ಆಳಂದ: ಪುರಸಭೆಯ ಸಾಮಾನ್ಯ ಸಭೆಯಲ್ಲಿ ಶಾಸಕ ಬಿ.ಆರ್. ಪಾಟೀಲ ಮಾತನಾಡಿದರು. ಅಧ್ಯಕ್ಷ ಫೀರದೋಸ್ ಅನ್ಸಾರಿ, ಉಪಾಧ್ಯಕ್ಷೆ ಕವಿತಾ ಎಸ್. ನಾಯಕ, ಮುಖ್ಯಾಧಿಕಾರಿ ಸಂಗಮೇಶ ಪನಶೆಟ್ಟಿ ಇತರರು ಇದ್ದರು.
ಆಳಂದ: ಪಟ್ಟಣದ ಪುರಸಭೆಯ ಸಾಮಾನ್ಯ ಸಭೆ ಶುಕ್ರವಾರ ಪುರಸಭೆ ಸಭಾಂಗಣದಲ್ಲಿ ನಡೆಯಿತು.
ಪುರಸಭೆ ಅಧ್ಯಕ್ಷ ಫೀರದೋಸ್ ಅನ್ಸಾರಿ ಅಧ್ಯಕ್ಷತೆ ವಹಿಸಿದ್ದ ಸಭೆಯಲ್ಲಿ ಉಪಾಧ್ಯಕ್ಷೆ ಕವಿತಾ ಎಸ್. ನಾಯಕ್, ಶಾಸಕರು ಹಾಗೂ ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್. ಪಾಟೀಲ್ ಉಪಸ್ಥಿತರಿದ್ದರು.
ಎರಡೂವರೆ ವರ್ಷಗಳಿಂದ ಆಡಳಿತ ಮಂಡಳಿ ರಚನೆಯಾಗದೆ ಸಮಸ್ಯೆ ಎದುರಿಸುತ್ತಿದ್ದ ಪುರಸಭೆಗೆ ಈಗ ಉಳಿದ ಎಂಟು ತಿಂಗಳ ಅವಧಿಯಲ್ಲಿ ಗೆ ಅಸ್ತಿತ್ವಕ್ಕೆ ಬಂದ ಹೊಸ ಆಡಳಿತ ಮಂಡಳಿಯ ಸರ್ವರು ಕೂಡಿಕೊಂಡು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕಾಮಗಾರಿಗಳನ್ನು ಕೈಗೊಳ್ಳುವಂತೆ ಶಾಸಕ ಪಾಟೀಲ್ ಸಲಹೆ ನೀಡಿದರು.
ಸಭೆಯಲ್ಲಿ ಶಾಸಕರು ಕುಡಿಯುವ ನೀರಿನ ಸಮಸ್ಯೆ ತಡೆಗೆ ಮುನ್ನೆಚ್ಚರಿಕೆ ಕ್ರಮಗಳು, ಬಸ್ ನಿಲ್ದಾಣಕ್ಕೆ ಪ್ರತ್ಯೇಕ ಸ್ಥಳ, ಕೋರ್ಟ್ ಕಟ್ಟಡ ನಿರ್ಮಾಣ, ವಾರದ ಸಂತೆಗೆ ಎಪಿಎಂಸಿ ನಿವೇಶನದಲ್ಲಿ ವ್ಯವಸ್ಥೆ, ಮತ್ತು ಶ್ರೀರಾಮಟ್ಟಿ ಕಟ್ಟೆಯ ಕಟ್ಟಡಗಳ ತೆರವುಗೊಳಿಕೆಯ ನಂತರ ಹೊಸ ಕಾಂಪ್ಲೆಕ್ಸ್ ನಿರ್ಮಾಣದಂತಹ ವಿಷಯಗಳ ತಮ್ಮ ಅಭಿಪ್ರಾಯಗಳನ್ನು ಸಭೆಯಲ್ಲಿಟ್ಟರು.
ಆಶ್ರಯ ನಿವೇಶನದ 15 ಎಕರೆ ಜಾಗದಲ್ಲಿ ಇನ್ನೊಂದು ಕಡೆ 9 ಎಕರೆಯಲ್ಲಿ ಮನೆಗಳ ನಿರ್ಮಾಣ ಯೋಜನೆಯನ್ನು ಪುನಶ್ಚೇತನಗೊಳಿಸಿ ಬಡವರಿಗೆ ವಿತರಿಸುವಂತೆ ಸೂಚಿಸಿದರು. ಮಾರುಕಟ್ಟೆಯಲ್ಲಿ ಇಂಧಿರಾ ಕ್ಯಾಂಟೀನ್ ಕಟ್ಟಡ ಕಾಮಗಾರಿ ಪೂರ್ಣಗೊಂಡರೂ ಗುತ್ತಿಗೆದಾರರ ವಿಳಂಬದಿಂದ ಉದ್ಘಾಟನೆಗೆ ತಡವಾಗುತ್ತಿರುವುದಕ್ಕೆ ಸದಸ್ಯ ಈರಣ್ಣಾ ಹತ್ತರಕಿ ಅವರು ಶಾಸಕರ ಗಮನಕ್ಕೆ ಸೆಳೆದಾಗ ಮುಖ್ಯಾಧಿಕಾರಿ ಸಂಗಮೇಶ ಪನಶೆಟ್ಟಿ ್ಟಅವರು, ಸಣ್ಣಪುಟ್ಟ ಕೆಲಸಗಳು ಬಾಕಿದ್ದರಿಂದ ಕಟ್ಟಡ ಸ್ವಾಧೀನಪಡಿದುಕೊಂಡಿಲ್ಲ. ಪೂರ್ಣಗೊಳಿಸಿಕೊಡುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ರಸ್ತೆ ಅಗಲೀಕರಣ, ಆಶ್ರಯ ಮನೆ, ನಿವೇಶನ ಹಂಚಿಕೆಯಂತ ಈ ಚರ್ಚೆಗಳ ಹಿಂದಿನ ಸತ್ಯವನ್ನು ಗಮನಿಸಿದಾಗ, ಆಳಂದ ಪಟ್ಟಣದಲ್ಲಿ ಆಶ್ರಯ ನಿವೇಶನ ಮತ್ತು ಮನೆ ಹಂಚಿಕೆಯ ವಿಷಯವು ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ. ಬಹುಕಾಲದಿಂದ ಚರ್ಚಿತವಾಗಿರುವ ಮುಖ್ಯರಸ್ತೆ ಅಗಲೀಕರಣ ಕಾರ್ಯವೂ ಕೇವಲ ಚರ್ಚೆಯಾಗಿ ಉಳಿದಿದೆ. ಜನರಿಗೆ “ಕಾದು ನೋಡಿ” ಎಂಬ ಭರವಸೆಯ ಆಶ್ವಾಸನೆಗಳು ಮಾತ್ರ ಆಡಳಿತ ವಲಯದಿಂದ ಸಿಗುತ್ತಿವೆ. ಈ ಬೆಳವಣಿಗೆಗಳು ಆಡಳಿತದ ನಿರಾಸಕ್ತಿಯನ್ನು ಎತ್ತಿ ತೋರಿಸುತ್ತವೆ. ಜನರ ಕನಸುಗಳಾದ ಮೂಲಭೂತ ಸೌಕರ್ಯ, ವಸತಿ, ಮತ್ತು ಉತ್ತಮ ರಸ್ತೆಗಳು ಕರಗುವಂತೆ ಮಾಡುತ್ತಿರುವ ಈ ಸ್ಥಿತಿಯು ಪುರಸಭೆಯ ಕಾರ್ಯವೈಖರಿಯ ಬಗ್ಗೆ ಪ್ರಶ್ನೆಗಳನ್ನು ಸಾರ್ವಜನಿಕ ವಲಯದಲ್ಲಿ ಹುಟ್ಟುಹಾಕುತ್ತದೆ.
ಸದ್ಯ ಅಸ್ತಿತ್ವಕ್ಕೆ ಬಂದ ಪುರಸಭೆಯ ಆಡಳಿತ ಮಂಡಳಿಯ ಈಗಿನ ಕಾರ್ಯವೈಖರಿಯು ಜನರ ನಿರೀಕ್ಷೆಗಳಿಗೆ ತಕ್ಕಂತೆ ಕಾರ್ಯನಿರ್ವಹಿಸದಿದ್ದರೆ, ಆಳಂದದ ಜನತೆಗೆ ಮತ್ತೆ ನಿರಾಸೆಯೇ ಒಡಲಾಗಲಿದೆ. ಶಾಸಕರು ಮತ್ತು ಪುರಸಭೆ ಅಧಿಕಾರಿಗಳು ಈ ಸವಾಲನ್ನು ಒಡ್ಡಿಕೊಂಡು, ಚರ್ಚೆಯಿಂದ ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಗಂಭೀರ ಕ್ರಮ ಕೈಗೊಳ್ಳಬೇಕಿz ಎಂದು ಜನ ಎದುರುನೋಡತೊಡಗಿದ್ದಾರೆ.
ಎರಡೂವರೆ ವರ್ಷಗಳಿಂದ ಆಡಳಿತ ಮಂಡಳಿಯಿಲ್ಲದೆ ಸಂಕಷ್ಟದಲ್ಲಿದ್ದ ಆಳಂದ ಪುರಸಭೆಗೆ ಈಗ ಉಳಿದಿರುವ ಎಂಟು ತಿಂಗಳ ಅವಧಿಯಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕಾಮಗಾರಿಗಳನ್ನು ಕೈಗೊಳ್ಳುವಂತೆ ಪಾಟೀಲ್ ಸಲಹೆ ನೀಡಿದರು. ಆದರೆ, ಚರ್ಚೆಯಾದ ವಿಷಯಗಳು ಕಾರ್ಯರೂಪಕ್ಕೆ ಬಂದಿಲ್ಲದಿರುವುದು ಜನರಲ್ಲಿ ನಿರಾಸೆ ಮೂಡಿಸಿದೆ.
ಸಭೆಯ ಮುಖ್ಯಾಂಶಗಳು:
ಶಾಸಕರು ಕುಡಿಯುವ ನೀರಿನ ಕೊರತೆ ತಡೆಗಟ್ಟಲು ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು. ಆದರೆ, ಸದ್ಯ 10 ದಿನಕ್ಕೊಮ್ಮೆ ಪಟ್ಟಣದಲ್ಲಿ ನೀರು ಬಿಡುತ್ತಿರುವ ಈ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಯಾವುದೇ ಯೋಜನೆಯ ಬಗ್ಗೆ ಚರ್ಚೆಯಾಗಲಿಲ್ಲ. ಅಮೃತ ಯೋಜನೆಯ ಕಾಮಗಾರಿ ಪೂರ್ಣಕ್ಕೆ ವರ್ಷ ಕಾಯುವಂತಾಗಿದ್ದು ಅಲ್ಲಿಯತನಕ ನೀರಿನ ಸಮಸ್ಯೆ ಹೀಗೆ ಮುಂದುವರೆಯುವುದು ತಪ್ಪಿದ್ದಲ್ಲ ಎಂದು ಹಾಜರಿದ್ದ ಸದಸ್ಯರು ಗೊಣಗಿದರು.
ಬಸ್ ನಿಲ್ದಾಣಕ್ಕೆ ಸ್ಥಳಾಭಾವ: ಸದ್ಯದ ಬಸ್ ನಿಲ್ದಾಣ ಸ್ಥಳಸಾಕಾಗುತ್ತಿಲ್ಲ. ಪ್ರತ್ಯೇಕ ಸ್ಥಳ ಒದಗಿಸಲು ತಾಲೂಕು ಆಡಳಿತ ಹಂತಹಂತವಾಗಿ ಕ್ರಮ ಕೈಗೊಳ್ಳುತ್ತಿದೆ ಎಂದು ಆದರೆ, ಈ ಯೋಜನೆಯ ಪ್ರಗತಿಯ ಬಗ್ಗೆ ಸ್ಪಷ್ಟಗಾಗಿ ಹಿಂದಿನಿಂದಲೂ ಜನರಿಗೆ ಇನ್ನೂ ಇದು ಕೇಳಿಕೊಳ್ಳುತ್ತಲೆ ಇದ್ದಾರೆ.
ಕೋರ್ಟ್ ಕಟ್ಟಡ ಮತ್ತು ವಾರದ ಸಂತೆ:
ತಾಲೂಕು ಆಡಳಿತದ ಹಿಂಬದಿಯ ನಿವೇಶನದಲ್ಲಿ ಹೊಸ ಕೋರ್ಟ್ ಕಟ್ಟಡ ನಿರ್ಮಾಣಕ್ಕೆ ಸಿದ್ಧತೆ ನಡೆಯುತ್ತಿದೆ. ವಾರದ ಸಂತೆಗೆ ಶ್ರೀರಾಮಟ್ಟಿ ಮಾರುಕಟ್ಟೆಯಲ್ಲಿ ಸ್ಥಳ ಸಾಕಾಗದಿರುವುದರಿಂದ ಎಪಿಎಂಸಿ ನಿವೇಶನದಲ್ಲಿ ವ್ಯವಸ್ಥೆ ಮಾಡುವ ಚಿಂತನೆ ಇದೆ. ಆದರೆ, ಈ ಯೋಜನೆಗಳಿಗೆ ಗಡುವು ನಿಗದಿಯಾಗಿಲ್ಲ.
ಶ್ರೀರಾಮಟ್ಟಿ ಕಟ್ಟೆಯ ಕಾಂಪ್ಲೆಕ್ಸ್: ಪುರಸಭೆ ನಿವೇಶನದಲ್ಲಿರುವ ಶ್ರೀರಾಮಮಾರುಕಟೆಯ ಕಟ್ಟಡಗಳ ವ್ಯಾಪಾರಿಗಳ ಗುತ್ತಿಗೆ ಅವಧಿ ಮುಗಿದಿದ್ದು, ಇವುಗಳನ್ನು ತೆರವುಗೊಳಿಸಿ ಹೊಸ ಮಾದರಿಯ ಕಾಂಪ್ಲೆಕ್ಸ್ ನಿರ್ಮಿಸುವ ಸಲಹೆಯನ್ನು ಶಾಸಕರು ನೀಡಿದರು. ಈ ಪ್ರಸ್ತಾವಕ್ಕೆ ಸರ್ವ ಸದಸ್ಯರು ಒಪ್ಪಿಗೆ ಸೂಚಿಸಿದರೂ, ಕಾರ್ಯಾರಂಭದ ಬಗ್ಗೆ ಯಾವುದೇ ಸ್ಪಷ್ಟತೆ ಹೊರಬೀಳದಿದ್ದರು ಮುಂದಿನ ದಿನಗಳಲ್ಲಿ ನಡೆಯುವ ಇರಾದೆ ತೋರಿಸಲಾಗಿದೆ.
ಆಶ್ರಯ ನಿವೇಶನ ಯೋಜನೆ: ಪಟ್ಟಣದ ಬಸ ನಿವಾಸಿಗಳಿಗೆ ಕಳೆದ 15 ವರ್ಷಗಳಿಂದಲೂ ನಿಗದಿಪಡಿಸಿದ 15 ಎಕರೆ ನಿವೇಶನದಲ್ಲಿ ಮತ್ತೊಂದು ಕಡೆ 9 ಎಕರೆಯಲ್ಲಿ ಆಶ್ರಯ ಮನೆಗಳ ನಿರ್ಮಾಣ ಯೋಜನೆ ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ. ಈಗ ಈ ಯೋಜನೆಯನ್ನು ಪುನರಾರಂಭಿಸಿ ಬಡವರಿಗೆ ಮನೆಗಳನ್ನು ವಿತರಿಸುವಂತೆ ಶಾಸಕರು ಈ ಸಭೆಯಲ್ಲೂ ಸೂಚಿಸಿದರು. ಆದರೆ, ಈ ಯೋಜನೆಯ ಜನರಿಗೆ ಭರವಸೆಯಾಗಿ ಉಳಿದಿದೆ.
ಕ್ಯಾಂಟೀನ್ ವಿಳಂಬ: ಇನ್ನೇನು ತಿಂಗಳಲ್ಲೇ ಪಟ್ಟಣದ ಮಾರುಕಟ್ಟೆಯಲ್ಲಿ ಸರ್ಕಾರ ಇಂದಿರಾ ಕ್ಯಾಂಟೀನ್ ಕಟ್ಟಡ ನಿರ್ಮಾಣಗೊಂಡು ಆರಂಭಗೊಳ್ಳುತ್ತದೆ ಎಂದಿದ್ದ ಜನರಿಗೆ ಆರು ತಿಂಗಳಾದರು ಇನ್ನೂ ಆರಂಭಗೊಂಡಿಲ್ಲ. ಕಟ್ಟಡಕ್ಕಾಗಿ ತರಕಾರಿ ವ್ಯಾಪಾರಿಗಳ ವಿರೋಧದ ನಡುವೆ ಕಟ್ಟಡ ತುರ್ತಾಗಿ ಪೂರ್ಣಗೊಂಡಿದ್ದರೂ, ಇನ್ನೂ ಕ್ಯಾಂಟಿನ್ ಆರಂಭದ ಸುಳಿವಿಲ್ಲ. ಇದನ್ನು ಸಭೆಯಲ್ಲಿ ಪ್ರಸ್ತಾಪಿಸಿದ ಸದಸ್ಯ ಈರಣ್ಣಾ ಹತ್ತರಕಿ ಅವರು, ಗುತ್ತಿಗೆದಾರರಿಂದ ಕಾಮಗಾರಿ ಸಂಪೂರ್ಣವಾಗಿ ಹಸ್ತಾಂತರವಾಗದ ಕಾರಣ ಉದ್ಘಾಟನೆಗೆ ವಿಳಂಬವಾಗುತ್ತಿದೆ. ಮುಖ್ಯಾಧಿಕಾರಿ ಸಂಗಮೇಶ್ ಪನಶೆಟ್ಟಿ ಅವರು ಸಣ್ಣ ಪುಟ್ಟ ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಆಳಂದ ಪುರಸಭೆಯ ಈ ಸಭೆಯು ಪಟ್ಟಣದ ದೀರ್ಘಕಾಲದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ನಡೆದಿದ್ದರೂ, ಚರ್ಚೆಯಾದ ವಿಷಯಗಳು ಕಾರ್ಯರೂಪಕ್ಕೆ ಬಂದಿಲ್ಲದಿರುವುದು ಜನರಲ್ಲಿ ಭರವಸೆಯ ಕೊರತೆಯನ್ನು ಮೂಡಿಸಿದೆ.
ವಿಶೇಷವಾಗಿ, ಮುಖ್ಯರಸ್ತೆ ಅಗಲೀಕರಣ ಯೋಜನೆಯು ವರ್ಷಗಳಿಂದ ಕೇವಲ ಚರ್ಚೆಯಾಗಿ ಉಳಿದಿದೆ. ಪಟ್ಟಣದ ಟ್ರಾಫಿಕ್ ದಟ್ಟಣೆ ಮತ್ತು ವಾಣಿಜ್ಯ ಚಟುವಟಿಕೆಗಳಿಗೆ ಈ ಯೋಜನೆಯು ಅತ್ಯಗತ್ಯವಾಗಿದ್ದರೂ, ಯಾವುದೇ ಗಣನೀಯ ಪ್ರಗತಿಯಾಗಿಲ್ಲ. ಇದು ಆಡಳಿತದ ನಿರಾಸಕ್ತಿಯನ್ನು ಎತ್ತಿ ತೋರಿಸುತ್ತದೆ ಸರ್ವರ ಸಹಮ್ಮತಿಯಿದೆ ಎಂದು ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರು ಧ್ವನಿಯೆತ್ತಿದರು.
ಆಶ್ರಯ ನಿವೇಶನ ಯೋಜನೆಯು ಆಳಂದದ ಬಡವರಿಗೆ ಸ್ವಂತ ಮನೆಯ ಕನಸನ್ನು ನೀಡುವ ಭರವಸೆಯಾಗಿತ್ತು. ಆದರೆ, 15 ಎಕರೆ ನಿವೇಶನದಲ್ಲಿ 9 ಎಕರೆಯಲ್ಲಿ ಮನೆಗಳ ನಿರ್ಮಾಣ ಯೋಜನೆಯು ಆಡಳಿತದ ಉದಾಸೀನದಿಂದಾಗಿ ಸ್ಥಗಿತಗೊಂಡಿದೆ. ಈ ಯೋಜನೆಯ ಪುನರಾರಂಭದ ಚರ್ಚೆಯು ಜನರಲ್ಲಿ ಆಶಾದಾಯಕವಾದರೂ, ಕಾಲಮಿತಿಯಿಲ್ಲದ ಈ ಭರವಸೆಗಳು ಜನರ ತಾಳ್ಮೆಯನ್ನು ಪರೀಕ್ಷಿಸುತ್ತಿವೆ.
ಬಸ್ ನಿಲ್ದಾಣ ಮತ್ತು ವಾರದ ಸಂತೆಗೆ ಸ್ಥಳಾಭಾವದ ಸಮಸ್ಯೆಯು ಪಟ್ಟಣದ ಮೂಲಭೂತ ಸೌಕರ್ಯದ ಕೊರತೆಯನ್ನು ಬಿಂಬಿಸುತ್ತದೆ. ಶಾಸಕರು ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಭರವಸೆ ನೀಡಿದರೂ, ಯೋಜನೆಗಳಿಗೆ ಗಡುವು ಮತ್ತು ಸ್ಪಷ್ಟ ರೂಪರೇμÉ ಇಲ್ಲದಿರುವುದು ಜನರಲ್ಲಿ ಅನುಮಾನ ಮೂಡಿಸಿದೆ.
ಕ್ಯಾಂಟೀನ್ ಕಟ್ಟಡದಂತಹ ಸಣ್ಣ ಯೋಜನೆಗಳೂ ಗುತ್ತಿಗೆದಾರರ ವಿಳಂಬದಿಂದ ಸ್ಥಗಿತಗೊಂಡಿರುವುದು ಆಡಳಿತದ ಕಾರ್ಯಕ್ಷಮತೆಯ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಶಾಸಕರ ಆಕ್ಷೇಪದ ನಂತರವೂ ಈ ಸಮಸ್ಯೆಗೆ ತಕ್ಷಣದ ಪರಿಹಾರ ಸಿಗದಿರುವುದು ಆಡಳಿತದ ದೌರ್ಬಲ್ಯವನ್ನು ತೋರಿಸುತ್ತದೆ.
ಪರಿಣಾಮಕಾರಿ ಪರಿಹಾರದ ಅಗತ್ಯ: ಆಳಂದ ಪಟ್ಟಣದ ಜನತೆಗೆ ಮೂಲಭೂತ ಸೌಕರ್ಯ, ವಸತಿ, ಮತ್ತು ಉತ್ತಮ ರಸ್ತೆಗಳ ಕನಸುಗಳು ಕೇವಲ ಚರ್ಚೆಯಾಗಿ ಉಳಿಯದೆ ಕಾರ್ಯರೂಪಕ್ಕೆ ಬರಬೇಕಿದೆ. ಪುರಸಭೆಯ ಆಡಳಿತ ಮಂಡಳಿಯು ಈಗಿನ ಎಂಟು ತಿಂಗಳ ಅವಧಿಯಲ್ಲಿ ಜನರ ನಿರೀಕ್ಷೆಗಳಿಗೆ ತಕ್ಕಂತೆ ಕಾರ್ಯನಿರ್ವಹಿಸದಿದ್ದರೆ, ಜನರಲ್ಲಿ ಆಡಳಿತದ ಮೇಲಿನ ವಿಶ್ವಾಸವು ಮತ್ತಷ್ಟು ಕುಸಿಯುವ ಸಾಧ್ಯತೆಯಿದೆ. ಶಾಸಕರು, ಪುರಸಭೆ ಅಧಿಕಾರಿಗಳು, ಮತ್ತು ಸಿಬ್ಬಂದಿಗಳು ಒಗ್ಗಟ್ಟಿನಿಂದ ಕಾಲಮಿತಿಯೊಳಗೆ ಯೋಜನೆಗಳನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಗಂಭೀರ ಕ್ರಮ ಕೈಗೊಳ್ಳಬೇಕು
ಒಟ್ಟಾರೆಯಾಗಿ, ಆಳಂದ ಪುರಸಭೆಯ ಈ ಸಭೆಯು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಒಂದು ಅವಕಾಶವಾಗಿತ್ತು. ಆದರೆ, ಚರ್ಚೆಯಾದ ವಿಷಯಗಳು ಕಾರ್ಯರೂಪಕ್ಕೆ ಬಾರದಿದ್ದರೆ, ಜನರ ಕನಸುಗಳು ಕರಗಿ, “ಕಾದು ನೋಡಿ” ಎಂಬ ಭರವಸೆಯೇ ಉಳಿಯುವ ಸಾಧ್ಯತೆಯಿದೆ ತಳಿಹಾಕಲಾಗದು.
ಸಭೆಯಲ್ಲಿ ಪುರಸಭೆ ಅಧ್ಯಕ್ಷ ಫೀರದೋಸ್ ಅನ್ಸಾರಿ ಮಾತನಾಡಿದರು. ಉಪಾಧ್ಯಕ್ಷ ಕವಿತಾ ಎಸ್. ನಾಯಕ, ಶ್ರೀಶೈಲ ಪಾಟೀಲ, ಶಿವುಪುತ್ರ ನಡಗೇರಿ, ಲಕ್ಷ್ಮಣ ಝಳಕಿ, ಮೃತ್ಯುಂಜಯ ಆಲೂರ, ರಾಜಶ್ರೀ ಶ್ರೀಶೈಲ ಖಜೂರಿ, ವೈಹಿದ್ ಜರ್ದಿ, ಅಮ್ಜದ್ ಅಲಿ ಖಜರ್ಗಿ, ಆಸೀಫ್ ಚೌಸ್ ಸಮಸ್ಯೆಗಳು ಪ್ರಸ್ತಾಪಿಸಿ ಪರಿಹಾರಕ್ಕೆ ಒತ್ತಾಯಿಸಿದರು.
Comments are closed.