ಮಾನ್ವಿ:ರಾಜ್ಯದಲ್ಲಿ ಮಾದಿಗ ಜನರ ಬಹುದಿನಗಳ ಬೇಡಿಕೆಯಾದ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗ ವರದಿಯನ್ನು ಸರಕಾರವು ಜಾರಿ ಮಾಡಬೇಕೆಂದು ಹೈಕೋರ್ಟ್ ನ್ಯಾಯವಾದಿ ಹನುಮಂತರಾಯ ಗುಂಡೂರ ಸರ್ಕಾರವನ್ನು ಒತ್ತಾಯಿಸಿದರು.
ರವಿವಾರ ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಕಳೆದ ಹಲವು ವರ್ಷಗಳಿಂದ ರಾಜ್ಯದಲ್ಲಿ ಸರ್ಕಾರಗಳು
ಮಾದಿಗ ಜನಾಂಗಕ್ಕೆ ಮೋಸ ಮಾಡುತ್ತಲೇ ಬಂದಿವೆ ಕೇವಲ ಸುಳ್ಳಿನ ಭರವಸೆಗಳೊಂದಿಗೆ ಸರ್ಕಾರಗಳು ಆಡಳಿತವನ್ನು ನಡೆಸುತ್ತಿದ್ದು, ಕಳೆದ ತಮ್ಮ ಅಧಿಕಾರದ ಅವಧಿಯಲ್ಲಿ ಬಿಜೆಪಿ ಸರ್ಕಾರ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ವರದಿಯನ್ನು ಜಾರಿಗೆ ಮಾಡುತ್ತೇವೆಂದು ಅಂದಿನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಗಿತ್ತು. ಅಂದಿನಿಂದ ಇಂದಿನವರೆಗೂ ಹಲವು ಸರ್ಕಾರಗಳು ಬಂದರೂ ಕೂಡ ಮಾದಿಗ ಸಮುದಾಯದ ಬಹುದಿನದ ಬೇಡಿಕೆ ಎಜೆ ಸದಾಶಿವ ಆಯೋಗ ವರದಿಯನ್ನು ಜಾರಿಗೊಳಿಸುವಲ್ಲಿ ಸರ್ಕಾರಗಳು ವಿಫಲವಾಗಿವೆ. ಪ್ರಸ್ತುತ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೂ ಈ ಬಗ್ಗೆ ಆಸಕ್ತಿ ವಹಿಸುತ್ತಿಲ್ಲ. ಇದಕ್ಕೆ ಮಾದಿಗ ಸಮುದಾಯದ ಬಂಧುಗಳು ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಬೇಕು ಸಿದ್ಧರಾಮಯ್ಯನವರ ಸರ್ಕಾರವು ಈ ವರದಿಯನ್ನು ಜಾರಿಗೊಳಿಸುತ್ತೇವೆ ಎಂದು ಆಶ್ವಾಸನೆ ನೀಡಿ ಕೈತೊಳೆದುಕೊಂಡಿತು. ನಂತರದ ಚುನಾವಣೆಯಲ್ಲಿ ಮಾದಿಗ ಸಮುದಾಯದ ಒಗ್ಗಟ್ಟು ತೋರಿಸಿ ಸರ್ಕಾರವನ್ನು ಅಧಿಕಾರದಿಂದ ದೂರು ಇಟ್ಟಿತ್ತು.
ಈಗ ಬಿಜೆಪಿ ಸರ್ಕಾರ ತನ್ನ ಸುಳ್ಳು ಭರವಸೆಗಳನ್ನು ನೀಡುತ್ತಾ ಬಂದಿದ್ದು ಈ ಸರ್ಕಾರ ಕೂಡ ನಮ್ಮ ಜನಾಂಗದ ಪೆಟ್ಟನ್ನು ಕೊಟ್ಟಾಗ ಮಾದಿಗ ಜನ ಶಕ್ತಿಯ ಬಗ್ಗೆ ಅವರಿಗೆ ಅರಿವಾಗುತ್ತದೆ ಎಂದರು. ಎಸ್ಸಿ ಜನಾಂಗದಲ್ಲಿ ನೂರ 2ಜಾತಿಗಳು ಬರುತ್ತವೆ. ಅದರಲ್ಲೂ ಮಾದಿಗ ಒಳ ಒಳ ಮೀಸಲಾತಿ ಜಾರಿಯಾದರೆ ನೂರ 2ಜಾತಿ ಜನಾಂಗದವರಿಗೆ ಉಪಯುಕ್ತವಾಗುತ್ತದೆ. ಎಂದರು ಜಾತಿಯ ಆಧಾರದ ಮೇಲೆ ಮೀಸಲಾತಿ ಯನ್ನು ಕೊಡಬೇಕಾಗಿರುವುದು ಎಜೆ ನ್ಯಾಯಮೂರ್ತಿ ಸದಾಶಿವ ಆಯೋಗ ವರದಿ ಸಲ್ಲಿಸಿದರು. ಹಲವು ವರ್ಷಗಳಿಂದ ಮಾದಿಗ ಸಮುದಾಯದವರು ಸರ್ಕಾರದ ವಿರುದ್ಧ ಹೋರಾಟ ಮಾಡುತ್ತಲೇ ಬಂದರೂ ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ ಮಸ್ಕಿ ಉಪ ಚುನಾವಣೆ ಹಾಗೂ ಮುಂಬರುವ ಚುನಾವಣೆಯಲ್ಲಿ ನಮಗೆ ಮೋಸ ಮಾಡಿದ ಸರ್ಕಾರಗಳಿಗೆ ಮಾದಿಗ ಜನಾಂಗದವರು ತಮ್ಮ ಶಕ್ತಿ ಪ್ರದರ್ಶನವನ್ನು ತೋರಿಸಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಜನಶಕ್ತಿ ಕೇಂದ್ರದ ಸಂಸ್ಥಾಪಕ ಅಧ್ಯಕ್ಷರಾದ ಪ್ರಭುರಾಜ್ ಕೊಡ್ಲಿ, ಶಾಂತಕುಮಾರ್, ಮೋಹನ್ ಮುರಾರಿ, ಹನುಮಂತ ಇನ್ನಿತರರು ಇದ್ದರು.
Comments are closed.