ಚಿತ್ತಾಪುರ: ಪಟ್ಟಣದ ಪ್ರಾರ್ಥನಾ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಹಿರಿಯ ರಂಗಕರ್ಮಿ ದಿ.ಎಲ್.ಬಿ.ಕೆ ಆಲ್ದಾಳ ಅವರ ನುಡಿನಮನ ಕಾರ್ಯಕ್ರಮ ನಡೆಯಿತು.
ಕಲ್ಯಾಣ ಕರ್ನಾಟಕ ಭಾಗದ ಹಿರಿಯ ರಂಗಕರ್ಮಿ, ಗುಬ್ಬಿ ವೀರಣ ಪ್ರಶಸ್ತಿ ಪುರಸ್ಕøತ ದಿ.ಎಲ್.ಬಿ.ಕೆ. ಆಲ್ದಾಳ ಅವರು ರಂಗಭೂಮಿಗೆ ನೀಡಿದ ಕೊಡುಗೆ ಅಪಾರವಾಗಿದೆ ಎಂದು ನಾಟಕ ನಿರ್ದೇಶಕ ಶಿವಣ್ಣ ಹಿಟ್ಟಿನ್ ಹೇಳಿದರು.
ಪಟ್ಟಣದ ಪ್ರಾರ್ಥನಾ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಹಿರಿಯ ರಂಗಕರ್ಮಿ ದಿ.ಎಲ್.ಬಿ.ಕೆ ಆಲ್ದಾಳ ಅವರ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಭಾಗದಲ್ಲಿ ನಾಟಕ ಕೃತಿಗಳನ್ನು ರಚಿಸಿ ಪ್ರಯೋಗಳನ್ನು ಏರ್ಪಡಿಸಿ ಸಾವಿರಾರು ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸಿದ್ದ ಕೀರ್ತಿ ಆಲ್ದಾಳ ಅವರಿಗೆ ಸಲ್ಲುತ್ತದೆ ಎಂದರು.
ಕಸಾಪ ತಾಲೂಕು ಅಧ್ಯಕ್ಷ ಕಾಶಿನಾಥ ಗುತ್ತೇದಾರ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದ ಹಿಂದು ಮುಸ್ಲಿಂ ಭಾವೈಕ್ಯತೆಯ ಶರಣ ಜೀವಿ, ಶರಣ ಚಿಂತಕ ಎಲ್ಬಿಕೆ ಆಲ್ದಾಳ ಅವರು ಶರಣರ ಕುರಿತು ರಚಿಸಿದ ನಾಟಕಗಳಿಂದ ಅವರು ಹೆಚ್ಚು ಪ್ರಚಾರಕ್ಕೆ ಬಂದಿದ್ದರು. 100ಕ್ಕೂ ಅಧಿಕ ನಾಟಕ ಇತರೆ ಗ್ರಂಥಗಳು ಪುಸ್ತಕಗಳನ್ನು ಬರೆದು ಅಪಾರ ಸಾಹಿತ್ಯ ಸೇವೆಗೈದಿದ್ದಾರೆ. ಆದರೆ ಇಂದು ಅವರು ಇಲ್ಲ ಎಂಬುದೇ ಬಹಳ ನೋವಿನ ಸಂಗತಿ ಅವರು ಸಣ್ಣವರಿಗೆ ಸಣ್ಣವರಂತೆ ದೊಡ್ಡವರಿಗೆ ದೊಡ್ಡವರಂತೆ ನೋಡಿಕೊಂಡು ಸಾಮಾನ್ಯರಲ್ಲಿ ಸಾಮಾನ್ಯರಂತೆ ಕಂಡುಬರುತ್ತಿದ್ದರು ಅವರ ಸರಳತೆ ಇತರರಿಗೆ ಮಾದರಿಯಾಗಿದೆ ಎಂದರು.
ಕರವೇ ಜಿಲ್ಲಾಧ್ಯಕ್ಷ ಮಹೇಶ ಕಾಶಿ ಮಾತನಾಡಿ, ರಂಗಭೂಮಿಗೆ ಅಪಾರ ಸೇವೆಗೈದ ಎಲ್ಬಿಕೆ ಆಲ್ದಾಳ ಹೆಸರು ಅಜರಾಮರವಾಗಿ ಇರಲು ಜಿಲ್ಲೆಯ ಯಾವುದಾದರೊಂದು ಕಟ್ಟಡಕ್ಕೆ ಅವರ ಹೆಸರು ನಾಮಕಾರಣ ಮಾಡಬೇಕು ಎಂದು ಒತ್ತಾಯಿಸಿದರು.
ಕಸಾಪ ಪದಾಧಿಕಾರಿಗಳಾದ ಶಾಂತಕುಮಾರ ಮಳಖೇಡ, ಡಾ.ಮಲ್ಲಿನಾಥ ತಳವಾರ, ರೇವಣಸಿದ್ದಪ್ಪ ರೋಣದ್, ಬಾಬು ಕಾಶಿ, ವೀರಸಂಗಪ್ಪ ಸುಲೇಗಾಂವ ಮಾತನಾಡಿದರು.
ಪದಾಧಿಕಾರಿಗಳಾದ ದೇವಪ್ಪ ನಂದೂರಕರ್, ಮಹ್ಮದ ಇಬ್ರಾಹಿಂ, ರಾಜಶೇಖರ ಬಳ್ಳಾ, ಜಗದೇವ ದಿಗ್ಗಾಂವಕರ್, ಮಲ್ಲಿಕಾರ್ಜುನ ಮದ್ರಿ, ಕಾಶಿರಾಯ ಕಲಾಲ್, ರಾಮಣ್ಣ ಡೋಣಗಾಂವ, ಬಸಪ್ಪ ಯಂಬತ್ನಾಳ, ವಿರೇಶ ಇಟಗಿ ಸೇರಿದಂತೆ ಇತರರು ಇದ್ದರು.
ಗೌರವ ಕಾರ್ಯದರ್ಶಿ ಸಿದ್ಧಲಿಂಗ ಬಾಳಿ ನಿರೂಪಿಸಿದರು.
Comments are closed.