ಆಳಂದ: ಬಸವಣ್ಣಸಂಗೋಳಗಿ ಗ್ರಾಮದಲ್ಲಿ ಪಟ್ಟಣದ ವಿಕೆಜೆ ಪದವಿ ಮಹಾವಿದ್ಯಾಲಯ ಎನ್ಎಸ್ಎಸ್ ಘಟಕದ ವಿಶೇಷ ಶಿಬಿರರವನ್ನು ಮಾಜಿ ಶಾಸಕ ಸುಭಾಷ ಗುತ್ತೇದಾರ ಧ್ವಜಾರೋಹಣ ಕೈಗೊಂಡು ಉದ್ಘಾಟಿಸಿ ಮಾತನಾಡಿದರು. ಧರ್ಮರಾಯ ಜವಳಿ, ಪ್ರಾಚಾರ್ಯ ಕಲ್ಯಾಣಿ ಸಾವಳಗಿ ಇತರರು ಇದ್ದರು.
ಆಳಂದ: “ಇದೊಂದು ತಾಂತ್ರಿಕ ಯುಗ. ಇಂದು ಎμÉ್ಟೀ ಸಂಪತ್ತು ಹೊಂದಿದ್ದರೂ ಆರೋಗ್ಯ ಗಟ್ಟಿಯಾಗಿರದಿದ್ದರೆ ಎಲ್ಲವೂ ವ್ಯರ್ಥ. ಆರೋಗ್ಯವೇ ಮೊದಲ ಹಣಕಾಸು ಎಂಬುದನ್ನು ನಾವು ಮರೆಯಬಾರದು,” ಎಂದು ಮಾಜಿ ಶಾಸಕ ಸುಭಾಷ ಗುತ್ತೇದಾರ ಅವರು ಹೇಳಿದರು.
ತಾಲೂಕಿನ ಬಸವಣ್ಣಸಂಗೋಳಗಿ ಗ್ರಾಮದ ಬಸವೇಶ್ವರ ದೇವಾಲಯದಲ್ಲಿ ವಿಕೆಜಿ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಘಟಕ ಆಯೋಜಿಸಿದ್ದ ವಿಶೇಷ ಶಿಬಿರ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಮೂಢನಂಬಿಕೆಯಿಂದ ಜನತೆ ಇನ್ನೂ ಪೀಡಿತರಾಗಿರುವುದನ್ನು ಉದಾಹರಿಸಿ, “ಮಾಟ, ಪವಾಡ, ಅಂಧವಿಶ್ವಾಸಗಳನ್ನು ತೊರೆದು ವೈಜ್ಞಾನಿಕ ಮನೋಭಾವನೆ ಬೆಳೆಸಿಕೊಳ್ಳಿ. ನಾವೆಲ್ಲರೂ ಜವಾಬ್ದಾರಿಯುತ ನಾಗರಿಕರಾಗಬೇಕು. ಸ್ವಚ್ಚ ಪರಿಸರ ನಿರ್ಮಾಣವು ನಮ್ಮೆಲ್ಲರ ಕರ್ತವ್ಯವಾಗಿದೆ. ಗಿಡಮರಗಳನ್ನು ನೆಟ್ಟು ಬೆಳೆಸುವುದು ನಿಸರ್ಗಪೆÇೀಷಣೆಯತ್ತದ ಮೊದಲ ಹೆಜ್ಜೆ,” ಎಂದು ಶಿಬಿರದ ಆಮಂತ್ರಣ ಪತ್ರದಲ್ಲಿನ ವಿಷಯ ಉಲ್ಲೇಖಿಸಿ ಮಾತನಾಡಿದರು.
ವಿದ್ಯಾರ್ಥಿಗಳ ವ್ಯಕ್ತಿತ್ವ ಮತ್ತು ಮಾನವೀಯ ಮೌಲ್ಯಗಳ ಬೆಳವಣಿಗೆಗಾಗಿ ಇಂಥ ಶಿಬಿರಗಳು ತುಂಬಾ ಸಹಾಯಕವಾಗುತ್ತವೆ ಶಿಬಿರದ ಮೂಲಕ ತಮ್ಮ ಒಳಗಿನ ಶಿಸ್ತು, ಸೇವಾಭಾವನೆ ಮತ್ತು ಶಿಕ್ಷಣದ ಗುರಿಯನ್ನು ಸಾಧಿಸಲು ಮುಂದಾಗಬೇಕು. ಸಮಾಜದಲ್ಲಿ ಉದಾತ್ತ ಮೌಲ್ಯಗಳನ್ನು ಕಾಯ್ದು ಕೊಳ್ಳುವುದು ನಮಗೆಲ್ಲರ ಹೊಣೆಗಾರಿಕೆ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.
“ದುಶ್ಚಟಗಳಿಗೆ ಬಲಿಯಾಗಬೇಡಿ. ನಿಮ್ಮ ಜೀವನದ ಪಯಣವನ್ನು ತಂದೆ ತಾಯಿಯ ಮಾರ್ಗದರ್ಶನದಂತೆ ನಡೆಸಿ. ಅವರ ಆಶಯಗಳಿಗೆ ಅನುರೂಪವಾಗಿ ಬದುಕು ಕಟ್ಟಿಕೊಳ್ಳಿ. ವಿವಾಹವನ್ನೂ ಕೂಡ ಪಾಲಕರ ಸಮಮತಿಯಲ್ಲಿ, ಸದುದ್ದೇಶದೊಂದಿಗೆ ಮಾಡಿಕೊಳ್ಳುವುದು ಶ್ರೇಯಸ್ಕರ,” ಎಂದು ಯುವಜನತೆಗೆ ಅವರು ಕರೆ ನೀಡಿದರು.
ಅತಿಥಿಗಳಾಗಿ ಪಾಲ್ಗೊಂಡಿದ್ದ ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ತು ಸದಸ್ಯ ಧರ್ಮರಾಜ್ ಜವಳಿ, ಸಂಸ್ಥೆಯ ಆಡಳಿತಾಧಿಕಾರಿ, ಕಸಾಪ ಅಧ್ಯಕ್ಷ ಹಣಮಂತ ಶೇರಿ, ಹಿರಿಯ ಪತ್ರಕರ್ತ ಮಹಾದೇವ ವಡಗಾಂವ, ಪ್ರಾಚಾರ್ಯ ಕಲ್ಯಾಣಿ ಎಸ್. ಸಾವಳಗಿ ಅವರು ಶಿಬಿರವನ್ನು ಉದ್ದೇಶಿಸಿ ಮಾತನಾಡಿದರು.
ಗ್ರಾಮದ ಶಿವಶರಣಯ್ಯ ಸ್ವಾಮಿ, ಎನ್ಎಸ್ಎಸ್ ಅಧಿಕಾರಿ ಮಹೇಶ ಮಾಡಿಯಾಳೆ, ಡಾ. ರಾಜಕುಮಾರ ಬಡಿಗೇರ, ಮಲ್ಲಿಕಾರ್ಜುನ ಬೇಡಗೆ ಸೇರಿದಂತೆ ವಿದ್ಯಾರ್ಥಿಗಳು, ಉಪನ್ಯಾಸಕ ವೃಂದ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.
ಘಟಕಾಧಿಕಾರಿ ರಾಜೇಶ್ವರಿ ಸುತಾರ ಸ್ವಾಗತಿಸಿದರು. ಪ್ರಕಾಶ ತಾವರಗೇರಿ ನಿರೂಪಿಸಿದರು. ಉಪನ್ಯಾಸಕಿ ಧಾನಮ್ಮ ವಂದಿಸಿದರು.
Comments are closed.