Shubhashaya News

ನಾಗಸಾಧುಗಳ ಶಿವತಾಂಡವ, ಮರುಕಳುಸಿದ ಪ್ರಯಾಗರಾಜ್ ಕುಂಭ

ಗಡಿನಾಡಿನ ಖಜೂರಿಯ ಶ್ರೀ ಕೊರಣೇಶ್ವರ 92ನೇ ಮಹಾರಥೋತ್ಸವ ಸಂಭ್ರಮ

ಆಳಂದ: ಖಜೂರಿ ಗ್ರಾಮಸ್ಥರÀ ಆರಾಧ್ಯದೈವ ಶ್ರೀ ಕೋರಣೇಶ್ವರ ಜಾತ್ರಾ ಮಹೋತ್ಸವ ಮೆರವಣಿಗೆಯಲ್ಲಿ ನಾಗಾ ಸಾಧುಗಳ ಧಾರ್ಮಿಕ ನೃತ್ಯ ಗಮನ ಸೆಳೆಯಿತು.

??????????

ಆಳಂದ: ಖಜೂರಿ ಕೋರಣೇಶ್ವರ ಪಲ್ಲಕ್ಕಿ ಉತ್ಸವದಲ್ಲಿ ನಾಗಾಸಾಧುವೊಬ್ಬರು ಹಣೆಯಿಂದ ಬೆಂಕ್ವಿಯ ಜ್ವಾಲೆಯನ್ನು ಹರಿಸಿದರು.

 

ಆಳಂದ: ಆಕರ್ಶಕವಾಗಿ ನಡೆದ ನಾಗಾಸಾಧುಗಳ ಶಿವತಾಂಡ

 

ಆಳಂದ: ಖಜೂರಿ ಕೋರಣೇಶ್ವರರ ಮಲ್ಲಕ್ಕಿಯೊಂದಿಗೆ ನೂತನ ಪ್ರತಿಮೆಯನ್ನು ಮೆರವಣಿಗೆಯಲ್ಲಿ ಭಕ್ತಾದಿಗಳು ದರ್ಶಣ ಪಡೆದರು.

ಆಳಂದ: ತಾಲೂಕಿನ ಖಜೂರಿಯ ಶ್ರೀ ಕೊರಣೇಶ್ವರ ಜಾತ್ರಾ ಮಹೋತ್ಸವ ಹಾಗೂ 92ನೇ ಮಹಾರಥೋತ್ಸವವು ಅಪೂರ್ವ ಸಡಗರ-ಸಂಭ್ರಮದೊಂದಿಗೆ ಅದ್ದೂರಿಯಾಗಿ ಜರುಗಿತು.
ಕೋರಣೇಶ್ವರ ದೇವಸ್ಥಾನ ಟ್ರಸ್ಟ್ ಕಮೀಟಿ ಹಾಗೂ ಗ್ರಾಮಸ್ಥರ ಮುಂದಾಳತ್ವದಲ್ಲಿ ಏಪ್ರಿಲ್ 21ರಿಂದ 28ರವರೆಗೆ ನಡೆದ ಈ ಸಾಂಸ್ಕøತಿಕ ಮತ್ತು ಧಾರ್ಮಿಕ ಉತ್ಸವವು ನಾಗಸಾಧುಗಳ ಶಿವ ತಾಂಡಾವ ಸೇರಿ ಹಲವು ಭಂಗಿಯ ನೃತ್ಯ, ಗೊಂಬೆ ಕುಣಿತ, ವಿವಿಧ ಕಲಾ ಪ್ರದರ್ಶನಗಳು ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಗಳೊಂದಿಗೆ ಸಾವಿರಾರು ಭಕ್ತಾದಿಗಳನ್ನು ಸೆಳೆಯಿತು.
ಪ್ರಯಾಗ್‍ರಾಜ್ ಕುಂಭಮೇಳದ ವೈಭವವನ್ನು ಮರುಕಳಿಸುವಂತೆ ರೂಪುಗೊಂಡ ಈ ಜಾತ್ರೆಯು ಸಾಂಸ್ಕೃತಿಕ ಸಂಪ್ರದಾಯದ ಜೊತೆಗೆ ಧಾರ್ಮಿಕ ಭಕ್ತಿಯ ಸಮಾಗಮವಾಗಿತ್ತು.
ಜಾತ್ರೆಯ ವೈಶಿಷ್ಟ್ಯ: ಪ್ರಯಾಗ್‍ರಾಜ್ ಕುಂಭಮೇಳದ ಪ್ರತಿಬಿಂಬ:
ಶ್ರೀ ಕೊರಣೇಶ್ವರ ಜಾತ್ರಾ ಮಹೋತ್ಸವದ 92ನೇ ಮಹಾರಥೋತ್ಸವಕ್ಕೆ ಈ ಬಾರಿ ವಿಶೇಷವಾಗಿ ಪ್ರಯಾಗ್‍ರಾಜ್ ಕುಂಭಮೇಳದಿಂದ ಆಗಮಿಸಿದ ನಾಗಸಾಧುಗಳು ಹಾಗೂ ಸಾಧಕೀಯರು ತಮ್ಮ ಅದ್ಭುತ ಕಲಾ ಪ್ರಸ್ತುತಿಗಳಿಂದ ಭಕ್ತರನ್ನು ಮಂತ್ರಮುಗ್ಧರನ್ನಾಗಿಸಿದರು. ಭಸ್ಮದಿಂದ ಅಲಂಕೃತ ದೇಹ, ಜಟಾಜೂಟ ಮತ್ತು ರುದ್ರಾಕ್ಷದ ಮಾಲೆಗಳಿಂದ ನಾಗಸಾಧುಗಳು ಶಿವ ತಾಂಡವ ನೃತ್ಯವನ್ನು ಪ್ರಸ್ತುತಪಡಿಸಿದರು. ಡಮರುಗ, ತಮಟೆ, ಶಂಖ ನಾದಗಳ ನಡುವೆ ಶಿವನ ಸೃಷ್ಟಿ-ಸ್ಥಿತಿ-ಸಂಹಾರದ ತತ್ತ್ವವನ್ನು ತೋರಿಸಿದ ಈ ನೃತ್ಯವು ದೈವಿಕ ಶಕ್ತಿಯ ನೇರ ಅನುಭವವನ್ನು ಭಕ್ತರಿಗೆ ನೀಡಿತು.
ನಾಗಾ ಸಾಧಕೀಯರು ಶಾರೀರಿಕ ಶಕ್ತಿಯ ಮೆರವಣಿಗೆಯಲ್ಲಿ ಅಗ್ನಿ ಪ್ರಯೋಗ, ತ್ರಿಶೂಲ ಕಸರತ್ತು ಹಾಗೂ ಶಕ್ತಿ ಆವಾಹನೆ ಮೊದಲಾದ ಕಲೆಗಳನ್ನು ಪ್ರದರ್ಶಿಸಿದರು. ಉರಿಯುವ ಬೆಂಕಿಯಲ್ಲಿ ನಡೆದು, ಧ್ಯಾನದಲ್ಲಿ ತೇಲಿ, ಶಕ್ತಿಯನ್ನೆ ತೋರಿಸಿದ ಈ ಪ್ರದರ್ಶನಗಳು ಭಕ್ತರಲ್ಲಿ ಭಕ್ತಿಭಾವನೆ ಮತ್ತು ಅಚ್ಚರಿ ಹುಟ್ಟಿಸಿದವು.
ಸಾಂಪ್ರದಾಯಿಕ ವಾದ್ಯಗಳು, ಭಸ್ಮಾಲಂಕೃತ ಸಾಧುಗಳು ರುದ್ರಾಕ್ಷದ ಮಾಲೆ ಮತ್ತು ಜಟಾಜೂಟದೊಂದಿಗೆ ತಂಗಾಳಿ ಬೀಸಿದಂತೆ ಕಾಣಿಸುತ್ತಿದ್ದರು. ಡಮರುಗ, ಶಂಖ, ನಾದಸ್ವರದ ಸಾಂಪ್ರದಾಯಿಕ ಧ್ವನಿಯ ಮಧ್ಯೆ ಅವರ ನೃತ್ಯಗಳು ಆಧ್ಯಾತ್ಮಿಕ ವಾತಾವರಣವನ್ನು ಸೃಷ್ಟಿಸಿದವು. ಈ ಕಲಾ ಪ್ರದರ್ಶನಗಳು ಕೇವಲ ಮನೋರಂಜನೆ ಅಲ್ಲದೆ, ಯೋಗ ಮತ್ತು ತಪಸ್ಸಿನಿಂದ ದೊರಕುವ ಆಂತರಿಕ ಶಕ್ತಿಯ ಪ್ರತಿಬಿಂಬವಾಗಿಯೂ ಭಾಸವಾಯಿತು. ಖಜೂರಿಯ ಜಾತ್ರೆಯಲ್ಲಿ ಕುಂಭಮೇಳದ ವೈಭವವನ್ನು ಈ ಬಾರಿ ಟ್ರಸ್ಟ್ ಕಮೀಟಿ ಅನುಭವಿಸುವ ಅವಕಾಶ ಜನತೆಗೆ ದೊರಕಿಸಿದ್ದು ಮೆಚ್ಚಿಗೆಗೆ ಪಾತ್ರವಾಯಿತು.
ಜಾತ್ರೆಯ ಕಾರ್ಯಕ್ರಮಗಳು: ಭಾನುವಾರ ಬೆಳಗಿನ ಜಾವ ಶ್ರೀ ಕೊರಣೇಶ್ವರ ದೇವರ ಪೂಜೆಯೊಂದಿಗೆ ಆರಂಭವಾಯಿತು. ಏಳು ದಿನಗಳ ಕಾಲ ಸಪ್ತ ಪೂರೈಸಿ, ಪ್ರತಿದಿನ ರಾತ್ರಿ 8:00 ಗಂಟೆಗೆ ಭಜನೆ ಮತ್ತು ಕೀರ್ತನೆ ಕಾರ್ಯಕ್ರಮಗಳು ನಡೆದವು.
ಶನಿವಾರ ಸಂಜೆಯ ವೇಳೆಗೆ ಶ್ರೀ ಕೊರಣೇಶ್ವರ ಮೂರ್ತಿ ಹಾಗೂ ನಂದಿ ಕೋಲದ ಮಹಾಪೂಜೆ ನಡೆಯಿತು.
ಭಾನುವಾರ ಬೆಳಗಿನ ಜಾವದಲ್ಲಿ ಕೊರಣೇಶ್ವರ ದೇವರ ಕರ್ತೃ ಗದ್ದಿಗೆಗೆ ಮಹಾರುದ್ರಾಭಿμÉೀಕ ಮತ್ತು ರಥಕ್ಕೆ ಕಳಸಾರೋಹಣ ನಡೆಯಿತು. ನಂತರ, ಭಕ್ತರ ಮಧ್ಯೆ ಅಗ್ನಿಹಾಯುವ ಕಾರ್ಯಕ್ರಮವು ರೋಮಾಂಚಕ ಕ್ಷಣವಾಗಿತ್ತು. ಸಂಜೆ 92ನೇ ಮಹಾರಥೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ವೈಭವದಿಂದ ಜರುಗಿತು.
ರಾತ್ರಿ: ಧಾರವಾಡ ಆಕಾಶವಾಣಿ ಕಲಾವಿದೆ ಲಕ್ಷ್ಮೀಬಾಯಿ ಬಾಳಗೇರೆ ಹಾಗೂ ಬಸವರಾಜ್ ಮದುವೆಯವರಿಂದ ಗೀಗೀಪದಗಳ ನಡೆಯಿತು. ಏ.28: ಮಧ್ಯಾಹ್ನ ಜಂಗಿ ಪೈಲ್ವಾನರ ಕುಸ್ತಿ ಕೂಟವು 111ರೂಗಳಿಂದ ಆರಂಭಗೊಂಡು 15000 ಸಾವಿರ ವರೆಗೆ ಕಡೆಕುಸ್ತಿ ವಿಜೇತರಿಗೆ ಬಹುಮಾನ ವಿತರಣೆ ಬಳಿಕ ಲಕ್ಷದೀಪೆÇೀತ್ಸವವು ಗೀ ಗೀ ಪದಗಳು ನಡೆಯಲಿದೆ ಎಂದು ಟ್ರಸ್ಟ್‍ಕಮೀಟಿ ಪ್ರಮುಖರು ತಿಳಿಸಿದ್ದಾರೆ.

Comments are closed.

Don`t copy text!