ಮೇ ತಿಂಗಳಲ್ಲಿ ತಮ್ಮ ಬ್ಯಾಂಕ್ ಖಾತೆಯಲ್ಲಿ ಕನಿಷ್ಟ 500 ರೂಪಾಯಿ ಜಮಾ ಮಾಡಿಕೊಂಡಿರಬೇಕು. ಇದರೊಂದಿಗೆ 20 ರೂಪಾಯಿ ಅಥವಾ 400 ರೂಪಾಯಿ ಮೌಲ್ಯದ ಎರಡು ವಿಭಿನ್ನ ಪಾಲಿಸಿಗಳನ್ನು ಆರಿಸಬಹುದಾಗಿದೆ. ಈ ಮೊತ್ತವು ಖಾತೆಯಿಂದ ನೇರವಾಗಿ ಕಡಿತವಾಗುತ್ತದೆ. ಪಾಲಿಸಿದಾರರಿಗೆ ಯಾವುದೇ ಅವಘಡ ಅಥವಾ ಅಪಘಾತ ಸಂಭವಿಸಿದರೆ, 24 ಗಂಟೆಗಳ ಒಳಗೆ ವಿಮಾ ಮೊತ್ತವನ್ನು ಪರಿಹಾರವಾಗಿ ನೀಡಲಾಗುತ್ತದೆ ಎಂಬ ಆಶ್ವಾಸನವನ್ನು ದೊರೆಯುತ್ತದೆ. ಈ ಯೋಜನೆಯ ಬಗ್ಗೆ ಜನರಲ್ಲಿ ಅರಿವು ಹೆಚ್ಚಿಸಲು, ಏಪ್ರಿಲ್ 23ರಿಂದ 25ರವರೆಗೆ ಮೂರು ದಿನಗಳ ಮೇಘಾ ಅಭಿಯಾನ ಹಮ್ಮಿಕೊಳ್ಳಲಾಗುತ್ತದೆ. ಈ ಅಭಿಯಾನದ ಭಾಗವಾಗಿ, ಗ್ರಾಮ ಪಂಚಾಯತ್ನಿಂದ ಡೊಂಗರು ಹಾಗೂ ಕಸ ಸಂಗ್ರಹದ ವಾಹನಗಳ ಮೂಲಕ ಪ್ರತಿ ಗ್ರಾಮದಲ್ಲೂ ಘೋಷಣೆಗಳು, ಮಾಧ್ಯಮ ಜಾಗೃತಿ ಕಾರ್ಯಕ್ರಮಗಳು ನಡೆಸಬೇಕು ಹಾಗೂ ಸಮಾಜದ ಎಲ್ಲ ವರ್ಗದವರು ಈ ಯೋಜನೆಯ ಉಪಯೋಗ ಪಡೆಯುವಂತೆ ಬ್ಯಾಂಕ್ಗಳು ಸಹ ಜವಾಬ್ದಾರಿ ಯಿಂದ ತಾವು ಮಾಡುವ ಕಾರ್ಯಗಳಲ್ಲಿ ಜನ ಜಾಗೃತಿ ಮೂಡಿಸಬೇಕು ಎಂದು ಸಿಇಒ ಭಂವರಸಿಂಗ್ ಮೀನಾ ಹೇಳಿದರು.
ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಮಾನಪ್ಪ ಕಟ್ಟಿಮನಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಶ್ರೀ ಸಂಗಮೇಶ ಬಿರಾದಾರ್ ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ), ಗ್ರಾಮ ಪಂಚಾಯತಿಗಳ ಪಿಡಿಓ, ಮತ್ತು ಸಿಬ್ಬಂದಿ ಹಾಜರಿದ್ದರು.
ಮುನ್ನೊಹಳ್ಳಿ ಗ್ರಾಮದಲ್ಲಿ ನರೇಗಾದಲ್ಲಿ ರೈತರೊಬ್ಬರು ಕೈಗೊಂಡ ಮಾದರಿ ತೆರೆದ ಬಾವಿಯ ಕಾಮಗಾರಿಯಾಗಿದೆ. ನಾಲ್ಕು ಲಕ್ಷ ರೂಪಾಯಿ ಉದ್ಯೋಗ ಖಾತ್ರಿ ಕಾಮಗಾರಿಯಲ್ಲಿ ರೈತ ಉಳಿದ ಐದು ಲಕ್ಷ ರೂಪಾಯಿ ಭರಿಸಿ ಒಟ್ಟು 9ಲಕ್ಷ ವೆಚ್ಚದಲ್ಲಿ ಉತ್ತಮ ಭಾವಿ ನಿರ್ಮಾಣ ಕಾರ್ಯವನ್ನು ವೀಕ್ಷಿಸಿದ ಸಿಇಒ ಭಂವರಸಿಂಗ್ ಮೀನಾ ಮೆಚ್ಚಿಗೆ ವ್ಯಕ್ತಪಡಿಸಿದರು. ಪಿಡಿಒ ನಾಗೇಶಮೂರ್ತಿ ವಿವರಣೆ ನೀಡಿದರು. ಜಮೀನು ತಳಮಟ್ಟದಿಂದ ಬಾವಿಗೆ ಸಿಮೆಂಟ್ ಪರದಿ ಮಾಡಿದ್ದು ಶ್ಲಾಘೀಸಿದರು.
ಹೋದಲೂರ ಗ್ರಾಮದಲ್ಲಿ ನೀರಿನ ಸಮಸ್ಯೆ ಖಾಸಗಿ ನೀರು ಖರೀದಿಯನ್ನು ವೀಕ್ಷಿಸಿದರು. ನೀರು ಕೊಟ್ಟವರಿಗೆ ತಕ್ಷಣಕ್ಕೆ ಹಣ ಪಾವತಿಸಬೇಕು ಎಂದು ಪಿಡಿಒಗೆ ಸಿಇಒ ತಾಕೀತು ಮಾಡಿದರು.
Comments are closed.