Shubhashaya News

ಚಿತ್ತಾಪುರದಲ್ಲಿ ಲಾಕ್‍ಡೌನ್‍ಗೆ ಉತ್ತಮ ಪ್ರತಿಕ್ರಿಯೆ

ಚಿತ್ತಾಪುರ: ಕೊರೊನಾ ವೈರಸ್ ತಡೆಗಟ್ಟುವ ಹಿನ್ನೆಲೆ ಸರ್ಕಾರ ಜಾರಿಗೊಳಿಸಿದ್ದ ಲಾಕ್‍ಡೌನ್ ನಿಮಿತ್ತ ಪಟ್ಟಣದಲ್ಲಿ ಎಲ್ಲ ಅಂಗಡಿ ಮುಂಗಟ್ಟು ಬಂದ್ ಮಾಡಿದ್ದರಿಂದ ಜನರಿಲ್ಲದೇ ರಸ್ತೆಗಳೆಲ್ಲ ಬಿಕೋ ಎನ್ನುತ್ತಿತ್ತು.

ಚಿತ್ತಾಪುರ: ಕೊರೊನಾ ಎರಡನೇ ಅಲೆ ದೇಶಾದ್ಯಂತ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವ ಹಿನ್ನೆಲೆ ಅದರ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ 14 ದಿನಗಳ ಕಾಲ ಸಂಪೂರ್ಣ ಜಾರಿಗೆ ತಂದಿರುವ ಲಾಕ್‍ಡೌನ್‍ಗೆ  ಪಟ್ಟಣದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ರಾಜ್ಯದಲ್ಲಿ ಕೊರೊನಾ ಎರಡನೇ ಅಲೆಯ ಹಿಡಿತಕ್ಕೆ ಸೀಗದೇ ತನ್ನ ನಾಗಾಲೋಟ ಮುಂದುವರೆಸಿರುವ ಹಿನ್ನೆಲೆ ರಾಜ್ಯ ಸರ್ಕಾರ ಇದರ ನಿಯಂತ್ರಣಕ್ಕಾಗಿ ಹರಸಾಹಸ ಪಡುತ್ತಿದ್ದು ಅದರ ಒಂದು ಭಾಗವಾಗಿ ಕರೆ ನೀಡಲಾಗಿದ್ದ ಲಾಕ್‍ಡೌನ್‍ಗೆ ತಾಲೂಕಿನಾದ್ಯಂತ ಭರ್ಜರಿ ರೆಸ್ಪಾನ್ಸ್ ವ್ಯಕ್ತವಾಗಿದೆ.

ಸದಾ ಜನಜಂಗುಳಿಯಿಂದ ತುಂಬಿರುತ್ತಿದ್ದ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಜನಸಂಖ್ಯೆ ವಿರಳವಾಗಿತ್ತು. ಪೆಟ್ರೋಲ್ ಬಂಕ್, ಆಸ್ಪತ್ರೆ ಹಾಗೂ ಮೆಡಿಕಲ್ ಸ್ಟೋರ್‍ಗಳನ್ನು ಹೊರತುಪಡಿಸಿ ಇನ್ನುಳಿದ ಎಲ್ಲ ತೆರೆನಾದ ಅಂಗಡಿ ಮುಗ್ಗಂಟ್ಟುಗಳು ಬಂದ್ ಮಾಡುವ ಮೂಲಕ ತಾಲೂಕು ಆಡಳಿತಕ್ಕೆ ಹಾಗೂ ಸರ್ಕಾರದ ಆದೇಶಕ್ಕೆ ಅಂಗಡಿ ಮಾಲೀಕರು ಸಾಥ್ ನೀಡಿದರು.

ಲಾಕ್‍ಡೌನ್ ಹಿನ್ನೆಲೆ ಸದಾ ಜನರಿಂದ ಗಿಜಿಗುಡುತ್ತಿದ್ದ ಚಿತ್ತಾವಲಿ ಚೌಕ್, ನಾಗಾವಿ ಚೌಕ್, ಜನತಾ ಚೌಕ್, ಭುವನೇಶ್ವರಿ ಚೌಕ್, ಅಂಬೇಡ್ಕರ್ ವೃತ್ತ, ಬಸ್ ನಿಲ್ದಾಣ, ಬಸವೇಶ್ವರ ಚೌಕ್, ಸ್ಟೇಷನ್ ಪ್ರದೇಶ, ರೈಲು ನಿಲ್ದಾಣ, ಲಾಡ್ಜೀಂಗ್ ಕ್ರಾಸ್ ಸೇರಿದಂತೆ ಇನ್ನಿತರ ಮುಖ್ಯ ರಸ್ತೆಗಳಲ್ಲಿ ಜನರಿಲ್ಲದೇ ಭಣಗುತ್ತಿದ್ದವು.

ಬಸ್‍ನಿಲ್ದಾಣ ನಿಶ್ಯಬ್ಧ: ಪಟ್ಟಣದ ಬಸ್ ನಿಲ್ದಾಣದಲ್ಲಿ ಸದಾ ಜನರಿಂದ ಪ್ರಯಾಣಿಕರಿಂದ ತುಂಬಿ ತುಳುಕುತ್ತಿತ್ತು. ಆದರೆ ಕೊರೊನಾ ಎರಡನೇ ಅಲೆಯ ಲಾಕ್‍ಡೌನ್‍ನಿಂದಾಗಿ ಸಾರಿಗೆ ಬಸ್ ಹಾಗೂ ಇತರೆ ವಾಹನಗಳು ಬಂದ್ ಆಗಿದ್ದರಿಂದ ಯಾವೊಬ್ಬ ಪ್ರಯಾಣಿಕರು ಇಲ್ಲದೇ ಬಿಕೋ ಎನ್ನುತ್ತಿತ್ತು. ಅಲ್ಲದೇ ಒಂದು ಸಾರಿಗೆ ಬಸ್ ಇಲ್ಲದೇ ಇರುವುದರಿಂದ ಇಡೀ ಬಸ್ ನಿಲ್ದಾಣ ನಿಶ್ಯಬ್ಧವಾಗಿ ಕಂಡುಬಂತು.

ಕೊರೊನಾ ಭಯವಿಲ್ಲದೇ ಜನರು ತರಕಾರಿ, ಕಿರಾಣಿ ಸೇರಿ ಅಗತ್ಯ ವಸ್ತಗಳಿಗೆ ಮುಗಿ ಬಿದ್ದ ಜನತೆ: ರಾಜ್ಯ ಸರ್ಕಾರ ಕೊರೊನಾ ಎರಡನೇ ಅಲೆಯ ಅಂಗವಾಗಿ 14 ದಿನಗಳ ಕಾಲ ಲಾಕ್‍ಡೌನ್ ಘೋಷಿಸಿದೆ. ಆದರೆ ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಅಗತ್ಯ ವಸ್ತಗಳ ಖರೀದಿಗೆ ಅವಕಾಶ ಕಲ್ಪಿಸಿಕೊಟ್ಟಿದೆ. ಆದರೆ ಪಟ್ಟಣದಲ್ಲಿ ಬುಧವಾರದ ಸಂತೆ ಇರುವುದರಿಂದ ಜನರು ಬೆಳಗ್ಗೆ 6 ರಿಂದ 10 ಗಂಟೆಯವೆಗೆ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಮುಗಿಬಿದ್ದು ವ್ಯಾಪಾರ ವಹಿವಾಟುಗಳಲ್ಲಿ ತೊಡಗಿರುವ ಸಾಮಾನ್ಯ ದೃಶ್ಯ ಕಂಡು ಬಂತು.

ಲಾಠಿ ರುಚಿ ತೋರಿಸಿದ ಪೊಲೀಸರು: ಕೊರೊನಾ ಎರಡನೇ ಅಲೆಯ ಲಾಕ್‍ಡೌನ್‍ನಿಂದಾಗಿ ಅನಗತ್ಯವಾಗಿ ಕಾರ್, ಬೈಕ್, ಆಟೋ, ಜೀಪ್, ಕ್ರಷರ್ ಸೇರಿದಂತೆ ಇನ್ನಿತರ ವಾಹನಗಳಲ್ಲಿ ಸಂಚರಿಸುತ್ತಿರುವವರಿಗೆ ಪೊಲೀಸರು ಲಾಠಿ ರುಚಿ ತೋರಿಸಿ ದಂಡ ಹಾಕಿದರು.

ತಹಶೀಲ್ದಾರ್ ಉಮಾಕಾಂತ ಹಳ್ಳೆ, ಪಿಎಸ್‍ಐ ಮಂಜುನಾಥರೆಡ್ಡಿ, ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದರು. ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳ ಕಾರ್ಯವನ್ನು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯಾವುದೇ ಅಹಿತಕರ ಘಟನೆಗಳು ನಡೆಯದೆ ಕೊರೊನಾ ಎರಡನೇ ಅಲೆಯ ಲಾಕ್‍ಡೌನ್ ಶಾಂತವಾಗಿತ್ತು.

.

 

 

Comments are closed.

Don`t copy text!