Shubhashaya News

ಸಿಯುಕೆಯಲ್ಲಿ ಅಂತರರಾಷ್ಟ್ರೀಯ ಕಾನೂನಿನ ಕುರಿತು ಒಂದು ವಾರದ ಆನ್‍ಲೈನ್ ಅಂತರರಾಷ್ಟ್ರೀಯ ಅಧ್ಯಾಪಕರ ಅಭಿವೃದ್ಧಿ ಕಾರ್ಯಗಾರ ಆಯೋಜನೆ

ಆಳಂದ: ಸಿಯುಕೆಯಿಂದ ಅಂತರರಾಷ್ಟ್ರೀಯ ಕಾನೂನಿನ ಬಹುಶಿಸ್ತೀಯ ಅಂಶಗಳು” ಆನ್‍ಲೈನ್‍ನಲ್ಲಿ ಅಧ್ಯಾಪಕರ ಅಭಿವೃದ್ಧಿ ಕಾರ್ಯಗಾರದಲ್ಲಿ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಅವರು, ಮಾರಿಷಸ್‍ನ ತಂತ್ರಜ್ಞಾನ ವಿವಿ ಭಾವನಾ ಮಹಾದೇವ ಮತ್ತು ಸಿಯುಕೆ ಬಸವರಾಜ ಕಬಕಡ್ಡಿ ಸೇರಿ ಇತರ ಪ್ರಾಧ್ಯಾಪಕರನ್ನು ಉದ್ದೇಶಿಸಿ ಮಾತನಾಡಿದರು.

ಆಳಂದ: “ದುರ್ಬಲ ದೇಶಗಳ ಶೋಷಣೆಯನ್ನು ತಡೆಗಟ್ಟಲು, ಹವಾಮಾನ ಬದಲಾವಣೆಯ ಸಮಸ್ಯೆಗಳನ್ನು ಪರಿಹರಿಸಲು, ಪ್ರತಿಯೊಂದು ದೇಶದ ಜವಾಬ್ದಾರಿಗಳನ್ನು ಗುರುತಿಸಲು ಮತ್ತು ಗಡಿಯಾಚೆಗಿನ ವಿವಾದಗಳನ್ನು ಪರಿಹರಿಸಲು ಅಂತರರಾಷ್ಟ್ರೀಯ ಕಾನೂನುಗಳು ಬಹಳ ಮುಖ್ಯ” ಎಂದು ಸಿಯುಕೆಯ ಕುಲಪತಿ ಪೆÇ್ರ. ಬಟ್ಟು ಸತ್ಯನಾರಾಯಣ ಹೇಳಿದರು. ತಾಲೂಕಿನ ಕಡಗಂಚಿ ಬಳಿಯ ಸಿಯುಕೆಯ ಕಾನೂನು ವಿಭಾಗ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ ಮಾರಿಷಸ್ (ಯುಟಿಎಂ)   ವ್ಯವಹಾರ ನಿರ್ವಹಣೆ ಮತ್ತು ಕಾನೂನು ವಿಭಾಗವು ಜಂಟಿಯಾಗಿ ಆಯೋಜಿಸಿದ್ದ “ಅಂತರರಾಷ್ಟ್ರೀಯ ಕಾನೂನಿನ ಬಹುಶಿಸ್ತೀಯ ಅಂಶಗಳು” ಕುರಿತು ಒಂದು ವಾರದ ಅಂತರಜಾಲ ಅಧ್ಯಾಪಕರ ಅಭಿವೃದ್ಧಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.

“ಇಂತಹ ಅಧ್ಯಾಪಕರ ಅಭಿವೃದ್ಧಿ ಕಾರ್ಯಗಾರಗಳು ಜಾಗತಿಕ ಸವಾಲುಗಳನ್ನು ನಿರ್ವಹಿಸಲು ಮತ್ತು ಭಾರತ ಮತ್ತು ಮಾರಿಷಸ್ ನಡುವಿನ ಶೈಕ್ಷಣಿಕ ಸಹಯೋಗವನ್ನು ಬಲಪಡಿಸಲು ಸಹಾಯ ಮಾಡುತ್ತದೆ” ಎಂದು ಮಾರಿಷಸ್‍ನ ತಂತ್ರಜ್ಞಾನ ವಿಶ್ವವಿದ್ಯಾಲಯದ ಡಾ. ಭಾವನಾ ಮಹಾದೇವ್ ಹೇಳಿದರು.

ತಂತ್ರಜ್ಞಾನ ವಿಶ್ವವಿದ್ಯಾಲಯದ ವ್ಯವಹಾರ, ನಿರ್ವಹಣೆ ಮತ್ತು ಹಣಕಾಸು ನಿಕಾಯದ ಡೀನ್ ಡಾ. ಬಿಸಮ್ ನವತ್ ಸಿಂಗ್, “ಕಾನೂನು ಸಾಕ್ಷರತೆ, ಮಾರಿಷಸ್‍ನಂತಹ ದ್ವೀಪ ಆರ್ಥಿಕತೆಗಳಲ್ಲಿ ಆರ್ಥಿಕ ಸ್ಥಿರತೆ ಮತ್ತು ಭವಿಷ್ಯದ ಸಹಯೋಗದ ಸಂಶೋಧನಾ ಯೋಜನೆಗಳ ಸಾಮಥ್ರ್ಯಕ್ಕೆ ಅಧ್ಯಾಪಕರ ಅಭಿವೃದ್ಧಿ ಕಾರ್ಯಗಾರಗಳು ಬಹಳ ಪ್ರಸ್ತುತವಾಗಿದೆ” ಎಂದು ಹೇಳಿದರು.

ಮಾರಿಷಸ್‍ನ ತಂತ್ರಜ್ಞಾನ ವಿಶ್ವವಿದ್ಯಾಲಯದ ಗೌರವಾನ್ವಿತ ಮಹಾನಿರ್ದೇಶಕ ದಿನೇಶ್ ಕೆ ಹುರ್ರೀರಾಮ್ ಮಾತನಾಡಿ “ಈ ಕಾರ್ಯಗಾರವು ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಕಾನೂನು, ಆರ್ಥಿಕ ಕಾನೂನು ಮತ್ತು ಪರಿಸರ ಕಾನೂನಿನಂತಹ ಅಂತರರಾಷ್ಟ್ರೀಯ ಕಾನೂನಿನ ಪ್ರಮುಖ ಕ್ಷೇತ್ರಗಳ ಕುರಿತು ಶಿಕ್ಷಕರಿಗೆ ವಿಸ್ತೃತ ಜ್ಞಾನ ನಿಡಲಿದೆ. ಸುಮಾರು 475 ಶಿಕ್ಷಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ಅತೀವ ಸಂತೋಷವಾಗಿದೆ” ಎಂದು ಹೇಳಿದರು. ಸಿಯುಕೆಯ ಕಾನೂನು ಅಧ್ಯಯನ ನಿಕಾಯದ ಡೀನ್ ಡಾ. ಬಸವರಾಜ್ ಕುಬಕಡ್ಡಿ ಎಲ್ಲರನ್ನು ಸ್ವಾಗತಿಸಿದರು. ಡಾ. ಜಯಂತ ಬೊರುವಾ ವಂದಿಸಿದರು.

Comments are closed.

Don`t copy text!