ಲಿಂಗಸುಗೂರು : ತಾಲೂಕಿನ ನರಕಲದಿನ್ನಿ ಗ್ರಾಮ ಪಂಚಾಯತಿಯ ಜೂಲಗುಡ್ಡ ಗ್ರಾಮದ ಜನರಿಗೆ ನರೇಗಾ ಯೋಜನೆಯಡಿ ಕೆಲಸ ನೀಡದೇ ಪಿಡಿಓ ಸಾವ೯ಜನಿಕರಿಗೆ ವಂಚನೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಕಾಯ೯ನಿವಾ೯ಹಕ ಅಧಿಕಾರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ನರಕಲದಿನ್ನಿ ಗ್ರಾಮ ಪಂಚಾಯತಿ ಪಿಡಿಓ ಸರಿಯಾಗಿ ಕತ೯ವ್ಯಕ್ಕೆ ಹಾಜರು ಆಗುತ್ತಿಲ್ಲ, ಬಡತನದಿಂದ ಕೂಡಿದ ಜನರು ಕೂಲಿ ಮಾಡಲು ನರೇಗಾ ಯೋಜನೆಯಡಿ ಕೆಲಸಗಳನ್ನು ಕೇಳಿದರೆ ಯಾವುದೇ ಕೆಲಸ ನಮ್ಮಲ್ಲಿ ಇಲ್ಲ ಎಂದು ಆರಿಕೆ ಉತ್ತರ ನೀಡುತ್ತಾರೆ, ಅಲ್ಲದೇ ಪಂಚಾಯತಿಗೆ ಬರದೇ ಪೊನ್ ಸಂಪಕ೯ಕ್ಕೆ ಬರದೇ ಅಗೌರವವಾಗಿ ನಡೆದುಕೊಳ್ಳುತ್ತಿದ್ದಾರೆ ಇದರಿಂದ ಜನರಿಗೆ ತುಂಬಾನೆ ತೊಂದರೆ ಉಂಟಾಗಿದೆ ಎಂದು ಆರೋಪಿಸಿದರು.
ಪಿಡಿಓ ಸೇರಿ ಪಂಚಾಯತಿ ಸಿಬ್ಬಂದಿಗಳು ವತ೯ನೆ ಸರಿಯಾಗಿ ಪಂಚಾಯತಿ ಅನುದಾನ ಬಂದರೂ ಗ್ರಾಮಕ್ಕೆ ಮೂಲಭೂತ ಸೌಕಯ೯ಗಳು ನೀಡದೇ ನಿಲ೯ಕ್ಷ್ಯತನ ತೋರುತಿದ್ದಾರೆ ಅಲ್ಲದೇ ೨೦೦೫-೨೦೦೧೭ ಸೇರಿದಂತೆ ಅಂದಾಜು ಪತ್ರಿಕೆ ತೈಯಾರಿಸದೇ ಕಾಮಗಾರಿಗಳ ನಕಲಿ ಬಿಲ್ ಮಾಡಿ ಹಣವನ್ನು ಲೂಟಿ ಮಾಡಿದ್ದಾರೆ ಎಂದು ತಿಳಿಸಿದರು.
ಪಿಡಿಓ ಮತ್ತು ಗ್ರಾಮ ಪಂಚಾಯತಿ ಸಿಬ್ಬಂದಿಗಳ ವಿರುದ್ದ ಕಾನೂನು ಕ್ರಮ ಜರುಗಿಸಬೇಕು, ನರೇಗಾದಡಿ ಕೆಲಸಗಳನ್ನು ಜನರಿಗೆ ನೀಡಬೇಕು ಇಲ್ಲವಾದಲಿ ತಾಲೂಕ ಪಂಚಾಯತಿ ಕಛೇರಿಯ ಮುಂದೆ ಹೋರಾಟ ಮಾಡಲಾಗುವುದು ಎಂದು ಆಗ್ರಹಿಸಿದರು.
ಈ ವೇಳೆ ಮುಖಂಡರಾದ ಯಲ್ಲಾಲಿಂಗ, ರಾಜೇಶ್ವರಿ, ಪವನಕುಮಾರ, ಚನ್ನಪ್ಪ, ದೇವರಾಜ, ಸಿದ್ದು ಸೇರಿದಂತೆ ಇದ್ದರು.
Comments are closed.