ಆಳಂದ: ಪಡಸಾವಳಿ ಗ್ರಾಮದಲ್ಲಿ ನಡೆದ ಧಾರ್ಮಿಕ ಸಮಾರಂಭದಲ್ಲಿ ಜಿಡಗಾ ಶ್ರೀಮಠದಿಂದ ಉಡಿತುಂಬುವ ಕಾರ್ಯದಲ್ಲಿ ಪಾಲ್ಗೊಂಡ ತಾಯಂದಿರು.
ಆಳಂದ: ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿದ್ದ ಜಿಡಗಾ ಮಠದ ಷಡಕ್ಷರಿ ಶಿವಯೋಗಿ ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳು ಮಾತನಾಡಿದರು. ಡಾ. ಶಂಭುಲಿಂಗ ಶ್ರೀ, ನಂದಗಾಂವ, ಅಕ್ಕಲಕೋಟ ಶ್ರೀಗಳಿದ್ದಾರೆ.
ಆಳಂದ: ತಾಲೂಕಿನ ಪಡಸಾವಳಿ ಧರ್ಮರಾಯ ದೇವಾಲಯದಲ್ಲಿ ನೂತನ ಶೀಲಾ ಮಂಟಪ ಉದ್ಘಾಟನೆ, ಕಳಸಾರೋಹಣ ಮಹೋತ್ಸವ, ಲಕ್ಷದೀಪೆÇೀತ್ಸವ ಹಾಗೂ ಶ್ರೀ ಷಡಕ್ಷರಿ ಶಿವಯೋಗಿ ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳಿಗೆ ಭವ್ಯ ಸ್ವಾಗತ; ತುಲಾಭಾರ ಸೇವೆಯೊಂದಿಗೆ ಜಿಡಗಾ ಶ್ರೀಮಠದಿಂದ ವಿಶೇಷ ಮಹಾಪ್ರಸಾದ ವಿತರಣೆ ಅದ್ಧೂರಿಯಾಗಿ ನಡೆಯಿತು.
ತಾಲೂಕಿನ ಪಡಸಾವಳಿ ಗ್ರಾಮದ ಶ್ರೀ ಧರ್ಮರಾಯ ದೇವಾಲಯದಲ್ಲಿ ಶನಿವಾರ ನಡೆದ ಭವ್ಯ ಧಾರ್ಮಿಕ ಕಾರ್ಯಕ್ರಮವು ಗ್ರಾಮಸ್ಥರ ಭಕ್ತಿಭಾವ ಮತ್ತು ಸಾಮರಸ್ಯವನ್ನು ಮೆರೆದಿತು.
ಈ ಕಾರ್ಯಕ್ರಮದಲ್ಲಿ ನೂತನ ಶೀಲಾ ಮಂಟಪದ ಉದ್ಘಾಟನೆ, ಕಳಸಾರೋಹಣ ಮಹೋತ್ಸವ, ಲಕ್ಷದೀಪೆÇೀತ್ಸವ ಹಾಗೂ ಶ್ರೀ ಶಂಭುಲಿಂಗ ಶಿವಾಚಾರ್ಯರ 35ನೇ ಪಟ್ಟಾಭಿμÉೀಕ ವಧರ್ಂತಿ ಮಹೋತ್ಸವವನ್ನು ಆಚರಣೆಗೆ ಜಿಡಗಾ ಶ್ರೀಗಳು ಚಾಲನೆ ನೀಡಿದರು.
ಕಾರ್ಯಕ್ರಮದ ಆರಂಭದಲ್ಲಿ, ಮುಗಳಖೋಡ-ಜಿಡಗಾದ ಪರಮ ಪೂಜ್ಯ ಶ್ರೀ ಷಡಕ್ಷರಿ ಶಿವಯೋಗಿ ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳನ್ನು ಶ್ರೀ ಶಿವಲಿಂಗೇಶ್ವರ ಸಂಸ್ಥಾನ ಹಿರೇಮಠದ ಶ್ರೀ ಶಂಭುಲಿಂಗ ಶಿವಾಚಾರ್ಯರು ಸೇರಿದಂತೆ ಗ್ರಾಮದ ಸಾವಿರಾರು ತಾಯಂದಿರು ಕುಂಭ ಕಳಶಗಳೊಂದಿಗೆ ಶ್ರೀಮಠದಿಂದ ಹನುಮಾನ್ ಮಂದಿರ ಮಾರ್ಗದ ಮೂಲಕ ಶ್ರೀಗಳನ್ನು ಭವ್ಯ ರಥದಲ್ಲಿ ಕೂರಿಸಿ, ಗ್ರಾಮದ ಮುಖ್ಯ ಬೀದಿಗಳಲ್ಲಿ ಭಕ್ತಿಪೂರ್ಣ ಮೆರವಣಿಗೆ ನಡೆಸಲಾಯಿತು.
ಈ ಮೆರವಣಿಗೆ ಶ್ರೀ ಧರ್ಮರಾಯ ದೇವಾಲಯವನ್ನು ತಲುಪಿತು, ಅಲ್ಲಿ ಶ್ರೀ ಷಡಕ್ಷರಿ ಶಿವಯೋಗಿ ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳು ಲಿಂಗಪ್ರಾಣ ಪ್ರತಿμÁ್ಠಪನೆಯ ಪವಿತ್ರ ಕಾರ್ಯವನ್ನು ವಿಧಿವತ್ತಾಗಿ ನೆರವೇರಿಸಿದರು.
ಕಾರ್ಯಕ್ರಮದ ವೇದಿಕೆಗೆ ಆಗಮಿಸಿದ ಶ್ರೀಗಳು, ಪಡಸಾವಳಿ ಗ್ರಾಮದ ಸಾವಿರಾರು ತಾಯಂದಿರಿಗೆ ಜಿಡಗಾ ಶ್ರೀಮಠದ ವತಿಯಿಂದ ಉಡಿತುಂಬಿದ ಕಾರ್ಯಕ್ರಮ ನೆರವೇರಿಸಿದರು. ಈ ಸಂದರ್ಭದಲ್ಲಿ ಶ್ರೀಗಳು, “ನೂರು ಕಾಲ ಎಲ್ಲ ತಾಯಂದಿರು ಸುಮಂಗಲೆಯರಾಗಿ ಬಾಳಲಿ” ಎಂದು ಶುಭ ಹಾರೈಸಿದರು.
ಈ ವೇಳೆ ಜಿಡಗಾ ಶ್ರೀಮಠದಿಂದ ವಿಶೇಷವಾಗಿ ತಯಾರಿಸಲಾದ ಹಾಲು ಹುಗ್ಗಿಯ ಮಹಾಪ್ರಸಾದ ಆಗಮಿಸಿದ್ದ ಗ್ರಾಮಸ್ಥರಿಗೆ ವಿತರಿಸಲಾಯಿತು, ಅಲ್ಲದೆ, ಪ್ರತಿಯಾಗಿ ಪಡಸಾವಳಿ ಗ್ರಾಮಸ್ಥರು ಸಹ ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳಿಗೆ ತುಲಾಭಾರ ಸೇವೆಯನ್ನು ಭಕ್ತಿಪೂರ್ವಕವಾಗಿ ಸಲ್ಲಿಸಿದರು.
ಈ ಧಾರ್ಮಿಕ ಸಮಾರಂಭದ ವೇದಿಕೆಯಲ್ಲಿ ಡಾ. ಶಂಭುಲಿಂಗ ಶಿವಾಚಾರ್ಯರು, ನಂದಗಾಂವ ಮಠದ ಶ್ರೀ ರಾಜಶೇಖರ ಮಹಾಸ್ವಾಮಿಗಳು, ಅಕ್ಕಲಕೋಟ ಮಠದ ಶ್ರೀ ಬಸವಲಿಂಗ ಮಹಾಸ್ವಾಮಿಗಳು ಸೇರಿದಂತೆ ಹಲವು ಮಠಾಧೀಶರು, ಧುರೀಣರು ಮತ್ತು ಗ್ರಾಮ ಸೇರಿ ನೆರೆಹೊರೆಯ ಗ್ರಾಮಗಳ ಭಕ್ತಾದಿಗಳು ಭಾಗವಹಿಸಿದ್ದರು.
Comments are closed.