ಆಧುನಿಕ ಶಿಕ್ಷಣದಲ್ಲಿ ಮೌಲ್ಯಗಳ ಕೊರತೆಯಿಂದ ಸಮಾಜದಲ್ಲಿ ಅರಾಜಕತೆ:
ಐಕೆಎಸ್ ಮೂಲಕ ಮೌಲ್ಯಾಧಾರಿತ ಬದುಕಿಗೆ ಕಿವಿಮಾತು ನೀಡಿದ ಕುಲಪತಿ ಬಟ್ಟು ಸತ್ಯನಾರಾಯಣ
ಆಳಂದ: ಸಿಯುಕೆಯಲ್ಲಿ ಆಯೋಜಿಸಿದ್ದ ಭಾರತೀಯ ಜ್ಞಾನ ಪರಂಪರೆಯ (ಐಕೆಎಸ್) ಪ್ರಸ್ತುತತೆʼ ಎಂಬ ವಿಚಾರ ಸಂಕಿರಣವನ್ನು ಕುಲಪತಿ ಪ್ರೊ. ಬಟ್ಟುಸತ್ಯನಾರಾಯಣ ಅವರು ಉದ್ಘಾಟಿಸಿದರು. ಕುಲಸಚಿವ ಪ್ರೊ. ಆರ್.ಆರ್. ಬಿರಾದಾರ, ಡಾ. ವಾಸುದೇವ್ ಐತಾಳ್, ಪೆÇ್ರ. ವೆಂಕಟೇಶ್ ರಾಯ್ಕರ್ ಇತರರು ಇದ್ದರು.
ಆಳಂದ: “ಮಾನವನ ಜೀವನವು ಸಂಪೂರ್ಣ ಭೌತಿಕಮಯವಾಗಿದೆ. ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಮಾನವೀಯ ಮೌಲ್ಯಗಳು, ನೈತಿಕತೆ ಮತ್ತು ನೀತಿಶಾಸ್ತ್ರದ ಕೊರತೆಯು ಸಮಾಜದಲ್ಲಿ ಹಲವಾರು ಸಾಮಾಜಿಕ ಸಮಸ್ಸಯೆಗಳನ್ನು ಹುಟ್ಟುಹಾಕಿದೆ. ಅಪರಾದ, ಆತ್ಮಹತ್ಯೆಯಂತಹ ಘಟನೆಗಳು ಹೆಚ್ಚಾಗುತ್ತಿವೆ” ಎಂದು ಸಿಯುಕೆಯ ಕುಲಪತಿ ಪೆÇ್ರ. ಬಟ್ಟು ಸತ್ಯನಾರಾಯಣ ಹೇಳಿದರು.
ತಾಲೂಕಿನ ಕಡಗಂಚಿ ಬಳಿಯ ಸಿಯುಕೆಯಲ್ಲಿ ನವದೆಹಲಿಯ ಭಾರತೀಯ ಶಿಕ್ಷಣ ಮಂಡಲ (ಬಿಎಸ್ಎಂ) ಸಹಯೋಗದೊಂದಿಗೆ ಸಿಯುಕೆ ಆಯೋಜಿಸಿದ್ದ ‘ʼಪ್ರಸ್ತುತ ಶೈಕ್ಷಣಿಕ ವಲಯದಲ್ಲಿ ಭಾರತೀಯ ಜ್ಞಾನ ಪರಂಪರೆಯ (ಐಕೆಎಸ್) ಪ್ರಸ್ತುತತೆʼ ಎಂಬ ಒಂದು ದಿನದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು. ಮುಂದುವರೆದು ಮಾತನಾಡಿ “ಭಾರತೀಯ ಜ್ಞಾನ ಪರಂಪರೆಯು ಮಾನವನ ಜೀವನದ ಸಾರವನ್ನು ಅರ್ಥಮಾಡಿಕೊಳ್ಳುವ ಮೂಲಕ ಜನರು ನೆಮ್ಮದಿಯ ಜೀವನವನ್ನು ಹೇಗೆ ನಡೆಸಬೇಕು ಮತ್ತು ಒತ್ತಡದ ಜೀವನದಿಂದ ಹೇಗೆ ಹೊರಬರಬೇಕು ಎಂಬುದನ್ನು ಕಲಿಸುತ್ತದೆ. ಐಕೆಎಸ್ ಅನ್ನು ಮರುಪರಿಶೀಲಿಸುವ ಮತ್ತು ಪ್ರಸ್ತುತ ಸನ್ನಿವೇಶದಲ್ಲಿ ಪರಿಸರ, ಸಾಮಾಜಿಕ, ಕೌಟುಂಬಿಕ ಸಮಸ್ಯೆಗಳನ್ನು ಪರಿಹರಿಸುವ ಸಮಯ ಇದಾಗಿದೆ, ಏಕೆಂದರೆ ಐಕೆಎಸ್ ಮುಖ್ಯವಾಗಿ ಮಾನವ ಕಾಳಜಿಯ ಬಗ್ಗೆ ಮಾತನಾಡುತ್ತದೆ” ಎಂದು ಹೇಳಿದರು.
ಮುಖ್ಯ ಭಾಷಣಕಾರರಾದ ಪುಣೆಯ ಡಿಇಎಸ್ ವಿಶ್ವವಿದ್ಯಾಲಯದ ಭಾರತೀಯ ಜ್ಞಾನ ಪರಂಪರೆಯ ವಿಭಾಗದ ಮುಖ್ಯಸ್ಥರಾದ ಡಾ. ವಾಸುದೇವ್ ಐತಾಳ್ ಮಾತನಾಡಿ “ಇತ್ತೀಚಿನ ದಿನಗಳಲ್ಲಿ ಐಕೆಎಸ್ ಹೆಚ್ಚು ಜನಪ್ರಿಯವಾಗುತ್ತಿದೆ, ಏಕೆಂದರೆ ಜನರು ಅದರ ಬಗ್ಗೆ ಹೆಚ್ಚು ಜಾಗೃತರಾಗುತ್ತಿದ್ದಾರೆ. ಐಕೆಎಸ್ನ ಮುಖ್ಯ ಗುರಿ ಎಲ್ಲಾ ಕ್ಷೇತ್ರಗಳಲ್ಲಿ ಭಾರತೀಯತೆಯನ್ನು ತರುವುದು, ಹೀಗಾಗಿ ಇದು ನಮ್ಮ ಸ್ವಂತಿಕೆಯನ್ನು ಗುರುತಿಸಿಕೊಳ್ಳಲು ನಮಗೆ ಸಹಾಯ ಮಾಡುತ್ತದೆ. ಐಕೆಎಸ್ ಬಗ್ಗೆ ಪಕ್ಷಪಾತದ ತಿಳುವಳಿಕೆಯನ್ನು ತಪ್ಪಿಸುವ ಮೂಲಕ, ನಾವು ಐಕೆಎಸ್ನ ತಂತ್ರಗಳನ್ನು ತಿಳಿದುಕೊಳ್ಳಬೇಕು. ಅದರಲ್ಲಿಯು ವಿಶೇಷವಾಗಿ ಅದರ ಅರ್ಹತೆ, ವಿಷಯ, ಪ್ರಯೋಜನ ಮತ್ತು ಐಕೆಎಸ್ನ ಪ್ರಸ್ತುತತೆಯನ್ನು ತಿಳಿದುಕೊಳ್ಳಬೇಕು” ಎಂದು ಅವರು ಹೇಳಿದರು.
ಗೌರವಾನ್ವಿತ ಅತಿಥಿ, ಕೊಲ್ಹಾಪುರದ ಸಂಜಯ್ ಘೋಡಾವತ್ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಮತ್ತು ಬಿಎಸ್ಎಂ ನ ಉತ್ತರ ಕರ್ನಾಟಕದ ಉಪಾಧ್ಯಕ್ಷರೂ ಆದ ಪೆÇ್ರ. ವೆಂಕಟೇಶ್ ರಾಯ್ಕರ್ ಮಾತನಾಡಿ “ಭಾರತೀಯ ಶಿಕ್ಷಣ ಮಂಡಲ ಒಂದು ಲಾಭರಹಿತ ಭಾರತೀಯ ಶಿಕ್ಷಣಕ್ಕಾಗಿ ದುಡಿಯುವ ಸಂಸ್ಥೆಯಾಗಿದೆ. ನಮ್ಮ ಶಾಲೆಯಲ್ಲಿ ನಮ್ಮ ಸಂಸ್ಕøತಿ, ಗುರುತು, ಇತಿಹಾಸ ಇತ್ಯಾದಿಗಳ ಬಗ್ಗೆ ನಮಗೆ ಎಂದಿಗೂ ಸರಿಯಾಗಿ ಹೇಳಲಾಗಿಲ್ಲ. ಬಿಎಸ್ಎಂ ಇವೆಲ್ಲವನ್ನೂ ನೋಡಿಕೊಳ್ಳುತ್ತಿದೆ ಮತ್ತು ಇವುಗಳನ್ನು ನಮ್ಮ ಶೈಕ್ಷಣಿಕ ಕಲಿಕೆಯ ಭಾಗವಾಗಿಸುವಲ್ಲಿ ಪ್ರಯತ್ನಿಸುತ್ತಿದೆ. ಇದರ ಪ್ರಮುಖ ಕೊಡುಗೆ ಎಂದರೆ ಎನ್ ಇ ಪಿ-2020” ಎಂದು ಹೇಳಿದರು.
ಕುಲಸಚಿವ ಆರ್ ಆರ್ ಬಿರಾದಾರ ಮಾತನಾಡಿ “ಯುವಜನರು ಒತ್ತಡದಿಂದ ಹೊರಬರಲು ಮತ್ತು ಅವರ ಮಾನಸಿಕ ಸಮಸ್ಯೆಗಳನ್ನು ಎದುರಿಸಲು ಸಾಧ್ಯವಾಗುತ್ತಿಲ್ಲ. ಐಕೆಎಸ್ ಕಲೆ, ಸಂಸ್ಕೃತಿ, ವೈದ್ಯಕೀಯ, ಆರ್ಥಿಕತೆ, ಆಯುರ್ವೇದ ಇತ್ಯಾದಿಗಳಲ್ಲಿ ವಿಶಾಲವಾದ ಜ್ಞಾನ ವ್ಯವಸ್ಥೆಯನ್ನು ಒಳಗೊಂಡಿದೆ. ಐಕೆಎಸ್ ಅನ್ನು ಅರ್ಥಮಾಡಿಕೊಳ್ಳಲು ಮತ್ತು ಭಾರತವನ್ನು ‘ವಿಶ್ವ-ಗುರು’ವನ್ನಾಗಿ ಮಾಡಲು ಎನ್ಇಪಿ ಸಾಧನವಾಗಿದೆ” ಎಂದು ಹೇಳಿದರು.
ಸಿಯುಕೆಯ ಬಿಎಸ್ಎಂನ ಸಂಚಾಲಕ ಮತ್ತು ಗಣಕ ನಿಕಾಯದ ಡೀನ್, ಪೆÇ್ರ. ಆರ್. ಎಸ್. ಹೆಗಾಡಿ ಪ್ರಾಸ್ತಾವಿಕ ಮಾತುಗಳನ್ನಾಡಿ “ಬಿಎಸ್ಎಂ ಆಗಸ್ಟ್ 27, 1969 ರಂದು ರಾಮ ನವಮಿಯ ದಿನದಂದು ಸ್ಥಾಪಿಸಲಾಯಿತು. ಅದರ ಅಂಗವಾಗಿ ದೇಶಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಭಾರತೀಯ ಶಿಕ್ಷಣ ವ್ಯವಸ್ಥೆಯನ್ನು ಪುನಃ ಸ್ಥಾಪಿಸುವುದು ಬಿಎಸ್ಎಂನ ಗುರಿಯಾಗಿದೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪೆÇ್ರ.ಚನ್ನವೀರ, ಪೆÇ್ರ.ಬಸವರಾಜ ಡೋಣೂರ, ಪೆÇ್ರ.ಜಿ.ಆರ್.ಅಂಗಡಿ, ಡಾ.ದೇವರಾಜಪ್ಪ, ಡಾ.ರವಿ ಖಣಗಿ, ಡಾ.ರಾಜೀವ್ ಜೋಶಿ, ಡಾ.ಕವಿತಾ ಹಿರೇಮಠ, ಡಾ.ಲಕ್ಷ್ಮಣ, ಡಾ.ರೂಪಾರಾಣಿ, ಡಾ.ಉದಯ ಪಾಟೀಲ, ಡಾ.ಸಂಗಮೇಶ್, ಡಾ.ಉದಯ ಪಾಟೀಲ, ಡಾ.ಕಾರ್ತಿಕ್, ಶಿಕ್ಷಕರು ಮತ್ತು ಸಂಶೋಧನಾ ವಿದ್ಯಾರ್ಥಿಗಳು ಹಾಜರಿದ್ದರು.
ಡಾ.ದೀಪ್ತಿ ಸ್ವಾಗತಿಸಿದರು. ಡಾ.ಜಯದೇವಿ ಜಂಗಮಶೀಟಿ ಮತ್ತು ಡಾ.ಸ್ವಪ್ನಿಲ್ ಚಾಪೇಕರ್ ರಾಷ್ಟ್ರಗೀತೆ ಮತ್ತು ನಾಡಗೀತೆಯನ್ನು ಹಾಡಿದರು. ಡಾ.ನೀತಿನ್ ಕಾರ್ಯಕ್ರಮ ನಿರೂಪಿಸಿದರು.
Comments are closed.