Shubhashaya News

ಸರಸಂಬಾದಲ್ಲಿ ಸಿಡಿಲಿಗೆ ಎತ್ತು ಬಲಿ: ರೈತನಿಗೆ ಆರ್ಥಿಕ ಸಂಕಷ್ಟ 

ಆಳಂದ: ಸರಸಂಬಾ ರೈತ ಶಿವರಾಯ ಬುಕ್ಕಾ ಅವರಿಗೆ ಸೇರಿದ ಎತ್ತು ಸಿಡಿಲು ಬಡಿದು ಮೃತಪಟ್ಟಿದ್ದು ಪಶು ಇಲಾಖೆಯ ಅಧಿಕಾರಿ ಡಾ. ಮಹಾಂತೇಶ ಪಾಟೀಲ ಪರಿಶೀಲಿಸಿದರು.

 

 

ಆಳಂದ: ತಾಲೂಕಿನ ಸರಸಂಬಾ ಗ್ರಾಮದ ರೈತ ಶಿವರಾಯ ಬುಕ್ಕಾ ಅವರ ಒಂದು ಎತ್ತು ಸಂಜೆ ಶುಕ್ರವಾರ ಸಿಡಿಲು ಬಡಿದು ಮೃತಪಟ್ಟ ಘಟನೆ ವರದಿಯಾಗಿದೆ.

ಸುಮಾರು 80,000 ರೂಪಾಯಿ ಬೆಲೆಯ ಈ ಎತ್ತಿನ ನಷ್ಟದಿಂದ ರೈತನಿಗೆ ಭಾರೀ ಆರ್ಥಿಕ ಹೊಡೆತವಾಗಿದೆ. ಮಳೆಗಾಲ ಪ್ರಾರಂಭವಾಗುವ ಸಂದರ್ಭದಲ್ಲಿ ಎತ್ತುಗಳಿಲ್ಲದೆ ಉಳುಮೆ ಕಾರ್ಯ ಕಷ್ಟಕರವಾಗಿದ್ದು, ಶಿವರಾಯ ಬುಕ್ಕಾ ಅವರಿಗೆ ದಿಕ್ಕೇ ತೋಚದ ಸ್ಥಿತಿ ಉಂಟಾಗಿದೆ.

ಈ ಘಟನೆಯ ಬಗ್ಗೆ ಸರಸಂಬಾ ವಲಯದ ಪಶುವೈದ್ಯ  ಮಹಾಂತೇಶ್ ಪಾಟೀಲ್ ಭೇಟಿ ನೀಡಿ, ಪ್ರಾಥಮಿಕ ವರದಿಯನ್ನು ಸಂಬಂಧಿತ ಇಲಾಖೆಗೆ ಸಲ್ಲಿಸಿದ್ದಾರೆ. ಜೊತೆಗೆ, ಪೆÇಲೀಸರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿ, ತಾಲೂಕು ಆಡಳಿತಕ್ಕೆ ವರದಿ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಗ್ರಾಮಸ್ತರಾದ ಶಿವಕುಮಾರ್ ಭಕರೇ, ಅಂಭರೀಶ್ ಪಾಟೀಲ್ ಮತ್ತು ರೈತ ಶಿವರಾಯ ಬುಕ್ಕಾ ಉಪಸ್ಥಿತರಿದ್ದರು.

Comments are closed.

Don`t copy text!