ಚಿತ್ತಾಪುರ: ಪಟ್ಟಣದ ವೆಂಕಟೇಶ್ವರ ಕಾಲೋನಿಯಲ್ಲಿ ಬಣ್ಣದ ಓಕುಳಿಯಾಟದಲ್ಲಿ ತೊಡಗಿದ ಮಕ್ಕಳು.
ಪಟ್ಟಣ ಹಾಗೂ ವಿವಿಧ ಗ್ರಾಮಗಳಲ್ಲಿ ಹೋಳಿ ಹಬ್ಬ ನಿಮಿತ್ತ ರವಿವಾರ ರಾತ್ರಿ ಕಾಮದಹನ ಮಾಡಿ ಸೋಮವಾರ ಬಣ್ಣ ಎರಚುವ ಮೂಲಕ ರಂಗು ರಂಗಿನಾಟ ಆಡಿ ಜನತೆ ಹೋಳಿ ಹಬ್ಬ ಕೊವೀಡ್-19 ನಡುವೆಯೂ ಸಡಗರ ಸಂಭ್ರಮದಿಂದ ಆಚರಿಸಿದರು.
ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಕಾಮಣ್ಣನ ದಹನ ಮಾಡಲು ಯುವಕರು, ಮಕ್ಕಳು, ಕುಳ್ಳು ಕಟ್ಟಿಗೆ ಸಂಗ್ರಹಿಸಿ ಜೋಡಿಸಿ ರಾತ್ರಿ ಕಾಮಣ್ಣನಿಗೆ ಪೂಜೆ ಸಲ್ಲಿಸಿ ಬೆಂಕಿ ಹಚ್ಚಿ ಕಾಮಣ್ಣನ ಪ್ರತಿಕೃತಿ ದಹನ ಮಾಡಿದರು. ಜನಮನ ಸೆಳೆಯುವ ಹೋಳಿ ಹಾಡು ಆಡಿದರು.
ಮಹಿಳೆಯರು ಸಂಪ್ರದಾಯದಂತೆ ಕಾಮಣ್ಣನಿಗೆ ಹಚ್ಚಿದ ಬೆಂಕಿಯನ್ನು ಮನೆಗೆ ತಂದು ಅದರಿಂದಲೇ ಮನೆಯ ದೀಪವನ್ನು ಬೆಳಗಿಸಿದರು. ಅಲ್ಲದೆ ಕಾಮದಹನ ಮಾಡಿದ ಬೆಂಕಿಯಲ್ಲಿ ಕಡಲೆ, ಇರುಳ್ಳಿ, ಗೆಣಸು ಸುಟ್ಟು ಪ್ರಸಾದವೆಂದು ಸ್ವೀಕರಿಸಿದರು.
ಸೋಮವಾರ ದುಲಂಡಿ ದಿನದಂದು ಬೆಳಗ್ಗೆಯಿಂದಲೇ ಮಕ್ಕಳು ಯುವಕರು, ರಾಜಕಾರಣಿಗಳು, ವಕೀಲರು, ಪೊಲೀಸರು, ವ್ಯಾಪಾರಸ್ಥರು, ಶಿಕ್ಷಕರು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ರಂಗಿನಾಟದಲ್ಲಿ ತೊಡಗಿದರು.
ವಿವಿಧ ರೀತಿಯ ಬಣ್ಣಗಳು ಹಳೆ ಪಾತ್ರೆ, ಪಿಚಗಾರಿ ಮೂಲಕ ದಾರಿ ಹೋಕರ ಮೇಲೆ ಬಣ್ಣ ಎರೆಚಿದರು. ಅಲ್ಲದೆ ತಮ್ಮ ಗೆಳೆಯರ ಮನೆಗೆ ಹೋಗಿ ಅವರನ್ನು ಕರೆ ತಂದು ಒಬ್ಬರಿಗೊಬ್ಬರು ಬಣ್ಣ ಎರಚಿ ಮುಖಕ್ಕೆ ಹಚ್ಚಿ ಮುಖಗಳು ವಿರೂಪಗೊಳಿಸಿ ಖುಷಿಪಟ್ಟರು. ಅಲ್ಲದೆ ಗುಂಪಾಗಿ ಸೇರಿ ಚಿರುವುದು. ಹೋಯ್ಕೋಳುವುದು, ಬೈಯ್ಯುವುದು ಮಾಡಿದರು. ಖಡಕ್ ಬಿಸಿಲಿನ ನಡುವೆಯು ಬಣ್ಣದ ಎರಚಾಟದ ಅರ್ಭಟವು ಹೆಚ್ಚಾಯಿತು.
ಕೆಲ ಯುವಕರು ಮುಖಕ್ಕೆ ಪೆಂಟ್ ಹಚ್ಚಿದರೆ ಇನ್ನೂ ಕೆಲವರು ತಲೆಯ ಮೇಲೆ ತತ್ತಿಯನ್ನು ಒಡೆದು ಸಂಭ್ರಮಿಸಿದರು. ಒಟ್ಟಾರೆ ಹೋಳಿ ಹಬ್ಬ ತಾಲೂಕಿನಲ್ಲಿ ಶಾಂತಿಯುತವಾಗಿ ಜರುಗಿತು.
ಪಿಎಸ್ಐ ಮಂಜುನಾಥ ರೆಡ್ಡಿ ಸೂಕ್ತ ಪೊಲೀಸ್ ಬಂದೋಬಸ್ತ ಮಾಡಿದ್ದರು.
Prev Post
Next Post
Comments are closed.