Shubhashaya News

ಬಹುಜನ ರೈತರ ಭರವಸೆ ಸಾಗರ ಕಿಂಗ್ ಕಲ್ಲಂಗಡಿ

ಸಧ್ಯ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಕಲ್ಲಂಗಡಿ ಗ್ರಾಹಕರ ಮನಸೂರೆಗೊಳ್ಳುತ್ತಿದೆ

ಕಲ್ಲಂಗಡಿ ಬೇಸಿಗೆಕಾಲದ ಬಹು ಪ್ರಿಯ ತೋಟಗಾರಿಕಾ ಬೆಳೆ. ಬೀಸಿಗೆ ಬಂತು ಎಂದರೆ ಸಾಕು ಕಲ್ಲಂಗಡಿಗೆ ಬಂಗಾರದ ಬೆಲೆ ಬರುತ್ತದೆ. ದೇಹವನ್ನು ಧಗೆಯಿಂದ ರಕ್ಷಿಸಿಕೊಳ್ಳಲು ಜನರು ಕಲ್ಲಂಗಡಿ ಮೋರೆ ಹೋಗುತ್ತಾರೆ. ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಎಲ್ಲರಿಗೂ ಕಲ್ಲಂಗಡಿ ಬೇಕೇ ಬೇಕು. ಕೆಲವು ಜನ ಅದನ್ನು ತಿಂದರೆ ಇನ್ನೂ ಕೆಲವು ಜನ ಜ್ಯೂಸ್ ಮಾಡಿ ಕುಡಿಯುತ್ತಾರೆ.
ಸಧ್ಯ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಕಲ್ಲಂಗಡಿ ಗ್ರಾಹಕರ ಮನಸೂರೆಗೊಳ್ಳುತ್ತಿದೆ. ಕಲ್ಲಂಗಡಿ ಬೆಳೆಯುವ ರೈತರಿಗೂ ಅದು ಹೆಚ್ಚಿನ ಆದಾಯವನ್ನು ತರುತ್ತದೆ. ಕಡಿಮೆ ಅವಧಿಯಲ್ಲಿ ಹೆಚ್ಚಿನ ಇಳುವರಿ, ಹೆಚ್ಚಿನ ಲಾಭವನ್ನು ರೈತರು ಕಲ್ಲಂಗಡಿ ಬೆಳೆಯುವುದರಿಂದ ನಿರೀಕ್ಷಿಸಬಹುದು. ಕಲ್ಲಂಗಡಿ ಬೆಳೆಯಲು ಬೇಕಾಗಿರುವುದು ಕೇವಲ 60 ಜನ ಮಾತ್ರ. ಮೊದಲ 10 ದಿನಗಳಲ್ಲಿ ಭೂಮಿಯನ್ನು ಹದ ಮಾಡಿ, ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಂಡು ಕಲ್ಲಂಗಡಿ ಬೀಜಗಳನ್ನು ನಾಟಿ ಮಾಡಿದರೆ ಮುಂದಿನ 50 ದಿನಗಳಲ್ಲಿ ನಿರೀಕ್ಷಿತ ಫಸಲನ್ನು ಪಡೆಯಬಹುದು.
ಮಾರುಕಟ್ಟೆಯಲ್ಲಿ ಲಭ್ಯವಿರುವ ಹಲವಾರು ತಳಿಗಳಲ್ಲಿ ಬಹಳ ಜನ ರೈತರು ಬಯಸುವುದು ಸಾಗರ ಬಯೋಟೇಕ್ ಪ್ರೈವೆಟ್ ಲಿಮಿಟೆಡ್ ಕಂಪನಿಯ ಸಾಗರ್ ಕಿಂಗ್ ತಳಿ. ಈ ತಳಿಯು ಬಹಳ ರುಚಿಕರವಾಗಿದ್ದು ಅಪಾರ ಜನ ಮೆಚ್ಚುಗೆಯನ್ನು ಗಳಿಸಿದೆ. ಒಂದು ಏಕರೆಗೆ 18ರಿಂದ 36 ಟನ್ನ ಇಳುವರಿ ಪಡೆಯಬಹುದು. ಇನ್ನೂ ಕೆಲವು ರೈತರು 42 ಟನ್ನವರೆಗೂ ಫಸಲು ಪಡೆದಿದ್ದಾರೆ.
ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶದ ರೈತರು ಅಧಿಕ ಪ್ರಮಾಣದಲ್ಲಿ ಈ ತಳಿಯನ್ನೆ ಬೆಳೆಯುತ್ತಿದ್ದಾರೆ. ಇದಕ್ಕೆ ಅವರು ನೀಡುವ ಕಾರಣ ಅಧಿಕ ಇಳುವರಿ. ಕೇವಲ ಕೆಲವು ದಿನಗಳಲ್ಲಿ ಕಲ್ಲಂಗಡಿ ಕಟಾವಿಗೆ ಬರುತ್ತದೆ ಎನ್ನುತ್ತಾರೆ ಅನುಭವಸ್ಥರು.
ಸಾಗರ್ ಕಿಂಗ್ ತಳಿಯನ್ನು ತಮ್ಮ 5 ಏಕರೆಯಲ್ಲಿ ಬೆಳೆದು ಅಪಾರ ಪ್ರಮಾಣದ ಲಾಭವನ್ನು ಪಡೆದಿರುವ ಖಜೂರಿ ಗ್ರಾಮದ ಪ್ರಗತಿಪರ ರೈತ ರವೀಂದ್ರ ವಾನೇಗಾಂವ.

ಒಟ್ಟಿನಲ್ಲಿ ಹೇಳುವುದಾದರೆ ಸಾಗರ ಬಯೋಟೇಕ್ ಕಂಪನಿಯ ಸಾಗರ್ ಕಿಂಗ್ ತಳಿಯನ್ನು ರೈತರು ಮೆಚ್ಚಿಕೊಂಡಿದ್ದಾರೆ ಅಷ್ಟೇ ಅಲ್ಲದೇ ಮುಂದಿನ ದಿನಗಳಲ್ಲಿಯೂ ಅದೇ ತಳಿ ಬೆಳೆಯುವುದಾಗಿ ಹೇಳುತ್ತಿದ್ದಾರೆ.

Comments are closed.

Don`t copy text!