Shubhashaya News

ಸಿಯುಕೆಯಲ್ಲಿ ಡಾ. ಬಾಬು ಜಗಜೀವನ ರಾಮ ಜನ್ಮದಿನಾಚರಣೆ

ಆಳಂದ: ಸಿಯುಕೆಯಲ್ಲಿ ಡಾ. ಬಾಬುಜಗಜೀವನ ರಾಮ್ ಅವರ ಜನ್ಮದಿನಾಚರಣೆ ಕುಲಪತಿ ಪ್ರೊ. ಬಟ್ಟುಸತ್ಯನಾರಾಯಣ ಪೂಜೆಯೊಂದಿಗೆ ಉದ್ಘಾಟಿಸಿದರು. ಪೆÇ್ರ. ದೇವಿದಾಸ ಜಿ. ಬಿ. ಇತರರು ಇದ್ದರು.

ಆಳಂದ: “ಡಾ. ಬಾಬು ಜಗಜೀವನ ರಾಮ ಭಾರತದ ಹೆಮ್ಮೆ ಮತ್ತು ಮಹಾನ ನಾಯಕ. ಅವರು ಯುವ ಮನಸ್ಸುಗಳಿಗೆ ಸ್ಫೂರ್ತಿ ಮತ್ತು ಮಾದರಿಯಾಗಿದ್ದಾರೆ” ಎಂದು ಸಿಯುಕೆಯ ಕುಲಪತಿ ಪೆÇ್ರ. ಬಟ್ಟು ಸತ್ಯನಾರಾಯಣ ಹೇಳಿದರು.
ತಾಲೂಕಿನ ಕಡಗಂಚಿ ಬಳಿಯ ಸಿಯುಕೆಯಲ್ಲಿ ಡಾ. ಬಾಬು ಜಗಜೀವನ್ ರಾಮ ಅವರ 118 ನೇ ಜನ್ಮ ದಿನಾಚರಣೆಯಲ್ಲಿ ಮಾತನಾಡಿದರು.
“ಡಾ. ಬಾಬು ಜಗಜೀವನ ರಾಮ ದೇಶವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅಂತಹ ಮಹಾನ ವ್ಯಕ್ತಿತ್ವವನ್ನು ಸ್ಮರಿಸುವ ಸಮಯ ಇದು. ಕೃಷಿ ಕ್ಷೇತ್ರದ ಕೊಡುಗೆಯ ಸಹಾಯದಿಂದ ಭಾರತವು ಸ್ಥಿರವಾದ ಆರ್ಥಿಕ ಬೆಳವಣಿಗೆಯನ್ನು ಸಾಧಿಸಿದೆ. ಡಾ. ಬಾಬು ಜಗಜೀವನ ರಾಮ ಅವರ ‘ಹಸಿರು ಕ್ರಾಂತಿಯ’ ದೃಷ್ಟಿಕೋನದಿಂದಾಗಿ ಇದು ಸಾಧ್ಯವಾಯಿತು” ಎಂದು ಅವರು ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕುವೆಂಪು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪೆÇ್ರ. ದೇವಿದಾಸ ಜಿ. ಬಿ. ಅವರು ಮಾತನಾಡಿ “ಡಾ. ಬಾಬು ಜಗಜೀವನ ರಾಮ ಅವರು ಭಾರತದ ನಕ್ಷತ್ರ. ಅವರು ದಲಿತರನ್ನು ಸಮಾಜದಿಂದ ಪ್ರತ್ಯೇಕಿಸುವ ಬದಲು ಗುಲಾಮಗಿರಿಯಿಂದ ಮುಕ್ತಗೊಳಿಸುವ ಕನಸು ಕಂಡಿದ್ದರು. ಸಮುದಾಯ ಮತ್ತು ರಾಷ್ಟ್ರಕ್ಕಾಗಿ ಅವರ ಉದಾರ ಮೌಲ್ಯಗಳು ಮತ್ತು ಪ್ರಜಾಪ್ರಭುತ್ವ ಬದ್ಧತೆ ಗಮನಾರ್ಹವಾಗಿದೆ
ಪೆÇ್ರ. ಬಿಮಾರಾವ್ ಭೋಸ್ಲೆ, ಡಾ. ಬಸವರಾಜ ಕುಬಕಡ್ಡಿ, ಡಾ. ಅಖಿಲೇಶ್, ಎಲ್ಲಾ ಡೀನರು, ಮುಖ್ಯಸ್ಥರು, ಸಂಶೋಧನಾ ವಿದ್ವಾಂಸರು, ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪೆÇ್ರ. ದೇವರಾಜಪ್ಪ ಎಲ್ಲರನ್ನು ಸ್ವಾಗತಿಸಿದರು. ಡಾ. ಭಾವನಾ ನಿರೂಪಿಸಿದರು. ಸಂಯೋಜಕ ಡಾ. ಸಂಜೀವರಾಯಪ್ಪ ವಂದಿಸಿದರು.

Comments are closed.

Don`t copy text!