ಆಳಂದ: ಪಟ್ಟಣದಲ್ಲಿ ನಡೆದ ರಾಜ್ಯ ಸರ್ಕಾರಿ ತಾಲೂಕು ನೌಕರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಸಾಧಕರಿಗೆ ಸನ್ಮಾನಿಸಲಾಯಿತು.
ಆಳಂದ: ತಾಲೂಕು ರಾಜ್ಯ ಸರ್ಕಾರಿ ನೌಕರ ಸಂಘದ ಪ್ರಸಕ್ತ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಮತ್ತು ಸನ್ಮಾನ ಸಮಾರಂಭ ಉತ್ಕøಷ್ಟವಾಗಿ ಶನಿವಾರ ನಡೆಯಿತು.
ಕೆಎಂಎಫ್ ಅಧ್ಯಕ್ಷ ಆರ್.ಕೆ.ಪಾಟೀಲ್ ಅವರು ಈ ಕಾರ್ಯಕ್ರಮವನ್ನು ಉದ್ಘಾಟಿಸಿ, ಸರ್ಕಾರಿ ನೌಕರರ ಸೇವೆಗಳ ಮಹತ್ವ ಮತ್ತು ಸಂಘದ ಉದ್ದೇಶಗಳ ಬಗ್ಗೆ ಮಾತನಾಡಿದರು.
ವಿಶೇಷ ಸನ್ಮಾನಿತರಾಗಿ ಜಿಲ್ಲಾ ಪಶುಪಾಲನೆ ಮತ್ತು ಪಶುವೈದ್ಯ ಸೇವೆಗಳ ಉಪ ನಿರ್ದೇಶಕ ಡಾ. ಸಂಜಯ್ ರೆಡ್ಡಿ, ತಾಪಂ ಇಒ ಮಾನಪ್ಪ ಕಟ್ಟಿಮನಿ ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಉಮಾಕಾಂತ್ ರಾಜಗಿರಿ, ಕ್ಷೇತ್ರ ಶಿಕ್ಷಣಾಧಿಕಾರಿ ವಿ. ರಂಗಸ್ವಾಮಿ ಶೆಟ್ಟಿ ಅವರನ್ನು ನೌಕರರ ಸಂಘದಿಂದ ಗೌರವಿಸಲಾಯಿತು.
ಈ ಅಧಿಕಾರಿಗಳು ತಮ್ಮ ಸೇವೆಯ ಮೂಲಕ ಜನರಿಗೆ ಗೊತ್ತು ಮಾಡಿಕೊಂಡಿದ್ದಾರೆ ಎಂದು ಸಂಘದ ಪ್ರತಿನಿಧಿಗಳು ತಿಳಿಸಿದರು.
ಅತಿಥಿಗಳಾಗಿ ಸಂಘದ ಜಿಲ್ಲಾ ಅಧ್ಯಕ್ಷ ಬಸವರಾಜ್ ಬಳೂಂಡಗಿ, ಜಿಲ್ಲಾ ಕಾರ್ಯದರ್ಶಿ ಮಹೇಶ್ ಹೂಗಾರ್, ಖಜಾಂಚಿ ಶ್ರೀಮಂತ ಪಟ್ಟೆದಾರ್, ರಾಜ್ಯ ಪರಿಷತ್ ಸದಸ್ಯ ಧರ್ಮರಾಯ ಜವಳಿ, ಕಾರ್ಯಾಧ್ಯಕ್ಷ ಚಂದ್ರಕಾಂತ್ ಏರಿ ಅವರು ಆಗಮಿಸಿ, ಸದಸ್ಯರೊಂದಿಗೆ ಸಂವಾದ ನಡೆಸಿದರು. ಈ ಅತಿಥಿಗಳು ಸರ್ಕಾರಿ ಸೇವೆಯ ಸವಾಲುಗಳು ಮತ್ತು ಸಂಘದ ಭವಿಷ್ಯದ ಚಟುವಟಿಕೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಿದರು.
ವೇದಿಕೆಯಲ್ಲಿ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ನರಸಪ್ಪ ಬಿರಾದಾರ, ಪ್ರೌಢಶಾಲೆಯ ಮುಖ್ಯ ಶಿಕ್ಷಕರ ಅಧ್ಯಕ್ಷ ಮರೆಪ್ಪ ಬಡಿಗೇರ, ಸಹ ಶಿಕ್ಷಕರ ಅಧ್ಯಕ್ಷ ಮಲ್ಲಿಕಾರ್ಜುನ ಖಜೂರಿ, ಶೈಲಜಾ ಪೋಮಾಜಿ ಇತರರು ವೇದಿಕೆಯಲ್ಲಿದ್ದರು.
ಈ ಸಂದರ್ಭದಲ್ಲಿ ಎಸ್ಎಸ್ಎಲ್ಸಿ ಫಲಿತಾಂಶಗಳಲ್ಲಿ ಸÀರಕಾರಿ ಪ್ರೌಢಶಾಲೆಗಳಲ್ಲಿ ಪ್ರಥಮ 5 ಸ್ಥಾನಗಳನ್ನು ಪಡೆದ ಶಾಲೆಗಳ ಮುಖ್ಯಸ್ಥರಾದ ಕೌಲ್ಗಾ ಶಾಲೆಯ ರಾಮಲಿಂಗಪ್ಪ ಎಸ್.ಖಂಡಾಳ ದರ್ಗಾಶಿರೂರ ಶಾಲೆಯ ಸಿದ್ದರಾಮ ಎನ್.ಮನೋಳಿ, ನಿಂಗದಳ್ಳಿ ಶಾಲೆಯ ವೀರಭದ್ರಯ್ಯ ಹಿರೇಮಠ, ಆಳಂದ ಶಾಲೆಯ ಸೂರ್ಯಕಾಂತ್ ಕಾಂಬಳೆ, ಸರಸಂಬಾ ಶಾಲೆ ಜ್ಯೋತಿ ವಿಶ್ವಕರ್ಮ ಅವರನ್ನು ಗೌರವಿಸಿ ಇವರು ತಮ್ಮ ಶಾಲೆಗಳಲ್ಲಿ ಉತ್ತಮ ಫಲಿತಾಂಶಗಳನ್ನು ತಂದುಕೊಂಡಿದ್ದಾರೆ ಎಂದು ಸಂಘದ ಪ್ರತಿನಿಧಿಗಳು ಹೊಗಳಿದರು.
ಅಲ್ಲದೇ, ಕನ್ನಡ ಮಾಧ್ಯಮದಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳ ಶಿಕ್ಷಕಕರಾದ ಹಿರೋಳಿ ಶಾಲೆಯ ಧರ್ಮರಾಯ ಕೊರಳಿ, ಕವಲಗಾ ಶಾಲೆಯ ಲಕ್ಷ್ಮಿಕಾಂತ್ ಪಾಟೀಲ್, ಹಳ್ಳಿ ಸಲಗರ್ ಶಾಲೆಯ ಸೈಬಣ್ಣ ಲಂಗೋಟಿ, ದರ್ಗಾಶಿರೂರ ಪ್ರೌಢಶಾಲೆಯ ಪ್ರಕಾಶ್ ಶಿವಣಗಿ, ಕೌಲ್ಗಾ ಶಾಲೆಯ ಮಹಾಂತೇಶ್ ಹೊಸಮನಿ, ಮಾದನಹಿಪ್ಪರಗಾ ಶಾಲೆಯ ಧರ್ಮಣ್ಣ ಗೌರÀಶೆ ಅವರನ್ನು ಸನ್ಮಾನಿಸಿ ಈ ಶಿಕ್ಷಕರುಗಳು ಕನ್ನಡ ಮಾಧ್ಯಮದಲ್ಲಿ ಉತ್ತಮ ಶಿಕ್ಷಣ ನೀಡಿ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುತ್ತಿದ್ದಾರೆ ಎಂದು ಕಾರ್ಯಕ್ರಮದಲ್ಲಿ ತಿಳಿಸಲಾಯಿತು.
ಇದಲ್ಲದೆ, ರಾಜ್ಯ ಸರ್ಕಾರಿ ನೌಕರರ ಸಂಘ ತಾಲೂಕು ಶಾಖೆ ಆಳಂದ್ನಿಂದ ವಿವಿಧ ಇಲಾಖೆಗಳಲ್ಲಿ ನಾಮ ನಿರ್ದೇಶನವಾಗಿ ನೇಮಕಗೊಂಡ ನೌಕರರಿಗೆ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು. ವಾರ್ಷಿಕ ಚಟುವಟಿಕೆಗಳ ವರದಿ ಪ್ರಸ್ತುತಪಡಿಸಲಾಯಿತು. ಸಂಘದ ದೇವೋದ್ದೇಶಗಳು, ಸರ್ಕಾರಿ ಸೇವೆಯ ಸವಾಲುಗಳು ಮತ್ತು ನೌಕರರ ಹಕ್ಕುಗಳ ರಕ್ಷಣೆಯ ಬಗ್ಗೆ ಮಾತುಗಳಾಡಲಾಯಿತು.
ಸಂಘದ ತಾಲೂಕು ಅಧ್ಯಕ್ಷ ಸತೀಷ ಷಣ್ಮೂಖ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬಸವರಾಜ ಚಿಣಗೆ ಸ್ವಾಗತಿಸಿದರು. ಲೋಕೇಶ ಜಾಧವ ನಾಗೇಂದ್ರ ಗಾಡೆ ನಿರೂಪಿಸಿದರು. ಶ್ರೀಶೈಲ ಕಂಬಾರ ವಂದಿಸಿದರು.
Comments are closed.