ಆಳಂದ ತಾಲೂಕಿನ ಪಡಸಾವಳಿ ಗ್ರಾಮದ ನವಕನಸುಗಾರ, ಸಮಾಜ ಸೇವಕ, ಬಿಜೆಪಿ ಮುಖಂಡ ಮಹೇಶ ಮುನ್ನೊಳ್ಳಿ ಅವರ 34ನೇ ಜನ್ಮ ದಿನದ ಪ್ರಯುಕ್ತ ಪಡಸಾವಳಿ ಗೆಳೆಯರ ಬಳಗ, ಗ್ರೂಪ್ ಆಫ್ ಸಾಯಿರಾಮ್ ಮೆಡಿಕಲ್ಸ್ ಮತ್ತು ಮಹೇಶ ಮುನ್ನೊಳ್ಳಿ ಅಭಿಮಾನಿ ಬಳಗದ ವತಿಯಿಂದ ಏಪ್ರೀಲ್ 8ರ ಗುರುವಾರದಂದು ಪಡಾಸಾವಳಿಯ ಅಂಬಾ ಭವಾನಿ ದೇವಸ್ಥಾನದಲ್ಲಿ ವಿವಿಧ ಜನೋಪಯೊಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ನಡೆಯುವ ಕಾರ್ಯಕ್ರಮದಲ್ಲಿ ಉಚಿತ ಆರೋಗ್ಯ ತಪಾಸಣೆ, ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ಹಾಗೂ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ ಪಡಸಾವಳಿ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಇದರ ಸದುಪಯೋಗಪಡೆಯಬೇಕು ಎಂದು ಆಯೋಜಕರು ತಿಳಿಸಿದ್ದಾರೆ.
ಕಾರ್ಯಕ್ರಮದ ಸಾನಿಧ್ಯವನ್ನು ಶಂಭುಲಿಂಗ ಶಿವಾಚಾರ್ಯರು ವಹಿಸಲಿದ್ದು, ಉದ್ಘಾಟಕರಾಗಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ದೀಪ ಬೆಳಗಿಸುವವರಾಗಿ ಜಿ.ಪಂ ಸದಸ್ಯ ಹರ್ಷಾನಂದ ಎಸ್ ಗುತ್ತೇದಾರ, ಮುಖ್ಯ ಅತಿಥಿಗಳಾಗಿ ಜಿ.ಪಂ ಸದಸ್ಯ ಗುರುಶಾಂತ ಪಾಟೀಲ ನಿಂಬಾಳ, ಆನಂದರಾವ ಪಾಟೀಲ ಕೊರಳ್ಳಿ, ಅರವಿಂದ ಕೋರಿ, ಆನಂದರಾವ ಗಾಯಕವಾಡ, ಶಿವರಾಜ ರಾಠೋಡ, ಸೈನಿಕ ರಾಠೋಡ, ಚಂಡುಲ ರಾಠೋಡ, ಬಾಬು ಕೋರೆ, ರಾಮಚಂದ್ರ ಘೋಡಕೆ ಭಾಗವಹಿಸಲಿದ್ದಾರೆ. ಗ್ರಾಮ ಪಂ ಅಧ್ಯಕ್ಷ ಪ್ರಕಾಶ ಬೆಳಂ ಅಧ್ಯಕ್ಷತೆ ವಹಿಸಲಿದ್ದಾರೆ.
Comments are closed.