ಆಳಂದ: ಸಿಯುಕೆಯಲ್ಲಿ ಆಚರಿಸಿದ ವಿಶ್ವ ಸಮಾಜಕಾರ್ಯ ಉತ್ಸವ ಸಮಾರಂಭ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಉದ್ಘಾಟಿಸಿದರು. ಪೆÇ್ರ. ರವೀಂದ್ರ ಡಿ. ಗಡ್ಕರ್, ಡಾ. ಭಾಗ್ಯಶ್ರೀ, ಪೆÇ್ರ. ಪವಿತ್ರಾ ಆಲೂರ್, ಡಾ. ಚಿತ್ಕಲಾ ವೆಂಕರೆಡ್ಡಿ ಇತರರು ಇದ್ದರು.
ಆಳಂದ: “ವೇಗವಾಗಿ ವಿಕಸನಗೊಳ್ಳುತ್ತಿರುವ ಸಮಾಜದಲ್ಲಿ ಸಮಾಜ ಕಾರ್ಯಕರ್ತರು ಬಹಳ ಮುಖ್ಯ ಪಾತ್ರ ವಹಿಸುತ್ತಾರೆ” ಎಂದು ಕುಲಪತಿ ಪೆÇ್ರ. ಬಟ್ಟು ಸತ್ಯನಾರಾಯಣ ಹೇಳಿದರು. ಇಂದು ಅವರು ವಿಶ್ವ ಸಮಾಜಕಾರ್ಯ ದಿನದ ಅಂಗವಾಗಿ ಆಯೋಜಿಸಲಾದ ಸಮಾಜಕಾರ್ಯ ಉತ್ಸವ – 2025ನ್ನು ಉದ್ಘಾಟಿಸಿದ ಮಾತನಾಡುತ್ತಿದ್ದರು. “ಮಾನವರಿಗೆ ವಯಸ್ಸಾದಂತೆ, ಸಮಾಜವೂ ನಿರಂತರ ಬದಲಾವಣೆಗೆ ಒಳಗಾಗುತ್ತದೆ. ಇಂದಿನ ಜಗತ್ತಿನಲ್ಲಿ ಹಲವಾರು ಸಮಸ್ಯೆಗಳು ಉದ್ಭವಿಸುತ್ತಿವೆ ಮತ್ತು ನಮ್ಮ ಪರಿಸರದ ಬಗ್ಗೆ ಮಾತ್ರವಲ್ಲದೆ ನಮ್ಮ ಸುತ್ತಮುತ್ತಲಿನ ಜನರ ಬಗ್ಗೆಯೂ ನಾವು ಕಾಳಜಿ ವಹಿಸುವುದು ಕಡ್ಡಾಯವಾಗಿದೆ. ಹೆಚ್ಚುತ್ತಿರುವ ತಲೆಮಾರುಗಳ ನಡುವಿನ ಸಂಪರ್ಕದ ಕಡಿತ ಮತ್ತು ಮಾನವ ಯೋಗಕ್ಷೇಮದ ಬಗೆಗೆ ನಾವು ಗಮನಹರಿಸಬೇಕು. ಆದ್ದರಿಂದ ಸಮಾಜಕಾರ್ಯಕರ್ತರು ಪೀಳಿಗೆಗಳ ಬಾಂಧವ್ಯವನ್ನು ಪೆÇೀಷಿಸುವಲ್ಲಿ ಸಕ್ರಿಯ ಪಾತ್ರ ವಹಿಸಬೇಕು” ಎಂದು ಅವರು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ ಸಮಾಜ ಕಾರ್ಯ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪೆÇ್ರ. ರವೀಂದ್ರ ಡಿ. ಗಡ್ಕರ್ ಮಾತನಾಡಿ, “ಭಾರತೀಯ ಸಂವಿಧಾನದ ಮೂಲಭೂತ ಮೌಲ್ಯಗಳು ಮತ್ತು ಸಮಾಜ ಕಾರ್ಯಕರ್ತರು ಪಿತೃಪ್ರಧಾನ ವ್ಯವಸ್ಥೆಗಳ ಮತ್ತು ಸಾಮಾಜಿಕ ಅನ್ಯಾಯಗಳನ್ನು ಪ್ರಶ್ನಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಪ್ರತಿಯೊಬ್ಬ ನಾಗರಿಕನು ಸ್ವಾವಲಂಬಿಯಾಗಿರಬೇಕು, ಅದಕ್ಕಾಗಿ ನೀವು ನಿಮ್ಮನ್ನು ಪರೀಕ್ಷಿಸಿಕೊಳ್ಳಬೇಕು, ನಿಮ್ಮ ಸ್ವಂತ ಬೆಳಕಾಗಬೇಕು, ನಿಮ್ಮನ್ನು ನೀವು ಸಬಲಗೊಳಿಸಿಕೊಳ್ಳಬೇಕು, ಸ್ವಾವಲಂಬಿಯಾಗಬೇಕು – ಆಗ ಮಾತ್ರ ನೀವು ಇತರರಿಗೆ ಸ್ಫೂರ್ತಿ ನೀಡಬಹುದು” ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಅಂಗನವಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಕೃಷಿ, ಕೌಶಲ್ಯ ಅಭಿವೃದ್ಧಿ, ಮತ್ತು ನವೀಕರಿಸಬಹುದಾದ ಇಂಧನ, ಚಿಕಿತ್ಸಕ ಸೌಲಭ್ಯಗಳೊಂದಿಗೆ ವೃದ್ಧಾಶ್ರಮದ ಮಾದರಿ, ಸುಸ್ಥಿರ ನಗರ ಮಾದರಿ ಮತ್ತು ಕಾರ್ಖಾನೆಯ ಡಿಜಿಟಲ್ ಮಾದರಿಗಳನ್ನು ಪ್ರದರ್ಶಿಸಿದರು.
ಕಾರ್ಯಕ್ರಮದ ಸಂಯೋಜಕಿ ಡಾ. ಚಿತ್ಕಲಾ ವೆಂಕರೆಡ್ಡಿ ಪ್ರಾಸ್ತಾವಿಕ ಮಾತನಾಡಿದರು. ವಿಭಾಗದ ಮುಖ್ಯಸ್ಥೆ ಪೆÇ್ರ. ಪವಿತ್ರಾ ಆಲೂರ್ ಸ್ವಾಗತಿಸಿದರು. ಡಾ. ಭಾಗ್ಯಶ್ರೀ ವಂದಿಸಿದರು. ಕಾರ್ಯಕ್ರಮದಲ್ಲಿ ಪ್ರಾದ್ಯಾಪಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.
Comments are closed.