Shubhashaya News

ಮೋಕ್ಷ ಸಂಸ್ಥೆಯ ಸಾಮಾಜಿಕ ಕಾರ್ಯ ಇತರ ಸಂಸ್ಥೆಗಳಿಗೆ ಮಾದರಿ : ಡಾ.ರಿಚಲ

ಶಹಾಪುರು ತಾಲ್ಲೂಕಿನ ಶಖಾಪುರು ಗ್ರಾಮದ ಮೋಕ್ಷ ಗ್ರಾಮೀಣಾಭಿವೃದ್ಧಿ ಹಾಗೂ ಶಿಕ್ಷಣ ಸಂಸ್ಥೆ ವತಿಯಿಂದ ಬೆಂಗಳೂರು ನಗರಿನ ಯಲಹಂಕ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣುಗಳನ್ನು ವಿತರಣೆ ಮಾಡಲಾಯಿತು.

ಯಾದಗಿರಿ : ಕೊರೊನಾ ವೈರಸ್  ಸಧ್ಯ ಎರಡನೇ ಅಲೆ ಪ್ರಾರಂಭವಾಗಿದೆ  ಕೊರೋನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಸಾಗುತ್ತಿದೆ  ಯಾರಿಂದಲೂ ಒಂದು ರೂಪಾಯಿ ಸಹಾಯ ಪಡೆಯದೆ ಸ್ವತಃ ಶಖಾಪುರು ಗ್ರಾಮದ ಮೋಕ್ಷ ಗ್ರಾಮೀಣಾಭಿವೃದ್ಧಿ ಹಾಗೂ ಶಿಕ್ಷಣ ಸಂಸ್ಥೆ  ವತಿಯಿಂದ  ಸರ್ಕಾರಿ ಆಸ್ಪತ್ರೆಗಳಿಗೆ   ಹಾಗೂ ಸಂಕಷ್ಟದಲ್ಲಿರುವ  ಎಷ್ಟೋ ಜನರಿಗೆ  ಇವರ ಸಂಸ್ಥೆ ವತಿಯಿಂದ  ಸಹಾಯ ಮಾಡುತ್ತಾ ಬರುತ್ತಿದ್ದಾರೆ. ನಿನ್ನೆ ನಮ್ಮ ಸರ್ಕಾರಿ ಆಸ್ಪತ್ರೆಗೆ   ಭೇಟಿ ನೀಡಿ ಇಲ್ಲಿ ಇರುವ ಎಲ್ಲಾ ರೋಗಿಗಳಿಗೆ ಹಣ್ಣುಗಳನ್ನು , ಬಿಸ್ಕೇಟಗಳನ್ನು ಹಂಚುವ ಮೂಲಕ ಒಂದು ಮಾದರಿ ಸಂಸ್ಥೆಯಾಗಿದೆ ಇವರ ಈ ಸೇವೆ ಫಲಾಪೇಕ್ಷೆಯಿಲ್ಲದೆ ನಿರಂತರವಾಗಿ ಮಾಡಿದ ಸೇವಾಕಾರ್ಯ  ರೋಗಿಗಳ ಸಂಕಷ್ಟಕ್ಕೆ ಸ್ಪಂದಿಸಿ ನಮ್ಮ ಹೃದಯ ಶ್ರೀಮಂತಿಕೆಗೆ ಪಾತ್ರರಾಗಿದ್ದಾರೆ. ಎಂದು ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ರಿಚಲ ಅವರು ಹೇಳಿದರು
ಬೆಂಗಳೂರಿನ ಯಲಹಂಕ ಸರ್ಕಾರಿ ಆಸ್ಪತ್ರೆಯಲ್ಲಿ ಭಾನುವಾರ ಶಹಾಪುರು ತಾಲ್ಲೂಕಿನ ಶಖಾಪುರು ಗ್ರಾಮದ ಮೋಕ್ಷ ಗ್ರಾಮೀಣಾಭಿವೃದ್ಧಿ ಹಾಗೂ ಶಿಕ್ಷಣ ಸಂಸ್ಥೆ ವತಿಯಿಂದ ರೋಗಿಗಳಿಗೆ ಹಣ್ಣುಗಳನ್ನು ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸರ್ಕಾರಿ ಆಸ್ಪತ್ರೆಗೆ ಹೆಚ್ಚಾಗಿ ಬಡ ರೋಗಿಗಳೇ ಬರುತ್ತಾರೆ ಅಂತಹವರಿಗೆ ಇಂತಹ ಸಂಸ್ಥೆಗಳ ಸಹಾಯ ಅತಿ ಅವಶ್ಯಕತೆ ಇರುತ್ತದೆ ಅದನ್ನು ಅರಿತುಕೊಂಡ ಈ ಸಂಸ್ಥೆಯ ಸದಸ್ಯರು ಬಂದು ನಮ್ಮ ಆಸ್ಪತ್ರೆ ರೋಗಿಗಳಿಗೆ ಸಹಾಯ ಮಾಡಿದ್ದಾರೆ ಅವರಿಗೆ ಧನ್ಯವಾದಗಳು.
ಇದೆ ರೀತಿ ನಿಮ್ಮ ಸಂಸ್ಥೆ ಇನ್ನೂ ಹೆಚ್ಚು ಹೆಚ್ಚಿನ ಪ್ರಮಾಣದಲ್ಲಿ ಸಾಮಾಜಿಕ ಕಾರ್ಯಕ್ರಮ ಮಾಡಲಿ ಎಂದು ಆಶಿಸಿದರು.ನಂತರದಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹೊರ ಮತ್ತು ಒಳ ರೋಗಿಗಳಿಗೆ ಹಣ್ಣುಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ ಆಸ್ಮಾ ತಬಸುಮ, ಸಂಸ್ಥೆಯ ಅಧ್ಯಕ್ಷೆ ಮಲ್ಲಮ್ಮ ಶರಣಗೌಡ, ಅಂಜಲಿ ನಂದಳ್ಳಿ, ಮೋಕ್ಷ ಪಾಟೀಲ್, ನಿಂಗಪ್ಪ ಕಟ್ಟಿಮನಿ, ಯಲ್ಲಪ್ಪ ಎಮ್ಮೆರ, ಭೀಮಣ್ಣ ನಂದಳ್ಳಿ, ಶರಣಗೌಡ ಶಖಾಪುರ, ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಇದ್ದರು.

Leave A Reply

Your email address will not be published.