Shubhashaya News

ಭಗವಾನ್ ಬಿರ್ಸಾ ಮುಂಡಾ ಬಾಲ್ಯದಿಂದಲೇ ಹೋರಾಟದಲ್ಲಿ ತೊಡಗಿದ್ಧರು: ರಣೇದ್ರ ಜೀ

ಆಳಂದ: ಸಿಯುಕೆಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಕಾರ್ಯಕ್ರಮವನ್ನು ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಉದ್ಘಾಟಿಸಿದರು. ರಾಂಚಿಯ ರಣೇಂದ್ರಜಿ, ಕುಲಸಚಿವ ಪ್ರೊ. ಆರ್. ಆರ್. ಬಿರಾದಾರ, ಡಾ.ವಿಕ್ರಂ ವಿಸಾಜಿ ಇತರರು ಇದ್ದರು.

 

ಆಳಂದ: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ  “ಭಾರತೀಯ ಸ್ವತಂತ್ರ ಸಂಗ್ರಾಮದಲ್ಲಿ ಬಿರ್ಸಾಮುಂಡ ಮತ್ತು ಇತರ ಆದಿವಾಸಿ ಜನಾಂಗಗಳ ಕೊಡುಗೆ” ಎಂಬ ವಿಷಯದ ಕುರಿತು ನಡೆದ ರಾಷ್ಟ್ರೀಯ ವಿಚಾರ ಸಂಕಿರಣದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಪ್ರಸಿದ್ಧ ಹಿಂದಿ ಸಾಹಿತಿ, ಮಾಜಿ ಐಎಎಸ್, ಮಾಜಿ ನಿರ್ದೇಶಕರು, ಡಾ. ರಾಮದಯಾಳ್ ಮುಂಡಾ ಬುಡಕಟ್ಟು ಸಂಶೋಧನಾ ಕಲ್ಯಾಣ ಸಂಘ ಸಂಸ್ಥೆ, ರಾಂಚಿಯ ರಣೇಂದ್ರ ಜೀ ಅವರು ಮಾತನಾಡಿದರು.

“ಭಾರತದ ಇತಿಹಾಸದಲ್ಲಿ ಆದಿವಾಸಿ ಸಮುದಾಯವನ್ನು ಬ್ರಿಟಿμïರ ಕಾಲದ ನಂತರ ಪರಿಗಣಿಸಲಾಗುತ್ತಿದೆ. ಆದರೆ ಇವರ ಇತಿಹಾಸ ಬುದ್ಧ ಮತ್ತು ಅಶೋಕರ ಕಾಲದಿಂದಲೂ ಸಮೃದ್ಧವಾಗಿದೆ. ಸುರೇಶ್ ಕುಮಾರ್ ಸಿಂಗ್ ರವರ, “ದಿ ಡಸ್ಟ್ ಸ್ಟಾರ್ಮ್ ಆಂಡ್ ದಿ ಹ್ಯಾಂಗಿಗ್ ಮಿಸ್ಟ್ : ಎ ಸ್ಟಡಿ ಆಫ್ ಬಿರ್ಸಾ ಮುಂಡಾ ಆಂಡ್ಸ್ ಇಸ್ ಮುಮೆಂಟ್ ಇನ್ ಚೋಟನಾಗಪುರ” ಮುಂಡಾಲಿ ಗೀತೆ ಹಾಗೂ ಮುಂಡಾ ಇತಿಹಾಸವನ್ನು ಪರಿಚಯಿಸುತ್ತದೆ ಎಂದು ಹೇಳಿದರು.

“13 ಫೆಬ್ರವರಿ 1832ರಲ್ಲಿ ಮುಂಡಾ ಸಮುದಾಯದ 250 ಹೋರಾಟಗಾರರು ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಅಸುನೀಗಿದ್ದರು. ಒಟ್ಟು ಮೂವತ್ತು ಸಾವಿರ ಹೋರಾಟಗಾರರಲ್ಲಿ ಒಂದು ಸಾವಿರ ಮಹಿಳೆರಿದ್ದರು ಇದು ಅವರ ಹೋರಾಟಕ್ಕೆ ಸಾಕ್ಷಿ. ಬಿರ್ಸಾ ಮುಂಡಾ ತುಳಸಿ ಪೂಜೆ, ಮಧ್ಯಪಾನ ತ್ಯಜಿಸುವಿಕೆ ಸೇರಿದಂತೆ ಹತ್ತು ಜೀವನ ಅಂಶಗಳನ್ನು ನೀಡಿದ್ದಾರೆ. ಅವರಿಗೆ ಭಗವಾನ್ ಎಂಬ ನಾಮ ಅನ್ವರ್ಥಕವಾಗಿದೆ ಎಂದು ಹೇಳಿದರು.

 

ಸಿಯುಕೆ ಉಪಕುಲಪತಿ ಪೆÇ್ರ. ಬಟ್ಟು ಸತ್ಯನಾರಯಣ ಅವರು ಮಾತನಾಡಿ,   “ನಮ್ಮ ಇಂದಿನ ಸ್ವತಂತ್ರ್ಯದ ಸವಿಯಲ್ಲಿ ಬುಟಕಟ್ಟು ಜನಾಂಗದ ಹೋರಾಟ ಮತ್ತು ಕೊಡುಗೆ ಅಡಗಿದೆ. ಅರಣ್ಯದ ಉಳಿವಿಗೆ ಬಿರ್ಸಾ ಮುಂಡಾರ ಕೊಡುಗೆ ಅಪಾರ ವಿಕಸಿತಭಾರತ 2047 ಮುಖ್ಯ ಧೇಯ ಪ್ರತಿಯೊಂದು ಸಮುದಾಯವನ್ನು ಸಮಾಜದ ಮುನ್ನೇಲೆಗೆ ತರುವುದಾಗಿದೆ. ಆದಿವಾಸಿ ಸಮುದಾಯಗಳ ಕೊಡುಗೆಯನ್ನು ಸ್ಮರಿಸುವಂತಾದಾಗಿದೆ ಎಂದು ಹೇಳಿದರು.

ಕುಲಸಚಿವ ಪೆÇ್ರ. ಆರ್. ಆರ್. ಬಿರಾದಾರ ಅವರು ಮಾತನಾಡಿ, “ಭಾರತ ವಿವಿಧತೆಯಲ್ಲಿ ಏಕತೆ ಇರುವ ಶ್ರೇಷ್ಟ ದೇಶ. ಬುಟಕಟ್ಟು ಜನಾಂದ ಬಗೆಗೆ ಸಂಶೋಧನೆ ಮತ್ತು ದಾಖಲೆ ಕಡಿಮೆ ಇದ್ದು ದೇಶ ಕಟ್ಟುವ ನಿಟ್ಟಿನಲ್ಲಿ ಅವರ ಕೊಡುಗೆಗಳನ್ನು ದಾಖಲಿಸುವ ಅವಶ್ಯಕತೆ ಇದೆ. ಎಂದು ಹೇಳಿದರು.

ನಿಕಾಯದ ಡೀನ್, ಪೆÇ್ರ. ವಿಕ್ರಮ ವಿಸಾಜಿ ಅವರು ಮಾತನಾಡಿ, “ಬುಡಕಟ್ಟು ಜನಾಂಗದವರು ಮನುಷ್ಯ ಹೇಗೆ ಮನುಷ್ಯನಾಗಿ ಬದುಕಬೇಕೆಂಬುದನ್ನು ತೋರಿಸಿದ್ದಾರೆ. ಇತಿಹಾಸ ಕೆಲವೊಂದು ಸಮುದಾಯವನ್ನು ಮುಚ್ವಿಹಾಕಿದೆ. ವಿಶ್ವವಿದ್ಯಾಲಯಗಳು ಅವರ ಇತಿಹಾಸವನ್ನು ಹೊರತೆಗೆದು, ಅವರ ಜ್ಞಾನವನ್ನು ಇಂದಿನ ಯುವ ಜನತೆಗೆ ಸ್ಫೂರ್ತಿಯಾಗಿದೆ ಎಂದು ಹೇಳಿದರು.

ಪೆÇ್ರ. ಸಂದೀಪ್ ರಣಬಿರ್ ಕರ್ ಸ್ವಾಗತಿಸಿದರು.  ಈ ವಿಚಾರ ಸಂಕಿರಣವು ಐಸಿಎಸ್‍ಎಸ್‍ಆರ್ ನವದೆಹಲಿ ಸಹಭಾಗಿತ್ವದಲ್ಲಿ ಎರಡು ದಿನ ನಡೆಯಿತು. ಕಾರ್ಯಕ್ರಮದಲ್ಲಿ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಪ್ರತಿನಿಧಿಗಳು, ಎಲ್ಲಾ ವಿಭಾಗದ ಮುಖ್ಯಸ್ಥರು, ಡೀನ್ ರು, ಸಂಶೋಧನಾರ್ಥಿಗಳು ಹಾಗೂ ವಿದ್ಯಾರ್ಥಿಗಳು ಪಾಲ್ಗೋಂಡಿದ್ದರು.

Comments are closed.

Don`t copy text!