Shubhashaya News

ಬೆಳಮಗಿ ಬಳಿಯ ಬೌದ್ಧ ವಿಚಾರ ಅರಣ್ಯಪ್ರದೇಶಕ್ಕೆ ಆಕಸ್ಮಿಕ ಬೆಂಕಿ:

ಲಕ್ಷಾಂತರ ರೂ. ಮೌಲ್ಯದ ಸಾಮಗ್ರಿಗಳು ಭಸ್ಮ

ಆಳಂದ: ಬೆಳಮಗಿ ಬುದ್ಧವಿವಾರ ಅರಣ್ಯ ಪ್ರದೇಶಕ್ಕೆ ಬೆಂಕಿತಗಲು ಗಿಡ,ಮರಗಳಿಗೆ ಸುಟ್ಟು ನಷ್ಟವಾಗಿದ್ದು, ಬೆಂಕಿ ನಂದಿಸಲು ಬಂತೇ ಅಮರಜೋತಿ ಅವರು ನಂದಿಸುವಲ್ಲಿ ಪ್ರಯತ್ನಿಸಿದ್ದರು.

ಆಳಂದ: ತಾಲೂಕಿನ ಬೆಳಮಗಿ ಗ್ರಾಮದ ಸಮೀಪವಿರುವ ಭಂತೆ ಅಮರ ಜ್ಯೋತಿ ಧ್ಯಾನ ಭೂಮಿ ಬುದ್ಧ ವಿಹಾರದ ಗಡ್ಡಕ್ಕೆ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದ್ದು, ಅಪಾರ ಮೌಲ್ಯದ ಸಾಮಗ್ರಿಗಳು ಮತ್ತು ಗಿಡಮರಗಳು ಸಂಪೂರ್ಣ ಭಸ್ಮವಾಗಿವೆ. ಈ ಘಟನೆಯಿಂದ ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ.
ಘಟನೆಯ ಕುರಿತು ಮಾಹಿತಿ ತಿಳಿದ ಕೂಡಲೇ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ತೀವ್ರ ಪ್ರಯತ್ನದಿಂದ ಬೆಂಕಿಯನ್ನು ನಂದಿಸಿದರು. ಈ ಕಾರ್ಯಾಚರಣೆಯಲ್ಲಿ ಸುಮಾರು 25,000 ರೂಪಾಯಿ ಮೌಲ್ಯದ ಸಾಮಗ್ರಿಗಳನ್ನು ರಕ್ಷಿಸಲಾಗಿದೆ ಎಂದು ಇಲಾಖೆ ತಿಳಿಸಿದೆ. ಆದರೆ, ಬೆಂಕಿಯ ತೀವ್ರತೆಯಿಂದ ಉದ್ಯಾನವನದ ಹೆಚ್ಚಿನ ಭಾಗಕ್ಕೆ ಉರಿದು ತೀವ್ರ ಹಾನಿಯಾಗಿದೆ.
ಈ ಬಗ್ಗೆ ಮಾತನಾಡಿದ ಭಂತೆ ಅಮರ ಜ್ಯೋತಿ ಧ್ಯಾನ ಭೂಮಿ ಬುದ್ಧ ವಿಹಾರದ ಜವಾಬ್ದಾರಿಗಳು, “ಈ ಆಕಸ್ಮಿಕ ಬೆಂಕಿಯಿಂದ ಉದ್ಯಾನವನಕ್ಕೆ ದೊಡ್ಡ ಮಟ್ಟದ ಹಾನಿಯಾಗಿದೆ. ಗಿಡಮರಗಳು ಮತ್ತು ಇತರ ಸಾಮಗ್ರಿಗಳ ನಷ್ಟದಿಂದ ನಾವು ದಿಗ್ಭ್ರಮೆಗೊಂಡಿದ್ದೇವೆ. ಅಧಿಕಾರಿಗಳ ಕಾಲಮಿತಿಯ ಕಾರ್ಯಾಚರಣೆಯಿಂದ ಕೆಲವು ಸಾಮಗ್ರಿಗಳನ್ನು ಉಳಿಸಲಾಗಿದೆ. ಘಟನೆಯ ಕಾರಣವನ್ನು ತನಿಖೆ ಮಾಡಲಾಗುತ್ತಿದೆ,” ಎಂದು ತಿಳಿಸಿದ್ದಾರೆ.
ಬೆಂಕಿಯ ಕಾರಣ ಇನ್ನೂ ಸ್ಪಷ್ಟವಾಗಿಲ್ಲವಾದರೂ, ಸ್ಥಳೀಯ ಆಡಳಿತ ಮತ್ತು ಅಗ್ನಿಶಾಮಕ ಅರಣ್ಯ ಇಲಾಖೆ ತನಿಖೆ ಆರಂಭವಾಗಿದೆ. ಈ ಘಟನೆಯಿಂದ ಉದ್ಯಾನವನದ ಸೌಂದರ್ಯಕ್ಕೆ ಧಕ್ಕೆಯುಂಟಾಗಿದ್ದು, ಪುನರ್‍ನಿರ್ಮಾಣಕ್ಕೆ ಸಾಕಷ್ಟು ಸಮಯ ಮತ್ತು ವೆಚ್ಚದ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ.

Comments are closed.

Don`t copy text!