ಚಿತ್ತಾಪುರ: ಕರ್ನಾಟಕ ಪುರಸಭೆ ಅಧಿನಿಯಮ 1964ರ ನಿಯಮ 133 ರಂತೆ ಪುರಸಭೆ ಅನುಮತಿಯಿಲ್ಲದೇ ಪಟ್ಟಣದಲ್ಲಿ ಜಾಹೀರಾತುಗಳನ್ನು ಅಳವಡಿಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದು ಪುರಸಭೆ ಅಧ್ಯಕ್ಷ ಚಂದ್ರಶೇಖರ ಕಾಶಿ, ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿನ ಸಾರ್ವಜನಿಕ ಪ್ರದೇಶಗಳಲ್ಲಿ, ಸಾರ್ವಜನಿಕ ಕಟ್ಟಡ, ಭೂಮಿ, ಗೋಡೆ, ಹೋರ್ಡಿಂಗ್, ಚೌಕಟ್ಟು, ಸ್ಥಂಭಗಳ ಮೇಲೆ ಸಂಘ ಸಂಸ್ಥೆಗಳು, ರಾಜಕೀಯ ಪಕ್ಷಗಳು, ಧಾರ್ಮಿಕ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು, ಖಾಸಾಗಿ ಕಂಪೆನಿಗಳು, ವೈಯಕ್ತಿಕವಾಗಿ ಪಟ್ಟಣದಲ್ಲಿ ಸಿಕ್ಕ ಸಿಕ್ಕ ಕಡೆಗಳಲ್ಲಿ ಜಾಹೀರಾತು ಹಾಕುವ ಮೂಲಕ ಪುರಸಭೆ ನಿಯಮಗಳನ್ನು ಗಾಳಿಗೆ ತೋರುತ್ತಿರುವುದು ಸರೀಯಲ್ಲ ಎಂದು ಹೇಳಿದ್ದಾರೆ.
ಒಂದು ವೇಳೆ ಕಾಯ್ದೆಯ ವಿರುದ್ಧವಾಗಿ ಜಾಹೀರಾತುಗಳನ್ನು ಹಾಕಿದರೆ ವ್ಯಕ್ತಿ, ಸಂಘಟನೆ, ಪಕ್ಷ ಅಥವಾ ಸಂಸ್ಥೆಗಳ ವಿರುದ್ಧ ಕ್ರಮ ಜರುಗಿಸಲಾಗುವುದು. 136ರ ನಿಯಮದಂತೆ ಅನಧಿಕೃತ ಜಾಹೀರಾತುಗಳನ್ನು ತೆಗೆದು ಹಾಕಲಾಗುವುದು. ಆದ್ದರಿಂದ ನಿಯಮನುಸಾರವಾಗಿ ಪುರಸಭೆಯಿಂದ ಪೂರ್ವಾನುಮತಿ ಪಡೆದು ನಿಗದಿತ ಸ್ಥಳಗಳಲ್ಲಿ ಮಾತ್ರ ಜಾಹೀರಾತು ಅಳವಡಿಸಬೇಕು ಎಂದು ಅವರು ಸೂಚಿಸಿದ್ದಾರೆ.
Next Post
Comments are closed.