Shubhashaya News

ಮೂಕ, ಶ್ರವಣ ದೋಷವಿರುವ ಮಕ್ಕಳಿಗೆ ತರಬೇತಿ : ನಂದಿನಿ

ಲಿಂಗಸುಗೂರು : ಏ.1 ರಿಂದ ಒಂದು ತಿಂಗಳ ಕಾಲ ತಾಲೂಕಿನಲ್ಲಿನ ಮಾತು ಮತ್ತು ಶ್ರವಣ ನ್ಯೂನ್ಯತೆ ಮಕ್ಕಳಿಗೆ ಇಂಡಿಯನ್ ಸೈನ್ಸ್ ಲ್ಯಾಂಗ್ವೇಜ್ (ಸೌಜ್ಞ ಭಾಷೆ) ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಬೆಂಗಳೂರಿನ ಹೆಲ್ಪಿಂಗ್ ಹ್ಯಾಂಡ್ಸ್ ವಿಆರ್‍ಐಎಸ್ ಸಂಸ್ಥೆ ಸಂಸ್ಥಾಪಕಿ ನಂದಿನಿ ಹೇಳಿದರು.

ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತರಬೇತಿ ಶಿಬಿರದಲ್ಲಿ ಮಾತು ಮತ್ತು ಶ್ರವಣ ನ್ಯೂನ್ಯತೆ ಹೊಂದಿರುವ 5 ದಿಂದ 18 ಅಥವಾ 25 ವರ್ಷದ ಮಕ್ಕಳಿಗೆ ಇಂಡಿಯನ್ ಸೈನ್ ಲ್ಯಾಂಗ್ವೇಜ್ ನುರಿತ ತರಬೇತುದಾರರಿಂದ ಪಟ್ಟಣದ ಬಸವಸಾಗರ ವೃತ್ತದ ಬಳಿಯ ನವಜೀವನ ಅಂಗವಿಕಲರ ಅಭಿವೃದ್ಧಿ ಸಂಸ್ಥೆ ಭವನದಲ್ಲಿ ತರಬೇತಿ ನೀಡಲಾಗುವುದು. ಅಲ್ಲದೆ ಮಕ್ಕಳಿಗೆ ಇಂಗ್ಲೀಷ್ ಮತ್ತು ಬೇಸಿಕ್ ಕಂಪ್ಯೂಟರ್ ತರಬೇತಿ ಕೂಡ ಉಚಿತವಾಗಿ ನೀಡಲಾಗುವುದು.

ಇಂಡಿಯನ್ ಸೈನ್ ಲ್ಯಾಂಗ್ವೇಜ್ ಬೆಂಗಳೂರು ಸೇರಿ ನಗರ ಪ್ರದೇಶಗಳಲ್ಲಿ ಮಾತ್ರ ತರಬೇತಿ ನೀಡಲಾಗುತ್ತದೆ. ಆದರೆ ಗ್ರಾಮೀಣ ಪ್ರದೇಶದ ಮಾತು ಮತ್ತು ಶ್ರವಣ ನ್ಯೂನ್ಯತೆ ಹೊಂದಿರುವ ಮಕ್ಕಳು ಇದರಿಂದ ವಂಚಿತರಾಗಿದ್ದಾರೆ. ಆದ್ದರಿಂದ ಗ್ರಾಮೀಣ ಭಾಗದ ಮಕ್ಕಳಿಗೂ ತರಬೇತಿ ನೀಡಿದರೆ ಅವರ ಉಜ್ವಲ ಭವಿಷ್ಯಕ್ಕೆ ಸಹಕಾರಿಯಾಗಲಿದೆ ಎಂಬ ಕಾರಣಕ್ಕೆ ಮಾತು ಮತ್ತು ಶ್ರವಣ ನ್ಯೂನ್ಯತೆ ಹೊಂದಿರುವ ಮಕ್ಕಳು ತರಬೇತಿ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ 9743459461, 7676173323 (ಆಲ್ ಇಂಡಿಯಾ ಡೆಫ್ ಹೆಲ್ಪಲೈನ್) ಮೊಬೈಲ್ ಸಂಖ್ಯೆಗಳಿಗೆ ಸಂಪರ್ಕಿಸಬೇಕೆಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಗೀತಾ, ಲಿಂಗರಾಜ ಗಡಗಿ, ಸಂಗಮೇಶ, ವಿರುಪಾಕ್ಷಿ, ಪ್ರೇಮ್ ಇದ್ದರು.

Comments are closed.

Don`t copy text!