ಆಳಂದ: ಸಿಯುಕೆ ಪ್ರವಾಸೋದ್ಯಮದಲ್ಲಿ ಡಿಜಿಟಲ್ ತಂತ್ರಜ್ಞಾನ ಪ್ರದರ್ಶನವದಲ್ಲಿ ಕುಲಪತಿ ಪೆÇ್ರ. ಬಟ್ಟು ಸತ್ಯನಾರಾಯಣ ಉದ್ಘಾಟಿಸಿದರು.
ಉದ್ಯೋಗ ಸೃಷ್ಟಿಕರ್ತರಾಗಲು ವಿದ್ಯಾರ್ಥಿಗಳಿಗೆ ಕುಲಪತಿ ಸತ್ಯನಾರಾಯಣ ಸಲಹೆ
ಆಳಂದ: “ಪ್ರವಾಸೋದ್ಯಮ ವಲಯವು ವ್ಯಾಪಕ ಉದ್ಯೋಗಾವಕಾಶಗಳನ್ನು ಹೊಂದಿದ್ದು, ವಿದ್ಯಾರ್ಥಿಗಳು ಉದ್ಯೋಗಾಕಾಂಕ್ಷಿಗಳಾಗುವುದಕ್ಕಿಂತ ಹೆಚ್ಚಾಗಿ ಉದ್ಯೋಗ ಸೃಷ್ಟಿಕರ್ತರಾಗಬೇಕು” ಎಂದು ಸಿಯುಕೆಯ ಕುಲಪತಿ ಪೆÇ್ರ. ಬಟ್ಟು ಸತ್ಯನಾರಾಯಣ ಹೇಳಿದರು.
ತಾಲೂಕಿನ ಕಡಗಂಚಿ ಬಳಿಯ ಕೇಂದ್ರ ವಿಶ್ವವಿದ್ಯಾಲಯ ಕರ್ನಾಟಕ (ಸಿಯುಕೆ)ಯ ಪ್ರವಾಸೋದ್ಯಮ ಮತ್ತು ಹೋಟೆಲ್ ನಿರ್ವಹಣಾ ವಿಭಾಗ ಆಯೋಜಿಸಿದ್ದ “ಪ್ರವಾಸೋದ್ಯಮದಲ್ಲಿ ಡಿಜಿಟಲ್ ತಂತ್ರಜ್ಞಾನ” ಪ್ರದರ್ಶನವನ್ನು ಉದ್ಘಾಟಿಸಿದ ಬಳಿಕ ಅವರು ಮಾತನಾಡಿದರು.
ಪ್ರವಾಸೋದ್ಯಮ ಕ್ಷೇತ್ರವು ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದು, ಭಾರತದ ಜಿಡಿಪಿಗೆ ಗಣನೀಯ ಕೊಡುಗೆ ನೀಡುತ್ತಿದೆ ಎಂದು ಹೇಳಿದರು. ಇತ್ತೀಚಿನ ದಿನಗಳಲ್ಲಿ ಎಐ ಹಾಗೂ ಡಿಜಿಟಲ್ ತಂತ್ರಜ್ಞಾನಗಳ ಬಳಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಉದ್ಯೋಗ ಕಡಿಮೆಯಾಗುವುದಿಲ್ಲ, ಬದಲಾಗಿ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಉದ್ಯಮ ಕ್ಷೇತ್ರದಲ್ಲಿ ಸ್ಪರ್ಧಾತ್ಮಕತೆಯನ್ನು ಸಾಧಿಸಲು ನವೀನ ಅಭ್ಯಾಸಗಳು ಮತ್ತು ತಾಂತ್ರಿಕ ಕೌಶಲ್ಯಗಳು ಅಗತ್ಯವಿದ್ದು, ವಿದ್ಯಾರ್ಥಿಗಳು ಉದ್ಯಮ ಸಿದ್ಧ ಕೌಶಲ್ಯಗಳನ್ನು ಅಳವಡಿಸಿಕೊಂಡರೆ ಉತ್ತಮ ಭವಿಷ್ಯವನ್ನು ನಿರ್ಮಿಸಿಕೊಳ್ಳಬಹುದು ಎಂದು ತಿಳಿಸಿದರು. ಪ್ರವಾಸೋದ್ಯಮವು ಸೇವಾ ಕ್ಷೇತ್ರವಾಗಿರುವುದರಿಂದ ಜನರನ್ನು ಸಮರ್ಥವಾಗಿ ನಿರ್ವಹಿಸುವುದು ದೊಡ್ಡ ಸವಾಲು ಎಂದು ಹೇಳಿ, ಮಾನವೀಯ ಕೌಶಲ್ಯಗಳ ಅಭಿವೃದ್ಧಿಗೂ ಒತ್ತು ನೀಡಿದರು.
ಈ ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ಆಧುನಿಕ ತಂತ್ರಜ್ಞಾನ ಆಧಾರಿತ ಹಲವು ಮಾದರಿಗಳನ್ನು ಪರಿಚಯಿಸಿದರು. ರೋಬೋಟ್ ಸ್ವಾಗತಕಾರ, ರೋಬೋಟ್ ಸರ್ವರ್, ಜಿಯೋ ಫೆನ್ಸಿಂಗ್ ವ್ಯವಸ್ಥೆ, ಜಿಪಿಎಸ್ ಆಧಾರಿತ ಸಂಚಾರ ಮತ್ತು ಪಾಕಿರ್ಂಗ್ ನಿರ್ವಹಣೆ, ಥ್ರೀಡಿ ಕ್ಯಾಂಪಸ್ ಪ್ರವಾಸ, ಎಐ ಆಧಾರಿತ ಪ್ರಯಾಣ ಯೋಜನೆ, ಕ್ಯೂಆರ್ ಕೋಡ್ ಆಧಾರಿತ ಗಮ್ಯಸ್ಥಾನ ಮಾಹಿತಿ ವ್ಯವಸ್ಥೆ, ಸೌರ ಫಲಕ ಬೆಂಚುಗಳು, ಹೊಲೊಗ್ರಾಮ್ ವರ್ಚುವಲ್ ಪ್ರವಾಸೋದ್ಯಮ, ಸುಸ್ಥಿರ ಪ್ರವಾಸೋದ್ಯಮ ಅಭಿವೃದ್ಧಿ ಮಾದರಿಗಳು, ಡಿಜಿಟಲ್ ಟೆಲ್ಲರ್ ಯಂತ್ರ ಹಾಗೂ ಪ್ರವಾಸಿಗರಿಗೆ ಪೌಷ್ಟಿಕ ಆಹಾರದ ಮಾದರಿಗಳು ಗಮನ ಸೆಳೆದವು.
ಪ್ರವಾಸೋದ್ಯಮ ಮತ್ತು ಹೋಟೆಲ್ ನಿರ್ವಹಣಾ ವಿಭಾಗದ ಮುಖ್ಯಸ್ಥ ಡಾ. ಮಹೇಂದ್ರ ಜಿ ಅವರು ಕಾರ್ಯಕ್ರಮದ ಆರಂಭದಲ್ಲಿ ಎಲ್ಲರನ್ನು ಸ್ವಾಗತಿಸಿದರು. ಕಾರ್ಯಕ್ರಮದ ಸಂಯೋಜಕ ಡಾ. ಶಿವ ಎಂ ಅವರು ವಂದಿಸಿದರು.
ಈ ಸಂದರ್ಭದಲ್ಲಿ ಸ್ಕೂಲ್ ಆಫ್ ಬಿಸಿನೆಸ್ ಸ್ಟಡೀಸ್ ಡೀನ್ ಪೆÇ್ರ. ಪಾಂಡುರಂಗ ವಿ ಪತ್ತಿ, ಪೆÇ್ರ. ಅಂಕತಿ ರಘು, ಡಾ. ಡಿ. ಗೌತಮ್, ಡಾ. ನವೀನ್, ಡಾ. ನಟರಾಜ್ ಪಟ್ಟೇಡ್, ಡಾ. ಜಗದೀಶ್ ಬಿರಾದಾರ್, ಡಾ. ಗಣಪತಿ ಬಿ. ಸಿನ್ನೂರ್, ಡಾ. ಶಿವಾನಂದ ಬಂಟನೂರ, ಡಾ. ರಂಗನಾಥ ಸೇರಿದಂತೆ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.