ಆಳಂದ: ತೇಲಾಕುಣಿ ಗ್ರಾಮದ ಶ್ರೀರಾಮ ಮಂದಿರದಲ್ಲಿ ರಾಮನವಮಿ ನಿಮಿತ್ತ ಭಕ್ತಾದಿಗಳು ಶ್ರೀರಾಮದೇವರ ತೋಟಿಲೋತ್ಸವ ನೆರವೇರಿಸಿದರು.
ಆಳಂದ: ತೆಲಾಕುಣಿ ಗ್ರಾಮದಲ್ಲಿ ನಡೆದ ಶ್ರೀರಾಮ ಜನ್ಮೋತ್ಸವದಲ್ಲಿ ಮಗುವೊಂದು ಶ್ರೀರಾಮನ ವೇಷದಲ್ಲಿ ಗಮನ ಸೆ¼ಯಿತು.
ಆಳಂದ: ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಭಾನುವಾರ ರಾಮನವಮಿ ನಿಮಿತ್ತವಾಗಿ ಶ್ರೀರಾಮನ ಜನ್ಮೋತ್ಸವ ತೋಟಿಲು ಕಾರ್ಯಕ್ರಮವಿಶೇಷ ಪೂಜೆ ಅರ್ಚನೆಗಳು ಜರುಗಿದ್ದವು.
ತಾಲೂಕಿನ ತೀರ್ಥ ಗ್ರಾಮದ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಭಾನುವಾರ ಬೆಳಗಿನ ಜಾವ ಭಕ್ತಾದಿಗಳು ವಿಶೇಷ ರುದ್ರಾಭಿಷೇಕ ಪೂಜೆ, ಅರ್ಚನೆ ಬಳಿಕ ಆಗಮಿಸಿದ್ದ ಭಕ್ತಾದಿಗಳಿಂದ ಶ್ರೀರಾಮ ಜನ್ಮೋತ್ಸವ ಹಾಗೂ ತೋಟಿಲೋತ್ಸವ ಕೈಗೊಂಡು ನಾಮಕರಣ ಕೈಗೊಳ್ಳಲಾಯಿತು. ಬಳಿಕ ಭಜನಾ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಡಾ. ಬಸವರಾಜ ಮೂಲಗೆ, ಬಸವರಾಜ ಹೊಡ್ಲೆ, ಕಲ್ಯಾಣಿ ಸುತಾರ, ಹಣಮಂತರಾವ್ ಸರಾಟೆ, ಗುಜರಲಾಲ್ ಪಾಟೀಲ, ಗಂಗಾಧರ ಪಾಟೀಲ, ಶ್ರೀಶೈಲ ನಿಂಬಾಳೆ, ಮಂಜುನಾಥ ಬೆಲೂರೆ, ಮಂಜುನಾಥ ಸರಾಟೆ, ಜಗನಾಥ ಬಿರಾದಾರ, ದಯಾನಂದ ಲೋಕಾಣೆ, ಗ್ರಾಪಂ ಮಾಜಿ ಅಧ್ಯಕ್ಷ ಪಿಂಟು ಪಾಟೀಲ ಸೇರಿದಂತೆ ಅನೇಕರು ನೇತೃತ್ವದಲ್ಲಿ ಉತ್ಸವ ಆಚರಿಸಿ ಆರಾಧಿಸಲಾಯಿತು.
ಸೋಮವಾರ ಕಾಲಾ ಮತ್ತು ಮಧ್ಯಾಹ್ನ ಪೈಲ್ವಾನರ ಕುಸ್ತಿ ಹಾಗೂ ರಾತ್ರಿ ರತ್ನಮಾಂಗಲ್ಯ ಸಾಮಾಜಿಕ ನಾಟಕ ನಡೆಯಲಿದೆ.
ತಾಲೂಕಿನ ತೆಲಾಕುಣಿ ಗ್ರಾಮದಲ್ಲಿನ ರಾಮಮಂದಿರದಲ್ಲಿ ಶ್ರೀರಾಮ ಜನ್ಮೋತ್ಸವ ನಿಮಿತ್ತ ತಾಯಂದಿರು ತೋಟಿಲೋತ್ಸವ ನೆರವೇರಿಸಿದರು. ಈ ಸಂದರ್ಭಧಲ್ಲಿ ದೇವಸ್ಥಾನ ಕಮೀಟಿ ಮುಖಂಡ ಏಕನಾಥ ಏಟೆ, ನಾಗನಾಥ ಘೋಡಕೆ, ಶಿವಾಜಿ ಏಟೆ, ಸುಧಾರಕ ಏಟೆ, ನಿವೃತ್ತ ಪಿಡಿಒ ಬಾಬುರಾವ್ ರಾಯ, ರಾಘನಾಥ ಎಂ. ಏಟೆ, ಗ್ರಾಪಂ ಅಧ್ಯಕ್ಷ ಮಹಿಬೂಬಭಾಷಾ ಶೇಖ, ಶಶಿಕಾಂತ ಪಾಟೀಲ ಮತ್ತಿತರು ಉಪಸ್ಥಿತರಿದ್ದರು.
ಪಟ್ಟಣದ ಶ್ರೀರಾಮ ಮಾರುಕಟ್ಟೆಯಲ್ಲಿ ವ್ಯಾಪಾರಿಗಳ ಸಂಘದ ಆಶ್ರಯದಲ್ಲಿ ಶ್ರೀರಾಮನ ತೋಟಿಲೋತ್ಸವ ನಡೆಯಿತು. ಮಾಜಿ ಶಾಸಕ ಸುಭಾಷ ಗುತ್ತೇದಾರ ಸೇರಿದಂತೆ ಅನೇಕ ಭಕ್ತಾದಿಗಳು ಪಾಲ್ಗೊಂಡು ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.
ಪಟ್ಟಣದ ನಗರೇಶ್ವರ ರಾಮಮಂದಿರ ಸೇರಿ ಮತ್ತಿತರ ಕಡೆ ರಾಮನವಮಿ ನಿಮಿತ್ತ ಭಕ್ತಾದಿಗಳು ವಿಶೇಷ ಪೂಜೆ ನೆರವೇರಿಸಿದರು.
Comments are closed.