ಆಳಂದ: ಪಾಕಿಸ್ತಾನದ ಭಯೋತ್ಪಾದಕರಿಂದ ಕಾಶ್ಮೀರದಲ್ಲಿ ನಡೆದ ಕುಕೃತ್ಯವನ್ನು ಮುಗಳಖೋಡ ಜೀಡಗಾ ಶ್ರೀಮಠದ ಪೀಠಾಧಿಪತಿಗಳಾದ ಷಡಕ್ಷರಿ ಶಿವಯೋಗಿ ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳು ತೀವ್ರವಾಗಿ ಖಂಡಿಸಿದ್ದಾರೆ.
ಈ ಕುರಿತು ಹೇಳಿಕೆಯ ಮೂಲಕ ತಿಳಿಸಿರುವ ಶ್ರೀಗಳು, 26 ತಾಯಿಯರ ಕುಟುಂಬದ ಪವಿತ್ರತೆಯನ್ನು ಧ್ವಂಸಗೊಳಿಸಿದ ಈ ದುಷ್ಕøತ್ಯದ ಬಗ್ಗೆ ಆಳವಾದ ಕಳವಳ ವ್ಯಕ್ತಪಡಿಸಿದ ಅವರು, ಯಾವುದೇ ರಾಷ್ಟ್ರವು ಇಂತಹ ಕೃತ್ಯವನ್ನು ಕ್ಷಮಿಸದು ಎಂದು ಒತ್ತಿ ಹೇಳಿದ್ದಾರೆ.
ಭಾರತವನ್ನು ಜಗತ್ತಿನ ಶಾಂತಿಯ ತೊಟ್ಟಿಲು ಎಂದು ಕೊಂಡಾಡಲಾಗುತ್ತಿದ್ದರೆ, ಪಾಕಿಸ್ತಾನವು ಭಯೋತ್ಪಾದನೆಯನ್ನು ಪ್ರೇರೇಪಿಸುವ ರಾಷ್ಟ್ರವಾಗಿ ಜಾಗತಿಕ ಮಟ್ಟದಲ್ಲಿ ಮುಜುಗರಕ್ಕೆ ಒಳಗಾಗಿದೆ ಎಂದು ಅವರು ತಿಳಿಸಿದ್ದಾರೆ.
ಪಾಕಿಸ್ತಾನದ ಭಯೋತ್ಪಾದಕರು 26 ತಾಯಿಯರ ಕುಂಕುಮವನ್ನು ಕಿತ್ತುಕೊಂಡಿರುವ ಕರ್ಮಕ್ಕೆ ಭಾರತೀಯ ಸೇನೆ ಸುಮ್ಮನೆ ಇರುವುದಿಲ್ಲ ಎಂದು ಸ್ವಾಮಿಗಳು ಎಚ್ಚರಿಸಿದ್ದಾರೆ.
ಆಪರೇಷನ್ ಸಿಂಧೂರವನ್ನು ಪ್ರಶಂಸಿಸಿದ ಅವರು, ಇದು ಕೇವಲ ಸೈನಿಕ ಕಾರ್ಯಾಚರಣೆಯμÉ್ಟೀ ಅಲ್ಲ, ಪ್ರತಿಯೊಬ್ಬ ಭಾರತೀಯ ಮಹಿಳೆಯ ಗೌರವದ ಸಂಕೇತವಾದ ಕುಂಕುಮವನ್ನು ರಕ್ಷಿಸುವ ಪ್ರತಿಜ್ಞೆಯಾಗಿದೆ ಎಂದು ವಿವರಿಸಿದ್ದಾರೆ.
ನಮ್ಮ ಸೈನಿಕರು ಉಗ್ರರನ್ನು ಹುಡುಕಿ ಹೊಡೆಯುವ ಮೂಲಕ ಭಾರತದ ಸಾರ್ವಭೌಮತೆಗೆ ಧಕ್ಕೆ ತರುವವರಿಗೆ ಪಾಠ ಕಲಿಸುತ್ತಿದ್ದಾರೆ,” ಪಾಕಿಸ್ತಾನವು ಇಂದು ಆಂತರಿಕವಾಗಿ ಕುಗ್ಗಿ, ಯಾವುದೇ ಪ್ರತಿಕ್ರಿಯೆಗೆ ಸಾಧ್ಯವಾಗದೆ ಗೋಗರೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಭಾರತೀಯರು ಶಾಂತಿಪ್ರಿಯರಾದರೂ, ಅವರ ತಾಳ್ಮೆಯನ್ನು ದುರ್ಬಲತೆ ಎಂದು ತಪ್ಪುಗ್ರಹಿಸಬಾರದು ಎಂದು ಸ್ವಾಮಿಗಳು ಎಚ್ಚರಿಕೆ ನೀಡಿದ್ದಾರೆ. “ಭಾರತದ ಗೌರವಕ್ಕೆ ಧಕ್ಕೆ ತಿರುಗುವವರಿಗೆ ಇಣುಕಿ ನೋಡದಂತೆ ಮಾಡುವವರೆಗೆ ನಮ್ಮ ಸೈನಿಕರು ವಿಶ್ರಮಿಸುವುದಿಲ್ಲ,” ಎಂದು ಅವರು ಘೋಷಿಸಿದ್ದಾರೆ. ಗಡಿಯಲ್ಲಿ ಕಾವಲು ಕಾಯುತ್ತಿರುವ ಸೈನಿಕರ ಸುರಕ್ಷತೆಗಾಗಿ ದೇವಾಲಯಗಳಲ್ಲಿ ಪ್ರಾರ್ಥಿಸುವಂತೆ ಜನತೆಗೆ ಕರೆ ನೀಡಿದ್ದಾರೆ.
Comments are closed.