ಚಿತ್ತಾಪುರ: ಪಟ್ಟಣದ ಆರ್.ಕೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜನಲ್ಲಿ ಹಮ್ಮಿಕೊಂಡಿದ್ದ ಒಂದು ದಿನದ ಜೀವನ ಕೌಶಲ್ಯ ಹಾಗೂ ಯುವ ಸ್ಪಂದನ ಕಾರ್ಯಕ್ರಮವನ್ನು ಕಲಬುರಗಿ ಯುವ ಸ್ಪಂದನ ಕೇಂದ್ರದ ಯುವ ಪರಿವರ್ತಕ ಮಮತಾ ರಾಜೋಳಕರ್ ಉದ್ಘಾಟಿಸಿದರು.
ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಕೌಶಲ್ಯ ಬೆಳೆಸಿಕೊಳ್ಳಬೇಕು ಎಂದು ರೇವಣಸಿದ್ದಪ್ಪ ಕಾಂತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ವಿಜಯಕುಮಾರ ಸಾಲಿಮನಿ ಹೇಳಿದರು.
ಪಟ್ಟಣದ ಆರ್ಕೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕ ಮತ್ತು ರಾಷ್ಟ್ರೀಯ ಸೇವಾ ಯೋಜನಾ ಸ್ವ ಆರ್ಥಿಕ ಘಟಕ ಹಾಗೂ ಕಲಬುರಗಿ ಯುವ ಸ್ಪಂದನ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಒಂದು ದಿನದ ಜೀವನ ಕೌಶಲ್ಯ ಹಾಗೂ ಯುವ ಸ್ಪಂದನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಾದವರೂ ಒಳ್ಳೆಯ ಶಿಕ್ಷಣ ಪಡೆಯುವ ಜೊತೆಗೆ ಕೌಶಲ್ಯ ತರಬೇತಿಯೂ ಸಹ ಪಡೆದು ಜೀವನದಲ್ಲಿ ಮುಂದೇ ಬರಬೇಕು ಎಂದು ಕಿವಿಮಾತು ಹೇಳಿದರು.
ತಂದೆ ತಾಯಂದಿರು ವಿದ್ಯಾರ್ಥಿಗಳ ಮೇಲೆ ಅಪಾರ ಪ್ರೀತಿ ಇಟ್ಟಿಕೊಂಡಿರುತ್ತಾರೆ. ಅವರ ವಿರುದ್ಧವಾಗಿ ನಡೆದುಕೊಳ್ಳಬಾರದು. ಶಿಕ್ಷಕರಿಗೆ ಶಾಲಾ ಕಾಲೇಜುಗಳಲ್ಲಿ ಗೌರವ ನೀಡಬೇಕು ಎಂದು ಹೇಳಿದರು.
ಸಹಾಯಕ ಪ್ರಾಧ್ಯಪಕಿ ಡಾ. ಸಾವಿತ್ರಿ ಕುಲಕರ್ಣಿ ಮಾತನಾಡಿದರು.
ಯುವ ಸ್ಪಂದನ ಯುವ ಪರಿವರ್ತಕ ಸತೀಶ ಎಸ್. ಕೆ, ಆಶಾ, ಮಮತಾ ಉಪನ್ಯಾಸ ನೀಡಿದರು.
ಕಲಬುರಗಿ ಯುವ ಸ್ಪಂದನ ಕೇಂದ್ರದ ಯುವ ಪರಿವರ್ತಕಿ ಮಮತಾ ರಾಜೋಳಕರ್ ಕಾರ್ಯಕ್ರಮ ಉದ್ಘಾಟಿಸಿದರು.
ಕಾಲೇಜಿನ ಸಿಬ್ಬಂದಿ ಕಾರ್ಯದರ್ಶಿ ಮಲ್ಲಪ್ಪ ಮಾನೇಗಾರ, ರಾಷ್ಟ್ರೀಯ ಸೇವೆ ಯೋಜನೆ ಸಂಯೋಜಕ ಡಾ. ಶರಣಪ್ಪ ಸೈದಾಪುರ, ಉಪನ್ಯಾಸಕರಾದ ಲಕ್ಷ್ಮೀಕಾಂತ ಶಿರೋಳ್ಳಿ, ಡಾ. ಅನಿಲಕುಮಾರ, ನುಜಹತ್ ಫರೀನ್, ಫರಹೀನ್ ಫಾತೀಮಾ, ಭಾಗ್ಯಲಕ್ಷ್ಮೀ, ಮಹೇಂದ್ರ ಪಟ್ಟಣಕರ್ ಸೇರಿದಂತೆ ಇತರರು ಇದ್ದರು.
ಡಾ. ಪಂಡಿತ್ ಬಿ.ಕೆ ಪ್ರಾಸ್ತಾವಿಕ ಮಾತನಾಡಿದರು. ಡಾ. ಸಾವಿತ್ರಿ ದೇಸಾಯಿ ನಿರೂಪಿಸಿದರು. ಪೂಜಾ ವಂದಿಸಿದರು.ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಕೌಶಲ್ಯ ಬೆಳೆಸಿಕೊಳ್ಳಬೇಕು ಎಂದು ರೇವಣಸಿದ್ದಪ್ಪ ಕಾಂತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ವಿಜಯಕುಮಾರ ಸಾಲಿಮನಿ ಹೇಳಿದರು.
ಪಟ್ಟಣದ ಆರ್ಕೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕ ಮತ್ತು ರಾಷ್ಟ್ರೀಯ ಸೇವಾ ಯೋಜನಾ ಸ್ವ ಆರ್ಥಿಕ ಘಟಕ ಹಾಗೂ ಕಲಬುರಗಿ ಯುವ ಸ್ಪಂದನ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಒಂದು ದಿನದ ಜೀವನ ಕೌಶಲ್ಯ ಹಾಗೂ ಯುವ ಸ್ಪಂದನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಾದವರೂ ಒಳ್ಳೆಯ ಶಿಕ್ಷಣ ಪಡೆಯುವ ಜೊತೆಗೆ ಕೌಶಲ್ಯ ತರಬೇತಿಯೂ ಸಹ ಪಡೆದು ಜೀವನದಲ್ಲಿ ಮುಂದೇ ಬರಬೇಕು ಎಂದು ಕಿವಿಮಾತು ಹೇಳಿದರು.
ತಂದೆ ತಾಯಂದಿರು ವಿದ್ಯಾರ್ಥಿಗಳ ಮೇಲೆ ಅಪಾರ ಪ್ರೀತಿ ಇಟ್ಟಿಕೊಂಡಿರುತ್ತಾರೆ. ಅವರ ವಿರುದ್ಧವಾಗಿ ನಡೆದುಕೊಳ್ಳಬಾರದು. ಶಿಕ್ಷಕರಿಗೆ ಶಾಲಾ ಕಾಲೇಜುಗಳಲ್ಲಿ ಗೌರವ ನೀಡಬೇಕು ಎಂದು ಹೇಳಿದರು.
ಸಹಾಯಕ ಪ್ರಾಧ್ಯಪಕಿ ಡಾ. ಸಾವಿತ್ರಿ ಕುಲಕರ್ಣಿ ಮಾತನಾಡಿದರು.
ಯುವ ಸ್ಪಂದನ ಯುವ ಪರಿವರ್ತಕ ಸತೀಶ ಎಸ್. ಕೆ, ಆಶಾ, ಮಮತಾ ಉಪನ್ಯಾಸ ನೀಡಿದರು.
ಕಲಬುರಗಿ ಯುವ ಸ್ಪಂದನ ಕೇಂದ್ರದ ಯುವ ಪರಿವರ್ತಕಿ ಮಮತಾ ರಾಜೋಳಕರ್ ಕಾರ್ಯಕ್ರಮ ಉದ್ಘಾಟಿಸಿದರು.
ಕಾಲೇಜಿನ ಸಿಬ್ಬಂದಿ ಕಾರ್ಯದರ್ಶಿ ಮಲ್ಲಪ್ಪ ಮಾನೇಗಾರ, ರಾಷ್ಟ್ರೀಯ ಸೇವೆ ಯೋಜನೆ ಸಂಯೋಜಕ ಡಾ. ಶರಣಪ್ಪ ಸೈದಾಪುರ, ಉಪನ್ಯಾಸಕರಾದ ಲಕ್ಷ್ಮೀಕಾಂತ ಶಿರೋಳ್ಳಿ, ಡಾ. ಅನಿಲಕುಮಾರ, ನುಜಹತ್ ಫರೀನ್, ಫರಹೀನ್ ಫಾತೀಮಾ, ಭಾಗ್ಯಲಕ್ಷ್ಮೀ, ಮಹೇಂದ್ರ ಪಟ್ಟಣಕರ್ ಸೇರಿದಂತೆ ಇತರರು ಇದ್ದರು.
ಡಾ. ಪಂಡಿತ್ ಬಿ.ಕೆ ಪ್ರಾಸ್ತಾವಿಕ ಮಾತನಾಡಿದರು. ಡಾ. ಸಾವಿತ್ರಿ ದೇಸಾಯಿ ನಿರೂಪಿಸಿದರು. ಪೂಜಾ ವಂದಿಸಿದರು.
Comments are closed.