‘ಯಲಬುರ್ಗಾ ತಾಲೂಕಿನಲ್ಲಿ ಸಾಹಿತ್ಯಾಕ್ಷರ ಕೊಡುಗೆ ಅಪಾರ’
13ನೇ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮಕ್ಕೆ ಚಾಲನೆ| ಶಾಸಕ ಹಾಲಪ್ಪ ಆಚಾರ್ ಅಭಿಮತ
ಯಲಬುರ್ಗಾ ತಾಲೂಕಿನ ಚಿಕ್ಕವಂಕಲಕುಂಟಾ ಗ್ರಾಮದಲ್ಲಿ ನಡೆದ 13ನೇ ತಾಲೂಕು ಸಾಹಿತ್ಯ ಸಮ್ಮೇಳನ ಕಾರ್ಯಕ್ರಮಕ್ಕೆ ಶನಿವಾರ ಗಣ್ಯರು ಚಾಲನೆ ನೀಡಿದರು.
ಶ್ರೀಮಾರುತೇಶ್ವರ ಪ್ರಧಾನ ವೇದಿಕೆ
ಯಲಬುರ್ಗಾ: ಕೊಪ್ಪಳ ಜಿಲ್ಲೆಯಲ್ಲಿ ಯಲಬುರ್ಗಾ ಹಾಗೂ ಕುಕನೂರು ತಾಲೂಕಿನಲ್ಲಿ ಬರಹಗಾರರನ್ನು ಅತಿ ಹೆಚ್ಚು ಹೊಂದಿದ ಹೆಗ್ಗಳಿಕೆ ಪಾತ್ರವಾಗಿದೆ ಎಂದು ಶಾಸಕ ಹಾಲಪ್ಪ ಆಚಾರ್ ಹೇಳಿದರು.
ತಾಲೂಕಿನ ಚಿಕ್ಕವಂಕಲಕುಂಟಾ ಗ್ರಾಮದ ಶ್ರೀಮಾರುತೇಶ್ವರ ದೇವಸ್ಥಾನ ಆವರಣದಲ್ಲಿ ಆಯೋಜಿಸಿದ್ದ 13ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮದಲ್ಲಿ ಭಾಗವಹಿಸಿ ಶನಿವಾರ ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಸಾಹಿತ್ಯಾಕ್ಷರು ಬಹಳ ಅಚ್ಚುಕಟ್ಟುನಿಂದಾಗಿ ಕಾರ್ಯಕ್ರಮ ಏರ್ಪಡಿಸಿದ್ದ ಶ್ಲಾಘನೀಯ. ಸಾಹಿತ್ಯ ಕ್ಷೇತ್ರದಲ್ಲಿ ಬರಹಗಾರರು ನೀಡಿದ ಕೊಡುಗೆ ಅಪಾರ ಹೊಂದಿದ್ದು,ಸಾಹಿತ್ಯ ಕ್ಷೇತ್ರವೂ ಬಹಳ ಅಭೂತಪೂರ್ವವಾಗಿ ಕಾರ್ಯ ನಿರ್ವಹಿಸುತ್ತಿದೆ. ಕ್ಷೇತ್ರದಲ್ಲಿ ಕಲ್ಲಿನಾಥ ಶಾಸ್ತ್ರಿ, ಈರಪ್ಪ ಕಂಬಳಿ,ಕೆ.ಕೆ.ಬ್ಯಾಳಿ,ಮುನಿಯಪ್ಪ ಹುಬ್ಬಳ್ಳಿ,ಕೆ.ರಾಘವೇಂದ್ರ,ಬಸವರಾಜ ಸಬರದ ಅಂತಹ ಅನೇಕ ಸಾಹಿತ್ಯಕರು ಹೊಂದಿರುವ ತಾಲೂಕಿನಲ್ಲಿ ಯುವ ಪೀಳಿಗೆಗೆ ಪರಿಚಯಿಸುವ ಕೆಲಸವಾಗಲಿ. ಚಾಣಕ್ಯರು ನಿರ್ಮಾಣ ಮಾಡಿರುವ ಐತಿಹಾಸಿಕ ದೇವಲಾಯಗಳು ಹೊಂದಿರುವ ಈ ತಾಲೂಕುಗಳು ಸಂಪೂರ್ಣವಾಗಿ ಅಭಿವೃದ್ಧಿಯತ್ತಾ ಸಾಗಬೇಕಿದೆ. ಕಲೆಗಳ ನಾಡು ತುಂಬಾ ಬೆಳವಣಿಗೆ ಹೊಂದಬೇಕಿದೆ. ಈ ಭಾಗದಲ್ಲಿ ತಾಯಂದಿರು ತಮ್ಮ ಮಕ್ಕಳಿಗೆ ಗುಣಾತ್ಮಕವಾಗಿ ಶಿಕ್ಷಣ ಕೊಡಿಸಿ ವಿದ್ಯಾವಂತರನ್ನಾಗಿ ಮಾಡಬೇಕು. ಸುಂಸ್ಕøತವಾಗಿ ಸಂಸ್ಕಾರ ನೀಡಬೇಕು ಎಂದು ತಿಳಿಸಿದರು.
ಜಿಲ್ಲಾ ಕಸಾಪ ಅಧ್ಯಕ್ಷ ರಾಜಶೇಖರ ಅಂಗಡಿ ಮಾತನಾಡಿ,ಗ್ರಾಮೀಣ ಭಾಗದಲ್ಲಿ ಸಾಹಿತ್ಯ ಹೊರ ಹೊಮ್ಮಿಸುವ ಕಾರ್ಯ ನಿರಂತರವಾಗಿ ನಡೆಯಬೇಕು ಎಂದು ತಿಳಿಸಿದರು.
ಹಂಪಿ ಕನ್ನಡ ವಿವಿ ಪ್ರಾಧ್ಯಾಪಕ ಅಮರೇಶ ಯಾತಗಲ್ ಕಾರ್ಯಕ್ರಮ ಉದ್ಘಾಟಿಸಿ, ಕನ್ನಡ ನಾಡು ನುಡಿ ಜಲ ಸಂರಕ್ಷಣೆ ಮಾಡುವಂತಹ ಕೆಲಸವಾಗಲಿ.ಗ್ರಾಮೀಣ ಭಾಗದಲ್ಲಿ ಜಾನಪದ ಸೊಗಡಿನ ಕಲೆಗಳು ನಿರಂತರವಾಗಿ ಸಾಗಬೇಕು.ಶ್ರೀಮಂತ ನಾಡಿನಲ್ಲಿ ವಿಚಾರಗಳು ಚರ್ಚಿಸುವಂತಹ ಕಾರ್ಯವಾಗಬೇಕಿದೆ.ಜಾತ್ರೆ ಸ್ವರೂಪತೆ ಪಡೆದ ಇಂತಹ ಸಮ್ಮೇಳನದಿಂದ ಎಚ್ಚರಿಸುವಂತಕ ಕೆಲಸಗಳಾಗಬೇಕು ಎಂದು ಹೇಳಿದರು.
ಸಮ್ಮೇಳನದ ಸರ್ವಾಧ್ಯಕ್ಷ ಬಿ.ಜಿ.ಹುಲಿ ಮಾತನಾಡಿ, ಯಲಬುರ್ಗಾ ತಾಲೂಕು ಸಾಹಿತ್ಯದ ವಲಯದಲ್ಲಿ ಹಲವರು ತಮ್ಮ ಕಾರ್ಯ ಸಾಧನೆ ಮೆರೆದಿದ್ದು ತುಂಬಾ ಸಂತೋಷಕರವಾಗಿದೆ.ಸಾಹಿತ್ಯಿಕ ಸಾಂಸ್ಕøತಿಕ ಶೈಕ್ಷಣಿಕ ಸಾಮಾಜಿಕವಾಗಿ ಬೆಳವಣಿಗೆಯಾಗಲಿ.ಕ್ಷೇತ್ರದಲ್ಲಿ ಚ.ಬಿ.ತಳಗೇರಿ,ಮುನಿಯಪ್ಪ ಹುಬ್ಬಳ್ಳಿ,ಕಂಬಳಿ ಈರಪ್ಪನಂತಹ ಮುಂತಾದವರು ಸಾಹಿತ್ಯ ವಲಯದಲ್ಲಿ ತಮ್ಮದೇಯಾದ ಕೊಡುಗೆ ನೀಡಿದ್ದು,ರಂಗಭೂಮಿ ಕಲೆಯಲ್ಲಿ ಪ್ರಸಿದ್ಧತೆ ಹೊಂದಿರುವ ಈ ತಾಲೂಕಿನಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು.ಕ್ಷೇತ್ರದಲ್ಲಿ ವಿನೂತನವಾದ ಕಾರ್ಯಗಳ ನಡೆಬೇಕು. ಕೃಷಿ ಕ್ಷೇತ್ರದಲ್ಲಿ ಅಭಿವೃದ್ಧಿಯಾಗಲು ನೀರಾವರಿ ಪ್ರತಿಯೊಬ್ಬರೂ ಸುಗಮ ಜೀವನ ನಡೆಸಲು ಶಿಕ್ಷಣದಿಂದ ಮಾತ್ರ ಸಾಧ್ಯ.
ಮೆರವಣಿಗೆಗೆ ಚಾಲನೆ: ಇದಕ್ಕೂ ಮುನ್ನವೇ ಗ್ರಾಮದಲ್ಲಿ ಮಹಿಳೆಯರಿಂದ ಕುಂಭ ಕಳಸ ಡೊಳ್ಳು ಭಾರಿಸುವ ಮೂಲಕ ಶ್ರೀ ಭುವನೇಶ್ವರ ದೇವಿ ಭಾವಚಿತ್ರದೊಂದಿಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಚಾಲನೆ ನೀಡಲಾಯಿತು. ಜಿಲ್ಲಾ ಪಂಚಾಯಿತಿ ಸದಸ್ಯೆ ಹೊಳಿಯಮ್ಮ ಶರಣೇಗೌಡ ಪಾಟೀಲ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಜಿ.ಪಂ.ಸದಸ್ಯೆ ಗಿರಿಜಾ ರೇವಣಪ್ಪ ಸಂಗಟಿ ಸೇರಿ ಇನ್ನಿತರರು ಪಾಲ್ಗೊಂಡಿದ್ದರು. ತದ ನಂತರ ಧ್ವಜಾರೋಹಣವನ್ನು ಶಾಸಕ ಹಾಲಪ್ಪ ಆಚಾರ್ ನೆರವೇರಿಸಿದರು. ಪರಿಷತ್ ಧ್ವಜಾರೋಹಣವನ್ನು ಜಿಲ್ಲಾ ಕಸಾಪ ಅಧ್ಯಕ್ಷ ರಾಜಶೇಖರ ಅಂಗಡಿ ನೇರವಿಸಿದರು. ಈ ವೇಳೆಯಲ್ಲಿ ಪ್ರಮುಖರು ಇದ್ದರು. ಶ್ರೀಮಾರುತೇಶ್ವರ ಡೊಳ್ಳಿನ ಕಲಾ ತಂಡ ಶ್ರೀಬೀರಲಿಂಗೇಶ್ವರ ಜಾನಾಪದ ಕಲಾ ತಂಡ ಭಾಗವಹಿಸಿದ್ದವು.
ತಾಲೂಕು ಕಸಾಪ ಅಧ್ಯಕ್ಷ ದೇವಿಂದ್ರಪ್ಪ ಜಿರ್ಲಿ, ಹಿರೇವಂಕಲಕುಂಟಾ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ಎಸ್.ವಿ.ಡಾಣಿ, ನಿಕಟಪೂರ್ವ ಸಮ್ಮೇಳನಾಧ್ಯಕ್ಷರಾದ ಶಾಂತಾ ಬಸವರಾಜ, ತಾ.ಪಂ.ಉಪಾಧ್ಯಕ್ಷೆ ಕವಿತಾ ಬಸವರಾಜ, ಸ್ಥಾಯಿ ಸಮಿತಿ ಅಧ್ಯಕ್ಷ ರುದ್ರಪ್ಪ ಮರಕಟ್, ಸದಸ್ಯರಾದ ಶಂಕರಗೌಡ ಟಣಕನಕಲ್, ಶರಣಪ್ಪ ಈಳಿಗೇರ್, ಮುಖಂಡರಾದ ವೆಂಕಟೇಶ ವಾಲ್ಮೀಕಿ, ಮಲ್ಲಿಕಾರ್ಜುನ್ ಹರ್ಲಾಪೂರ, ಅರವಿಂದಗೌಡ ಪಾಟೀಲ್, ಅಯ್ಯನಗೌಡ ಕೆಂಚಮ್ಮನವರ್, ವಿಜಯಕುಮಾರ ತಾಳಕೇರಿ, ರತನ ದೇಸಾಯಿ, ಚಂದಪ್ಪ ಕುರಿ, ವೀರನಗೌಡ ಪೋಲಿಸ್ ಪಾಟೀಲ್, ಹುಸೇನಬಿ ಅತ್ತಾರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. ಮುಖಂಡರಾದ ಶಂಕರ ಶಿಡ್ಲಬಾವಿ, ಮಲ್ಲಿಕಾರ್ಜುನ ಗಂಗನಾಳ ನಿರ್ವಹಿಸಿದರು.
Comments are closed.