ಚಿತ್ತಾಪುರ: ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಅವರ 130ನೇ ಜಯಂತಿ ಆಚರಿಸಲಾಯಿತು.
ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಶೋಷಿತರ ಧ್ವನಿಯಾಗಿದ್ದರು ಎಂದು ತಹಶೀಲ್ದಾರ್ ಉಮಾಕಾಂತ ಹಳ್ಳೆ ಹೇಳಿದರು.
ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಅವರ 130ನೇ ಜಯಂತಿ ಅಂಗವಾಗಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಅಂಬೇಡ್ಕರ್ ಅವರು ಶೂಷಿತ ಸಮುದಾಯಗಳಿಗೆ ಸಂವಿಧಾನದಲ್ಲಿ ಸಮಾನತೆ ಹಕ್ಕು, ನಾಗರಿಕ ಹಕ್ಕುಗಳನ್ನು ಮೀಸಲಾತಿಯ ಮೂಲಕ ಒದಗಿಸಿ ಕೊಟ್ಟ ಮಹಾನ್ ನಾಯಕರಾಗಿದ್ದಾರೆ ಎಂದರು.
ಎಂ.ಬಿ ನಿಂಗಪ್ಪ ಬುದ್ಧ ವಂದನೆ ಸಲ್ಲಿಸಿದರು.
ಇದೇ ವೆಳೆ ರಕ್ತದಾನ ಶಿಬಿರ ನಡೆಯಿತು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನಿಸಲಾಯಿತು.
ಪುರಸಭೆ ಅಧ್ಯಕ್ಷ ಚಂದ್ರಶೇಖರ ಕಾಶಿ, ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ್, ತಾಪಂ ಅಧ್ಯಕ್ಷ ಜಗಣ್ಣಗೌಡ ರಾಮತೀರ್ಥ ಮುಖಂಡರಾದ ಶಿವಕಾಂತ ಬೆಣ್ಣೂರಕರ್, ಮಲ್ಲಿಕಾರ್ಜುನ ಬೆಣ್ಣೂರಕರ್, ಪಾಶಾಮಿಯ್ಯಾ ಖುರೇಶಿ, ಮಲ್ಲಿಕಾರ್ಜುನ ಕಾಳಗಿ, ಶೀಲಾ ಕಾಶಿ, ನಾಗರಾಜ ಭಂಕಲಗಿ, ವಿನೋದ ಗುತ್ತೇದಾರ, ಉದಯಕುಮಾರ ಸಾಗರ, ಆನಂದ ಕಲ್ಲಕ್, ಲೋಹಿತ್ ಮುದ್ದಡಗಿ, ಪ್ರಭು ಗಂಗಾಣಿ, ಶಿವಮೂರ್ತಿ ಶಾಸ್ತ್ರಿ, ಮಹೇಶ ಜಾಯಿ, ಮಹೇಶ ಕಾಶಿ, ಮಲ್ಲಿಕಾರ್ಜುನ ಬಮ್ಮನಳ್ಳಿ, ಗೋವಿಂದ ರಾಠೋಡ, ತಾಲೂಕು ಅಧಿಕಾರಿಗಳಾದ ಡಾ. ಬಸಲಿಂಗಪ್ಪ ಡಿಗ್ಗಿ, ನೀಲಗಂಗಾ ಬಬಲಾದ, ರವೀಂದ್ರ ದಾಮಾ, ಸಿದ್ಧವೀರಯ್ಯ ರುದ್ನೂರ, ಶ್ರೀಧರ, ಮನೋಜಕುಮಾರ ಗುರಿಕಾರ, ಕೃಷ್ಣಪ್ಪ ಕಲ್ಲದೇವರು, ಮಂಜುನಾಥ ರೆಡ್ಡಿ ಇದ್ದರು.
Comments are closed.