Shubhashaya News

ಪುರಸಭೆ: 19.74 ಲಕ್ಷ ರೂ. ಉಳಿತಾಯ ಬಜೆಟ್ ಅಂಗೀಕಾರ

ಚಿತ್ತಾಪುರ: ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಅಧ್ಯಕ್ಷ ಚಂದ್ರಶೇಖರ ಕಾಶಿ ಅಧ್ಯಕ್ಷತೆಯಲ್ಲಿ ನಡೆದ 2021-22ನೇ ಸಾಲಿನ ವಿಶೇಷ ಸಾಮಾನ್ಯ ಸಭೆಯಲ್ಲಿ ಸಿಬ್ಬಂದಿ ಕ್ರಾಂತಿಕುಮಾರಿ ಪ್ರತಿ ಓದಿದರು.

ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಅಧ್ಯಕ್ಷ ಚಂದ್ರಶೇಖರ ಕಾಶಿ ಅಧ್ಯಕ್ಷತೆಯಲ್ಲಿ 2021-22ನೇ ಸಾಲಿನ ವಿಶೇಶ ಸಾಮಾನ್ಯ ಸಭೆಯಲ್ಲಿ ಮಂಡಿಸಿದ 19.74 ಲಕ್ಷ ರೂ. ಉಳಿತಾಯ ಬಜೆಟ್ ಸರ್ವಾನುಮತದಿಂದ ಅಂಗೀಕರಿಸಲಾಯಿತು.
ಪುರಸಭೆ ಅಧ್ಯಕ್ಷ ಚಂದ್ರಶೇಖರ ಕಾಶಿ ಬಜೆಟ್ ಪ್ರತಿ ಓದಿ ಬಜೆಟ್ ಮಂಡನೆಗೆ ಚಾಲನೆ ನೀಡಿದರು.
ಲೇಕ್ಕಾಧಿಕಾರಿ ಕ್ರಾಂತಿಕುಮಾರಿ ಬಜೆಟ್ ಪತ್ರ ಓದಿದರು. ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ ಬಜೆಟ್ ಪತ್ರದ ಕುರಿತು ವಿವರಣೆ ನೀಡಿದರು.
ರಾಜಸ್ವದ ಆದಾಯದ ನಿರೀಕ್ಷೆ: ರಾಜಸ್ವ ಖಾತೆಯಿಂದ ಒಟ್ಟು 15.44 ಕೋಟಿ ರೂ., ಬಂಡವಾಳ ಖಾತೆಯಿಂದ 25.91 ಕೋಟಿ ರೂ., ಅಸಾಧಾರಣ ಖಾತೆಯಿಂದ 7.09 ಕೋಟಿ ರೂ., ವಿದ್ಯುತ್ ಅನುದಾನ 4 ಕೋಟಿ ರೂ., ಎಸ್.ಎಫ್.ಸಿ ವೇತನ ಅನುದಾನ (00-01) 1.20 ಕೋಟಿ ರೂ., ಕಟ್ಟಡಗಳ ಬಾಡಿಗೆ 7 ಲಕ್ಷ ರೂ., ಕಟ್ಟಡ ಕಾಯ್ದೆಗಳಿಗೆ ಸಂಬಂಧಪಟ್ಟ ಶುಲ್ಕಗಳು 6 ಲಕ್ಷ ರೂ., ಮೇಲ್ವಿಚಾರಣೆ ಶುಲ್ಕ 30 ಲಕ್ಷ ರೂ. ಆದಾಯ ನಿರೀಕ್ಷಿಸಲಾಗಿದೆ.
ಸಾಮಾನ್ಯ ಸ್ವೀಕೃತಿ ಅನುದಾನ 63.80 ಲಕ್ಷ ರೂ., ಆಸ್ತಿ ತೆರಿಗೆ ಆದಾಯ 67 ಲಕ್ಷ ರೂ., ಖಾತಾ ಬದಲಾವಣೆ ಆದಾಯ 40 ಲಕ್ಷ ರೂ., ಉಪಕರ ಸಂಗ್ರಹ 10 ಲಕ್ಷ ರೂ., ಕಾರ್ಮಿಕರ ಸೆಸ್ ಸಂಗ್ರಹ 10.35 ಲಕ್ಷ ರೂ., ನೋಂದಣಿ ಶುಲ್ಕ 6 ಲಕ್ಷ ರೂ., ಅಭಿವೃದ್ಧಿ ಶುಲ್ಕ 10 ಲಕ್ಷ ರೂ., ವ್ಯಾಪಾರ ಪರವಾನಿಗಿ ಶುಲ್ಕ 2.75 ಲಕ್ಷ ರೂ., ಕಟ್ಟಡ ಬಾಡಿಗೆ 7 ಲಕ್ಷ ರೂ., ಕೇಂದ್ರ ಸರ್ಕಾರದಿಂದ ನಿಶ್ಚಿತ ಉದ್ದೇಶಗಳಿಗೆ ಬಂದ ಅನುದಾನ 2.34 ಲಕ್ಷ ರೂ. ಹೀಗೆ ಒಟ್ಟು ವಾರ್ಷಿಕವಾಗಿ ರಾಜಸ್ವ ಖಾತೆಯಿಂದ 15.44 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ.
ರಾಜಸ್ವದ ಪಾವತಿ: ವೇತನ ಭತ್ಯೆ ಸೌಲಭ್ಯಗಳಿಗೆ 45 ಲಕ್ಷ ರೂ., ಸೇವಾಂತ್ಯದ ಪಿಂಚಣಿ ಸೌಲಭ್ಯ 5.50 ಲಕ್ಷ ರೂ. ವೈದ್ಯಕೀಯ ವೆಚ್ಚ 6 ಲಕ್ಷ ರೂ. ಪುಸ್ತಕಗಳು, ನಿಯತಕಾಲಿಕೆಗಳು, ಮುದ್ರಣ ಲೇಖನ ಸಾಮಾಗ್ರಿ ಮತ್ತು ನಕಲಿನ ವೆಚ್ಚಗಳು 14 ಲಕ್ಷ ರೂ. ಪ್ರಯಾಣ ಮತ್ತು ವಾಹನ ಭತ್ಯ 2 ಲಕ್ಷ ರೂ., ಜಾಹೀರಾತು ಮತ್ತು ಪ್ರಚಾರಕ್ಕೆ 5 ಲಕ್ಷ ರೂ., ಕಚೇರಿ ವೆಚ್ಚಗಳು 15 ಲಕ್ಷ ರೂ., ಇತರೆ ಸಾಮಾನ್ಯ ವೆಚ್ಚಗಳು 6 ಲಕ್ಷ ರೂ., ದುರಸ್ತಿ ಮತ್ತು ನಿರ್ವಹಣೆ (ಕಟ್ಟಡ) 10 ಲಕ್ಷ ರೂ. ಖರ್ಚು ಅಂದಾಜಿಸಲಾಗಿದೆ.
ಲೋಕೋಪಯೋಗಿ ಕಾಮಗಾರಿ ರಸ್ತೆ, ಕಲ್ಲುಹಾಸು, ಕಾಲುದಾರಿ, ರಸ್ತೆ ಪಕ್ಕದ ಚರಂಡಿಯಡಿ ವೇತನ, ಭತ್ಯ, ಸೌಲಭ್ಯಗಳಿಗೆ 40 ಲಕ್ಷ ರೂ., ಕೂಲಿಗಾಗಿ 10 ಲಕ್ಷ ರೂ., ಮೂಲಭೂತ ಆಸ್ತಿ ದುರಸ್ತಿ ಮತ್ತು ನಿರ್ವಹಣೆ 10 ಲಕ್ಷ ರೂ., ಹೊರಗುತ್ತಿಗೆ ಕಾರ್ಯಾಚರಣೆಗಳು 6 ಲಕ್ಷ ರೂ., ಬೀದಿ ದೀಪಗಳ ಕಾರ್ಯದಲ್ಲಿ ವೇತನ, ಭತ್ಯ, ಸೌಲಭ್ಯಗೆ 35 ಲಕ್ಷ ರೂ., ಇತರೆ ಸಾಮಾನ್ಯ ವೆಚ್ಚಗಳಿಗೆ 30 ಲಕ್ಷ ರೂ., ಶಕ್ತಿ ಮತ್ತು ಇಂಧನಕ್ಕೆ 25 ಲಕ್ಷ ರೂ., ವಿದ್ಯುತ್ ಅನುದಾನ 3 ಕೋಟಿ ರೂ., ಸ್ಪ್ರೀಟ್‍ಲೈಟ್ ನಿರ್ವಹಣೆಗೆ 20 ಲಕ್ಷ ರೂ., ಸಾಮಾನ್ಯ ದಾಸ್ತಾನು 30 ಲಕ್ಷ ರೂ. ಖಚು ಅಂದಾಜಿಸಲಾಗಿದೆ.
ನೀರು ನಿರ್ವಹಣೆ ಕೆಲಸಕ್ಕೆ 20 ಲಕ್ಷ ರೂ., ನೀರು ಸರಬರಾಜಿನ ವಿದ್ಯುತ್ ಶುಲ್ಕ 2 ಕೋಟಿ ರೂ., ನೀರು ಕಾಮಗಾರಿಗೆ 15 ಲಕ್ಷ ರೂ., ಕಚೇರಿ ಖರ್ಚು ಮತ್ತು ನೀರು ವೆಚ್ಚ 20 ಲಕ್ಷ ರೂ., ನಗರ ಬಡತನ ನಿರ್ಮೂಲನೆ ಮತ್ತು ಸಮಾಜ ಕಲ್ಯಾಣ ಕೊಳಗೇರಿ ಅಭಿವೃದ್ಧಿಯಡಿ ಕಾರ್ಯಕ್ರಮ ವೆಚ್ಚ 15 ಲಕ್ಷ ರೂ., ಹೀಗೆ ಒಟ್ಟು 15.39 ಕೋಟಿ ರೂ., ಹಾಗೂ ಬಂಡವಾಳ ಖಾತೆಯಿಂದ ಒಟ್ಟು 25.77 ಕೋಟಿ ರೂ., ವೆಚ್ಚ ಅಂದಾಜಿಸಲಾಗಿದೆ.
ಅಸಾಮಾನ್ಯ ಆದಾಯದಡಿ ವಿವಿಧ ಖಾತೆಗಳಿಂದ ಒಟ್ಟು 7 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ. 7 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ. ಹೀಗೆ ಒಟ್ಟು 48.37 ಕೋಟಿ ರೂ. ಆದಾಯ ನಿರೀಕ್ಷೆಯಿದ್ದು 48.17 ಕೋಟಿ ರೂ. ಖರ್ಚು, ಒಟ್ಟು ವಾರ್ಷಿಕ 19.74 ಲಕ್ಷ ರೂ. ಉಳಿತಾಯ ಅಂದಾಜು ಮಾಡಲಾಗಿದೆ.
ಸಭೆಯಲ್ಲಿ ಉಪಾಧ್ಯಕ್ಷೆ ಶೃತಿ ಪೂಜಾರಿ, ಸದಸ್ಯರಾದ ಮಹ್ಮದ್ ರಸೂಲ್ ಮುಸ್ತಫಾ, ನಾಗರಾಜ ಭಂಕಲಗಿ, ಶೀಲಾ ಕಾಶಿ, ವಿನೋದ್ ಗುತ್ತೇದಾರ, ಪಾಶಾಮಿಯ್ಯಾ ಖುರೇಶಿ, ಗೋವಿಂದ್ ನಾಯಕ್, ಮಲ್ಲಿಕಾರ್ಜುನ ಕಾಳಗಿ, ಶಿವರಾಜ ಪಾಳೇದ್, ರಮೇಶ ಬಮ್ಮನಳ್ಳಿ, ಶ್ರೀನಿವಾಸರೆಡ್ಡಿ ಪಾಲಪ್, ಶ್ಯಾಮ್ ಮೇಧಾ, ಪ್ರಭು ಗಂಗಾಣಿ, ಸುಮಂಗಲಾ ಅಣ್ಣಾರಾವ್, ಕಾಶಿಬಾಯಿ ಬೆಣ್ಣೂರ್, ಬೇಬಿ, ಶಹಜಾನ್ ಸೇರಿದಂತೆ ಇತರರು ಇದ್ದರು.

Comments are closed.

Don`t copy text!