ಆಳಂದ: ಹಳೆಯ ದ್ವೇಷದಿಂದಾಗಿ ತಾಲೂಕಿನ ಮಾದನಹಿಪ್ಪರಗಾ ಪೊಲೀಸ್ ಠಾಣೆ ವ್ಯಾಪ್ತಿಯ ಝಳಕಿ ಕೆ. ಗ್ರಾಮದಲ್ಲಿ ಭಾನುವಾರ ಯುವಕನೋರ್ವನ ಕೊಲೆ ನಡೆದಿದ್ದು, ಸ್ಥಳಕ್ಕೆ ಹಠಾತ ಭೇಟಿ ನೀಡಿದ ಪೊಲೀಸರು, ಕೊಲೆ ಆರೋಪಿಗಳನ್ನು ಬಂಧಿಸಿದ ಘಟನೆ ನಡೆದಿದೆ.
ಗ್ರಾಮದ ಶೇಖರ ಗುರುಶರಣ ಪಾಟೀಲ (28), ತನ್ನ ಕಾಕನ ಮಗನ ಮೇಲೆ ಹಲ್ಲೆ ಮಾಡಿದ್ದನ್ನು ಪ್ರಶ್ನಿಸಿದ್ದರಿಂದ ಎದುರಿನವರು ತೆಲೆಗೆ ಇಟ್ಟಿಗೆಯಿಂದ ಹೊಡೆದ ಪ್ರಯುಕ್ತ ಸ್ಥಳದಲ್ಲೇ ಮೃತಪಟ್ಟ ಘಟನೆ ಭಾನುವಾರ ಬೆಳಗಿನ ಜಾವ ನಡೆದಿದೆ ಎಂದು ಹೇಳಲಾಗಿದೆ.
ಮೃತನಿಗೆ ಕಳೆದ ಆರು ತಿಂಗಳ ಹಿಂದಷ್ಟೇ ಮದುವೆಯಾಗಿ ಬೆಂಗಳೂರಿನ ಖಾಸಗಿ ಕಂಪನೆಯಲ್ಲಿ ಉದ್ಯೋಗಿಯಾಗಿದ್ದನ್ನು, ಬೆಂಗಳೂರಿನಲ್ಲೇ ಪತ್ನಿಯೊಂದಿಗೆ ಮನೆಮಾಡಿಕೊಂಡಿದ್ದು, ಕಳೆದ ಗುರುವಾರ ಝಳಕಿ ಗ್ರಾಮದ ಶ್ರೀ ಭೀಮಾಶಂಕರ ಜಾತ್ರೆಗೆಂದು ಬಂದಿದ್ದನು ಭಾನುವಾರ ಸಂಜೆ ಬೆಂಗಳೂರಿಗೆ ಹೊಗಲು ಸಿದ್ಧತೆ ಮಾಡಿಕೊಂಡಿದ್ದನಾದರು ಬೆಳಗಿನ ಜಾವ ಕೊಲೆಯಾಗಿದೆ.
ಕೊಲೆಯಿಂದಾಗಿ ಮೃತನ ಪತ್ನಿ ಸಮೇತ ಕುಟುಂಬಸ್ಥರು ಅಕ್ರಂದನ ಮುಗಿಲು ಮುಟ್ಟಿದೆ. ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದ್ದಾರೆ.
ಮೃತನ ಕಾಕ ಚಿಚಲಪ್ಪನ ಮಗನಾದ ಶಶಿಕಾಂತ ಮೇಲೆ ಕ್ಷುಲ್ಲಕ ಕಾರಣದಿಂದ ಇದೇ ಗ್ರಾಮದ ಕೆಲವರು ಹಲ್ಲೆ ನಡೆಸಿದ್ದರಿಂದ ಕೇಳಲು ಹೋದಾಗ ಶೇಖರ ಮೇಲೆ ಹಲ್ಲೆ ನಡೆಸಿದ್ದರಿಂದ ಸ್ಥದಲ್ಲೇ ಮೃತ¥¥ಟ್ಟಿದ್ದು, ಈ ಕುರಿತು ಮಾದನಹಿಪ್ಪರಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಲೆಯ ಆರೋಪಿತರೆನನಲಾದ 6 ಜನರನ್ನು ಪೊಲೀಸರು ವಶಕ್ಕೆ ಪಡೆದುಕೊಂಢಿದ್ದಾರೆ.
Comments are closed.