Shubhashaya News

ಕಳ್ಳತನ ಪ್ರಕರಣ ತಗ್ಗಿಸಲು ಸಿಸಿಟಿವಿ ಅಳವಡಿಸಿ, PSI ಸಿದ್ದೇಶ್ವರ್.!

ಯಾದಗಿರಿ: ಜಿಲ್ಲೆಯ ಹುಣಸಗಿ ತಾಲ್ಲೂಕಿನ ನಾರಾಯಣಪುರದಲ್ಲಿ ಕಳ್ಳತನ ಪ್ರಕರಣ ಹೆಚ್ಚಾಗುತ್ತಿದ್ದು,  ಅಂಗಡಿ ಮುಂಗಟ್ಟಗಳು ಮಾಲೀಕರು ಸಿಸಿಟಿವಿ ಅಳವಡಿಸಿದರೆ ಉತ್ತಮ ಎಂದು

ಪಿಎಸ್ಐ ಸಿದ್ದೇಶ್ವರ ಅವರು ಹೇಳಿದರು.

 

ನಾರಾಯಣಪುರ ಪೊಲೀಸ್ ಠಾಣೆಯಲ್ಲಿ ಇಂದು ಸಿಸಿಟಿವಿ ಅಳವಡಿಕೆ ಬಗ್ಗೆ ಮಾಹಿತಿ ನೀಡಿದ ಅವರು, ಗ್ಯಾರೇಜ್,ಆಟೋಮೋಬೈಲ್ಸ್ ಸೇರಿದಂತೆ ವಿವಿಧ ಅಂಗಡಿಗಳ ಮಾಲೀಕರು ಸಿಸಿಟಿವಿ ಹಾಕಬೇಕು ಎಂದರು.

 

ಅಲ್ಲದೇ ಮುಖ್ಯವಾದ ಸರ್ಕಲ್ ಗಳಲ್ಲಿರುವ ವ್ಯಾಪಾರಸ್ಥರು ಸಿಸಿಟಿವಿ ಅಳವಡಿಸಿದರೆ ನಮಗೆ ಅನುಕೂಲವಾಗುತ್ತೆ. ಅಂಗಡಿ ಮಾಲೀಕರು ಇದಕ್ಕೆ ಸಹಕರಿಸಬೇಕೆಂದರು.

 

ಈ ಸಂಧರ್ಭದಲ್ಲಿ ಎಎಸ್ಐ ಕೃಷ್ಣಮೂರ್ತಿ, ಸಿಬ್ಬಂದಿಗಳಾದ ಸಂಗಪ್ಪ, ಪ್ರಕಾಶ್, ದೇವು, ಸೋಮನಗೌಡ ಹಾಗೂ ಅಂಗಡಿ ಮಾಲೀಕರಾದ

ಸುಧಾಕರ್ ಪಾಣಿಬಾತೆ, ಶರಣು ಗಿಡನೂರ್, ಪವನ್ ಪ್ರಸಾದ, ಜಾವಿದ್ ಹುಸೇನ್ ಸೇರಿದಂತೆ ಉಪಸ್ಥಿತರಿದ್ದರು.

Comments are closed.

Don`t copy text!