ಆಳಂದ: ತಾಲೂಕಿನ ಕೊಡಲಹಂಗರಗಾ ಗ್ರಾಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಶಿವರಾಯ ನಡಗೇರಿ ಸೇರಿ ಪುತ್ರ ಮತ್ತು ಕಿರಿಯ ಸೊಸೆಯ ಮೇಲೆ ಮೇಲೆ ಹಣದ ವಿವಾದದ ಹಿನ್ನೆಲೆಯಲ್ಲಿ ಅಧ್ಯಕ್ಷರ ಹಿರಿಯ ಸೊಸೆಯ ಸಂಬಂಧಿಕರೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ.
ಈ ದುರ್ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಅಧ್ಯಕ್ಷ ಶಿವರಾಯ ನಡಗೇರಿ, ಪುತ್ರ ರಾಜು ನಡಗೇರಿ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಕರಣದ ವಿವರಗಳ ಪ್ರಕಾರ, ಶಿವರಾಯ ನಡಗೇರಿ ಅವರ ಹಿರಿಯ ಮಗನ ನಿಧನದ ನಂತರ ಅವರ ಸೊಸೆಯ ಬಂಧುಗಳೊಂದಿಗೆ ಹಣಕಾಸಿನ ಒಪ್ಪಂದವೊಂದು ಮಾಡಿಕೊಳ್ಳಲಾಗಿತ್ತು. ಆದರೆ, ಒಪ್ಪಂದದಂತೆ ನಿಗದಿತ ಸಮಯಕ್ಕೆ ಹಣವನ್ನು ಪಾವತಿಸದ ಕಾರಣ ಹಾಗೂ ಮೂರು ತಿಂಗಳ ಹಿಂದೆ ಹೃದಯ ಚಿಕಿತ್ಸೆಗೆ ಒಳಗಾಗಿದ್ದ ಕಾರಣ ಹಣ ನೀಡಲಾಗಿರಲಿಲ್ಲ. ಆದರೆ ಆಕ್ರೋಶಗೊಂಡ ಸೊಸೆಯ ತರವು ಕೊಡಲಂಗರಗಾ ಗ್ರಾಮದಲ್ಲಿನ ಬಂಧುಗಳೇ ಇವರ ಮೇಲೆ ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಈ ಹಲ್ಲೆಯಲ್ಲಿ ಗಂಭೀರ ಗಾಯಗಳನ್ನು ಎದುರಿಸಿದ ಅಧ್ಯಕ್ಷರ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಕುರಿತು ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೆÇಲೀಸರು ಘಟನೆಯ ಬಗ್ಗೆ ತನಿಖೆ ಆರಂಭಿಸಿದ್ದು, ಆರೋಪಿಗಳನ್ನು ಗುರುತಿಸಿ ಕಾನೂನು ಕ್ರಮಕ್ಕೆ ಒಳಪಡಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದಾರೆ. ಈ ಘಟನೆಯು ಗ್ರಾಮದಲ್ಲಿ ಭಾರೀ ಆತಂಕ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ಮುಂದಿನ ತನಿಖೆಯಿಂದ ಈ ಪ್ರಕರಣದ ಸಂಪೂರ್ಣ ವಿವರಗಳು ಬಹಿರಂಗಗೊಳ್ಳುವ ನಿರೀಕ್ಷೆಯಿದೆ. ಆದರೆ ಘಟನೆ ಜರುಗಿ ನಾಲ್ಕುದಿನಗಳಾದರು ಆರೋಪಿತರನ್ನು ಬಂಧಿಸುವ ಕಾರ್ಯ ನಡೆದಿಲ್ಲ ಎಂದು ಹಲ್ಲೆಗೊಳಗಾದ ಅಧ್ಯಕ್ಷರ ಬಂಧುಗಳು ಆರೋಪಿಸಿದ್ದಾರೆ.
Comments are closed.