Shubhashaya News

ಎಲ್‍ಸಿ ಹಾಕುವಾಗ ವಿದ್ಯುತ್ ಕಂಬದಿಂದ ಬಿದ್ದ ವ್ಯಕ್ತಿ ಗಂಭೀರ ಗಾಯ

ಗಾಯಾಳು ಸತ್ತಾರ ಕುಮಸೆ

ಆಳಂದ: ಪಟ್ಟಣದಲ್ಲಿ ಜೆಸ್ಕಾಂಗೆ ಸಂಬಂಧಿಸಿದ ವಿದ್ಯುತ್ ಕಂಬದಿಂದ ಎಲ್‍ಸಿ ಹಾಕಲು ಕಂಬವೇರಿದ ವ್ಯಕ್ತಿಯೋರ್ವ ಆಯತಪ್ಪಿ ಬಿದ್ದು ಗಂಭೀರ ಗಾಯಗೊಂಡ ಆಸ್ಪತ್ರೆಗೆ ದಾಖಲಾದ ಘಟನೆ ವರದಿಯಾಗಿದೆ.

ಕಳೆದ ಏ. 14ರಂದು ಪಟ್ಟಣದ ನಿವಾಸಿ ಸತ್ತಾರ ಕುಮಸೆ ಎಂಬಾತನೇ ವಿದ್ಯುತ್ ಕಂಬವೇರಿ ಆಯತಪ್ಪಿ ಬಿದ್ದು ಗಾಯಗೊಂಡ ಪರಿಣಾಮ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸತ್ತಾ ಕುಮಸೆ ಅವರು ಜೆಸ್ಕಾಂ ಲೈನ್‍ಮ್ಯಾನ್ ಅಲ್ಲದಿದ್ದರು ಜೆಸ್ಕಾಂ ಶಾಖೆಯ ಸಿಬ್ಬಂದಿಗಳು ಎಲ್‍ಸಿ ತೆಗೆದುಹಾಕುವ ಕೆಲಸಕ್ಕೆ ಖಾಸಗಿ ವ್ಯಕ್ತಿಗಳ ಸಹಾಯವನ್ನು ಪಡೆಯುತ್ತಿದ್ದಾರೆ. ಅಂದು ಸುತ್ತಾರಗೆ ಜೆಸ್ಕಾಂ ಶಾಖೆಯ ಜೆಇ ಎಲ್‍ಸಿ ನೋಡುವಂತೆ ಸೂಚನೆ ನೀಡಿದ್ದಾರೆ. ಆತ ಎಲ್‍ಸಿ ತೆಗೆಯುವಾಗ ಬಿದ್ದುಹೋಗಿದ್ದಾನೆ. ಆದರೆ ಇಲಾಖೆಯ ಅಧಿಕಾರಿಗಳು ಅನುಮತಿ ಇಲ್ಲದೆ ಕಂಬ ಏರಿದ್ದಾರೆ ಎಂದು ಹೇಳಿ ಅಧಿಕಾರಿಗಳು ಈಗ  ಕೈತೊಳೆದುಕೊಳ್ಳುತ್ತಿದ್ದಾರೆ ಇದು ಸರಿಯಲ್ಲ ಎಂದು ಸಿಪಿಐ ಜಿಲ್ಲಾ ಮುಖಂಡ ಮೌಲಾ ಮುಲ್ಲಾ ಅವರು ಆರೋಪಿಸಿದ್ದಾರೆ.

ಗಾಯಾಳು ಚಿಕಿತ್ಸೆಯನ್ನು ಇಲಾಖೆ ಪೂರ್ಣವಾಗಿ ವೆಚ್ಚ ಭರಿಸಬೇಕು. ಇಲಾಖೆ ಅಧಿಕಾರಿಗಳು ಬೇಜವಾಬ್ದಾರಿ ತೋರಿದರೆ ಬೀದಿಗಿಳಿದು ಹೋರಾಟ ಮಾಡಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ. ಇಂಥ ಘಟನೆಗೆ ಕಾರಣವಾಗುತ್ತಿರುವುದು ಜೆಸ್ಕಾಂಗೆ ಸಿಬ್ಬಂದಿಗಳ ಕೊರತೆಯಿದ್ದು ಹೀಗಾಗಿ ಖಾಸಗಿ ವ್ಯಕ್ತಿಗಳಿಂದ ಕೆಲಸ ತೆಗೆದುಕೊಂಡು ಸಿಬ್ಬಂದಿಗೆ ಬಿದ್ದು ಗಾಯಗೊಂಡರೆ ಇತ ಇಲಾಖೆಯ ಸಿಬ್ಬಂದಿವಿಲ್ಲ ಎಂದು ಕೈತೊಳೆಯದೇ ಅಧಿಕಾರಿಗಳು ಚಿಕಿತ್ಸೆಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.

ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆಯಿಂದ ಖಾಸಗಿ ವ್ಯಕ್ತಿಗಳಿಂದ ಕೆಲಸ ತೆಗೆದುಕೊಳ್ಳುತ್ತಿದೆ. ಇಲಾಖೆಯ ದೋಷದ ಕೆಲಸಕ್ಕೆ ಇಲಾಖೆಯೇ ಹೊಣೆಹೊತ್ತು  ಗಾಯಾಳುವಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ, ಸಂಬಂಧಿತ ಅಧಿಕಾರಿಗಳು ಸ್ಪಂದಿಸಿ ಸೂಕ್ತ ಚಿಕಿತ್ಸೆ ನೀಡಲು ಮುಂದಾಗಬೇಕು ಎಂದು ಮೌಲಾ ಮುಲ್ಲಾ ಅವರು ಒತ್ತಾಯಿಸಿದರು.

Comments are closed.

Don`t copy text!