Shubhashaya News

ಯಡ್ಡೋಣಿ ಗ್ರಾಮದಲ್ಲಿ ಬಿಜೆಪಿ ಸಂಸ್ಥಾಪನಾ ದಿನಾಚರಣೆ

ಯಲಬುರ್ಗಾ ತಾಲೂಕಿನ ಕಲಬಾವಿ ಗ್ರಾಮದಲ್ಲಿ

ಯಲಬುರ್ಗಾ ತಾಲೂಕಿನ ಕಲಬಾವಿ ಗ್ರಾಮದಲ್ಲಿ ಮಂಗಳವಾರ ಬಿಜೆಪಿ ಸಂಸ್ಥಾಪನಾ ದಿನಾಚರಣೆ ಆಚರಿಸಿದರು.

ತಾಲೂಕಿನ ಯಡ್ಡೋಣಿ ಗ್ರಾಮದಲ್ಲಿ ಬಿಜೆಪಿ ಮುಖಂಡರು ಬಿಜೆಪಿ ಸಂಸ್ಥಾಪನಾ ದಿನಾಚರಣೆ ಮಂಗಳವಾರ ಆಚರಿಸಲಾಯಿತು.
ಬಿಜೆಪಿ ಯುವ ಮುಖಂಡ ಆದೇಶ ಬಿ.ರೊಟ್ಟಿ ಮಾತನಾಡಿ, ಕೇಂದ್ರದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಅತ್ತುತ್ಯಮವಾದ ಆಡಳಿತ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಪಕ್ಷವೂ ಉತ್ತಮವಾದ ಆಡಳಿತ ನಡೆಸತ್ತಿದ್ದು,ಜನರಿಗೆ ಸಮರ್ಪಕವಾದ ಯೋಜನೆಗಳನ್ನು ಅನುಷ್ಠಾನಗೊಳಿಸಿ ಜನಪರವಾದ ಕಾರ್ಯಗಳನ್ನು ಮಾಡಲಾಗಿದೆ ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಶ್ರೀ ಅಮರಪ್ಪ ವಂದಾಲಿ, ಸದಸ್ಯರಾದ ಹಿರೇಕಟ್ಟೆಪ್ಪ ತಳವಾರ, ಅನೂಸೂಯ ಬಸವರಾಜ ಹುಗ್ಗಿ, ಶರಣಪ್ಪ ಗೂಡೂರು, ಮುಖಂಡರಾದ ಮರಿಯಪ್ಪ ದಳಪತಿ, ಹುಗ್ಗೇಶ ಹುಗ್ಗಿ, ಮುದಿಯಪ್ಪ ಹರಿಜನ, ಮರಿಯಪ್ಪ ಛದಗಾರ್,ಶರಣಪ್ಪ ಕಜ್ಜಿ, ಮಂಜುನಾಥ ಎಲ್.ರೊಟ್ಟಿ, ಮರಬಸಪ್ಪ ಹುಗಿ, ಧೂಳಪ್ಪ ಗುಡಿಹಿಂದಿನ್ ಸೇರಿದಂತೆ ಪಕ್ಷದ ಮುಖಂಡರು ಪಾಲ್ಗೊಂಡಿದ್ದರು.
ಕಲಬಾವಿ: ತಾಲೂಕಿನ ಕಲಬಾವಿ ಗ್ರಾಮದಲ್ಲಿ ಬಿಜೆಪಿ ಸಂಸ್ಥಾಪನ ದಿನಾಚರಣೆ ನಡೆಸಲಾಯಿತು. ಬಿಜೆಪಿ ಮುಖಂಡರಾದ ಸಿದ್ದಪ್ಪ ಮೇಟಿ, ಜಗದೀಶಪ್ಪ ಸಿದ್ದಾಪೂರ, ವಿರುಪಾಕ್ಷಿ ದೇವಲ್, ಮಾರ್ಕಾಂಡೆಪ್ಪ ಮೇಟಿ, ಹನುಮೇಶ ಬ್ಯಾಳಿ, ನಿಂಗಪ್ಪ ಹರಿಜನ,ಶೇಖಪ್ಪ ದೇವಲ್,ಮರಿಸ್ವಾಮಿ ಹರಿಜನ,ವಿರುಪಣ್ಣ ಗದ್ದಿ, ಮುಕ್ಕುಂದಪ್ಪ ಪೂಜಾರ್,ಮಲ್ಲಣ್ಣ ಬಡಿಗೇರ್,ವಿರುಪಾಕ್ಷಯ್ಯ ಹಿರೇಮಠ, ದೇವಪ್ಪ ವಜ್ರದ್ ಸೇರಿದಂತೆ ಇನ್ನಿತರರು ಇದ್ದರು.

Comments are closed.

Don`t copy text!