Shubhashaya News

ದಿನೇ ದಿನೇ ಬೆಳೆಯುತ್ತಿದೆ ಈ ಜೀವಂತ ಶಿವಲಿಂಗ ವಿಶ್ವದ ಅತ್ಯಂತ ಎತ್ತರದ ಶಿವಲಿಂಗವಿದು.

ನಮ್ಮ ಈ ಭರತಖಂಡವು ಕೋಟ್ಯಾನು ಕೋಟಿ ದೇವಾನುದೇವತೆಗಳ ಆಶೀರ್ವಾದದಿಂದಲೇ ಪವಿತ್ರಗೊಂಡ ಪುಣ್ಯ ಭೂಮಿಯಾಗಿದೆ. ನಮ್ಮ ಭಾರತದ ಸನಾತನ ಹಿಂದೂ ಪರಂಪರೆ ಇಡೀ ವಿಶ್ವಕ್ಕೆ ಮಾದರಿ ಎನಿಸಿಕೊಂಡಿದೆ. ನಮ್ಮ ಭರತ ಖಂಡದಲ್ಲಿ ಎಷ್ಟು ದೇವಾನುದೇವತೆಗಳು ಇದ್ದಾರೋ ಅಷ್ಟು ದೇವಸ್ಥಾನಗಳು ಇವೆ. ಪ್ರತಿಯೊಂದು ಆಲಯಗಳಲ್ಲಿ ನಿಗೂಢವಾದ ರಹಸ್ಯಗಳು ಕೂಡ ಅಡಗಿವೆ.

ನಾವು ಹೇಳುವ ಶಿವಲಿಂಗವು ಪ್ರತಿವರ್ಷವೂ 2 ರಿಂದ 3 ಅಡಿ ಎತ್ತರ ಬೆಳೆಯುತ್ತಿರುತ್ತದೆ. ಈ ವಿಶೇಷವಾದ ಶಿವಲಿಂಗವನ್ನು ಯಾರು ಕೂಡ ಕೆತ್ತಿಲ್ಲ, ಅದರ ಬದಲಾಗಿ ನೈಸರ್ಗಿಕವಾಗಿ ಸೃಷ್ಟಿಯಾದ ಒಂದು ಅಮೂಲ್ಯ ಶಿವಲಿಂಗವಿದು. ಈ ಶಿವಲಿಂಗವೂ ವರ್ಷದಿಂದ ವರ್ಷಕ್ಕೆ ಬೆಳೆದು ಈಗ ಇಡೀ ವಿಶ್ವದಲ್ಲಿ ಅತಿ ಎತ್ತರವಾದ ನೈಸರ್ಗಿಕ ಶಿವಲಿಂಗ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ. ಈ ಶಿವಲಿಂಗವು ಇರುವುದು ಛತ್ತಿಸ್ಗಢ ರಾಜ್ಯದ ಗರಿಯಬಾದ್ ಎಂಬ ಸ್ಥಳದಿಂದ ಮೂರು ಕಿಲೋಮೀಟರ್ ದೂರದಲ್ಲಿರುವ ದಟ್ಟಕಾಡಿನ ಮಧ್ಯೆ ಇರುವ ಮಕೋಡ ಎಂಬ ಗ್ರಾಮದಲ್ಲಿ.

ಇಲ್ಲಿ ವಿಶ್ವದ ಅತಿದೊಡ್ಡ ನೈಸರ್ಗಿಕ ಶಿವಲಿಂಗ ಪ್ರಕಾಶಿಸುತ್ತಿದೆ. ಈ ಸನ್ನಿಧಾನವನ್ನು ಭೂತೇಶ್ವರ ನಾಥ್ ಸನ್ನಿಧಾನ ಎಂದು ಕರೆಯಲಾಗುತ್ತದೆ. ಈ ಶಿವಲಿಂಗವು 18 ಅಡಿ ಎತ್ತರ ಹಾಗೂ 20 ಅಡಿ ಓಲಾಕಾರವಾಗಿ ಬೆಳೆದಿದೆ. ಪ್ರತಿವರ್ಷವೂ ಕಂದಾಯ ಅಧಿಕಾರಿಗಳು ಶಿವಲಿಂಗದ ಎತ್ತರವನ್ನು ನಮೂದಿಸಿ ಕೊಳ್ಳುತ್ತಾರೆ ಹಾಗೂ ಪ್ರತಿ ವರ್ಷವೂ ಎರಡರಿಂದ ಮೂರು ಅಡಿ ಬೆಳೆಯುವುದನ್ನು ಅಧಿಕಾರಿಗಳು ದೃಢೀಕರಿಸಿದ್ದಾರೆ.

ಸುಮಾರು 100 ವರ್ಷಗಳ ಹಿಂದೆ ಶಿವಲಿಂಗ ಇರುವ ಜಾಗದಲ್ಲಿ ಶೋಭಾ ಸಿಂಹ ಎಂಬುವರ ಗದ್ದೆ ಇತ್ತು. ಪ್ರತಿನಿತ್ಯ ಅವರು ಗದ್ದೆಯಲ್ಲಿ ಕೆಲಸ ಮಾಡುವಾಗ ಹುಲಿ ಹಾಗೂ ಗೂಳಿಗಳು ಗರ್ಜನೆ ಮಾಡುವುದು ಕೇಳಿಬರುತ್ತಿತ್ತು. ಹಲವು ಬಾರಿ ಶಬ್ದವನ್ನು ಕೇಳಿಸಿಕೊಂಡ ಶೋಭಾ ಸಿಂಹ ಅವರು ಅಲ್ಲಿಯ ಗ್ರಾಮವಾಸಿಗಳಿಗೆ ಈ ವಿಷಯವನ್ನು ತಿಳಿಸುತ್ತಾರೆ. ಆಗ ಗ್ರಾಮದವರೆಲ್ಲರೂ ಶೋಭಾ ಸಿಂಹ ಅವರ ಜೊತೆಗೂಡಿ ಗೂಳಿಗಳನ್ನು ಹುಡುಕಲು ಹೊರಡುತ್ತಾರೆ. ಆದರೆ ಅಲ್ಲಿ ಅವರಿಗೆ ಸಣ್ಣ ಆಕಾರದ ಶಿವಲಿಂಗವೂ ಸಿಗುತ್ತದೆ. ನಂತರ ಸೂಕ್ಷ್ಮವಾಗಿ ಗಮನಿಸಿದಾಗ ಆ ಶಿವಲಿಂಗದಿಂದಲೆ ಹುಲಿ ಹಾಗೂ ಗೂಳಿಗಳು ಗರ್ಜನೆ ಮಾಡುವ ಶಬ್ದ ಕೇಳಿಸುತ್ತದೆ. ಆಗ ಅಲ್ಲಿಯ ಗ್ರಾಮಸ್ಥರಿಗೆ ಭಕ್ತಿ ಹೆಚ್ಚಾಗಿ ಶಿವಲಿಂಗದ ಪೂಜೆಯನ್ನು ಮಾಡಲು ಪ್ರಾರಂಭಿಸುತ್ತಾರೆ.

ಅಂದಿನಿಂದ ಶಿವಲಿಂಗವು ವರ್ಷದಿಂದ ವರ್ಷಕ್ಕೆ ಬೆಳೆಯುತ್ತಾ ಹೋಗುತ್ತದೆ. ಇಂದು ಶಿವಲಿಂಗವು 18 ಅಡಿ ಎತ್ತರಕ್ಕೆ ಬೆಳೆದು ನಿಂತಿದೆ. ಪ್ರಸ್ತುತ ಭೂತೇಶ್ವರ ನಾಥ ದೇವಾಲಯ ದೇಶ ವಿದೇಶಗಳಲ್ಲಿಯೂ ಖ್ಯಾತಿಯನ್ನು ಪಡೆದಿದೆ. ಈ ಶಿವಲಿಂಗವು ದಟ್ಟ ಅರಣ್ಯದ ಮಧ್ಯೆ ಇದ್ದರೂ ಸಾವಿರಾರು ಭಕ್ತರು ಇಲ್ಲಿಗೆ ಬಂದು ಹೋಗುತ್ತಾರೆ. ಇಲ್ಲಿಯ ಶಿವಲಿಂಗಕ್ಕೆ ಜಲ ಅಭಿಷೇಕವನ್ನು ಮಾಡುವುದರಿಂದ ಭಕ್ತರ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ.

ಹೆಚ್ಚಿನ ಮಾಹಿತಿಗಾಗಿ ದೇವಿಯ ಪರಮ ಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ :-
ವಿದ್ವಾನ್ ಪಂಡಿತ್ ಶ್ರೀ ಕೇಶವ ಕೃಷ್ಣ ಭಟ್
ಖ್ಯಾತ ಜ್ಯೋತಿಷಿ ಮತ್ತು ಉಪನ್ಯಾಸಕರು
ಸಂಪರ್ಕಿಸಿ : 8971498358

Comments are closed.

Don`t copy text!