Shubhashaya News

ಎನ್ ಎಸ್ ಲಕ್ಷ್ಮಿ ನಾರಾಯಣ ಭಟ್ಟರು ವಿಧಿವಶ

 

ಹಿರಿಯ ಕವಿ ಎನ್ ಎಸ್ ಲಕ್ಷ್ಮಿ ನಾರಾಯಣಭಟ್ ರವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಬೆಳಗಿನ ಜಾವ 4:30 ಕ್ಕೆ ನಿಧನ ಹೊಂದಿದ್ದಾರೆ.ಶ್ರೀಯುತ ಲಕ್ಷೀನಾರಾಯಣ ಭಟ್ಟರಿಗೆ 84 ವರ್ಷ ವಯಸ್ಸಾಗಿತ್ತು1936 ನವೆಂಬರ್ 29ರಂದು ಶಿವಮೊಗ್ಗದಲ್ಲಿ ಜನಿಸಿದ್ದ ಎನ್ಎಸ್ ಎಲ್ಎಲ್ಲರಿಗೂ ಸಲ್ಲುವ ಕವಿ ಎಂದೇ ಖ್ಯಾತಿ ಹೊಂದಿದ್ದರು .ಬೆಂಗಳೂರಿನ ಬನಶಂಕರಿ ಯ ನಿವಾಸದಲ್ಲಿ ಎನ್ ಎಸ್ ಎಲ್ ರವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.ಬೆಳಗ್ಗೆ 10 ಗಂಟೆ ಬಳಿಕ ಅಂತಿಮ ದರ್ಶನಕ್ಕೆ ವ್ಯವಸ್ಥೆಯಾಗಿದೆ.ಶ್ರೀಯುತರು ಬೆಂಗಳೂರು ವಿಶ್ವ ವಿದ್ಯಾಲಯದಲ್ಲಿ ಪ್ರೊಫೆಸರ್ ಆಗಿ, ವಿಭಾಗ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು,ಹಿಂದೆ ಹೀಗೆ ಚಿಮ್ಮುತ್ತಿತ್ತು ಯಾವ ಘಳಿಗೆಯಲ್ಲಿನೀರ ಮೇಲಿನ ಲೀಲೆ, ನಿತ್ಯ ನಿತ್ಯ ಭೂಮಿ ಮಾಗಿ ಕೊರೆವ ಬಾಳಿಗೆ ಭಾವಗೀತೆಗಳು ಪ್ರಸಿದ್ದಿಯಾಗಿವೆ.

1 Comment
  1. Shivaraj S says

    ಕನ್ನಡ ಸಾರಸ್ವತ ಲೋಕದ ಅನರ್ಘ್ಯ ರತ್ನ.

    ಓಂ ಶಾಂತಿ

Leave A Reply

Your email address will not be published.