Shubhashaya News

ಆಳಂದನಲ್ಲಿ ಇಂದು ಡಾ. ಬಿ.ಆರ್. ಅಂಬೇಡ್ಕರ್ ಜಯಂತಿಗೆ ಚಾಲನೆ-ನಾಟಕ ಪ್ರದರ್ಶನ ನಾಳೆ ಶ್ರೀರಾಮ ಮಾರುಕಟ್ಟೆಯಲ್ಲಿ ಬಹಿರಂಗ ಸಭೆsÀ: ನಾಡಿದು ಭವ್ಯ ಮೆರವಣಿಗೆ

ಆಳಂದ: ಪಟ್ಟಣದಲ್ಲಿ ಮೇ ೫ರಿಂದ ಮೂರುದಿನಗಳ ಕಾಲ ನಡೆಯುವ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಉತ್ಸವ ಕುರಿತಾಗಿ ಪ್ರಚಾರ ಸಮಿತಿ ಅಧ್ಯಕ್ಷ ಶಿವುಪುತ್ರ ನಡಗೇರಿ, ಅಧ್ಯಕ್ಷ ಸೂರ್ಯಕಾಂತ ಸಾಲೇಗಾಂವ ಇತರರು ವಾಲ್‌ಪೋಸ್ಟರ್ ಬಿಡುಗಡೆ ಮಾಡಿದರು.

ಆಳಂದ: ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿ ಅಂಗವಾಗಿ ಪಟ್ಟಣದಲ್ಲಿ ಮೇ ೫ರಿಂದ ಮೂರುದಿನಗಳ ಕಾಲ ವಿಶೇಷ ಹಾಗೂ ಅರ್ಥಪೂರ್ಣ ಉತ್ಸವವನ್ನು ಆಚರಿಸಲಾಗುತ್ತಿದೆ ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಯ ಹಾಗೂ ತಾಲೂಕಿನ ಸಾರ್ವಜನಿಕರು ಪಾಲ್ಗೊಳ್ಳಬೇಕು ಎಂದು ಉತ್ಸವದ ಪ್ರಾಚಾರ ಸಮಿತಿ ಅಧ್ಯಕ್ಷ ಶಿವುಪುತ್ರ ನಡಗೇರಿ ಮತ್ತು ಅಧ್ಯಕ್ಷ ಸೂರ್ಯಕಾಂತ ಸಾಲೇಗಾಂವ ಜಂಟಿಯಾಗಿ ಇಂದಿಲ್ಲಿ ಹೇಳಿದರು.
ಪಟ್ಟಣದಲ್ಲಿ ಈ ಕುರಿತು ಕಾರ್ಯಕ್ರಮದ ಪ್ರಚಾರದ ವಾಲ್‌ಪೋಸ್ಟ್ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಪ್ರಥಮ ಬಾರಿಗೆ ಸ್ಥಳೀಯ ಭೀಮನಗರದ ತಾಲೂಕು ಮಟ್ಟದ ಸಮಿತಿಯ ಆಶ್ರಯದಲ್ಲಿ ಈ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಎಂದು ಹೇಳಿದರು.
ಮೇ. ೫ರಂದು ಸಂಜೆ.೭:೦೦ಗAಟೆಗೆ ಪಟ್ಟಣದ ಭೀಮನಗರದಲ್ಲಿ ಬಾಬಾಸಾಹೇಬ ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನ ಮತ್ತು ಸಂದೇಶ ಕರಿತಾದ ನಾಕಟ ಪ್ರದರ್ಶನ ನಡೆಯುವುದು.

ಮೇ ೬ರಂದು ಸಂಜೆ ೫:೦೦ ಗಂಟೆಗೆ ಪಟ್ಟಣದ ಶ್ರೀರಾಮ ಮಾರುಕಟ್ಟೆಯಲ್ಲಿ ಬೃಹತ್ ಬಹಿರಂಗ ಸಮಾರಂಭ ನಡೆಯಲಿದೆ. ಸಾನ್ನಿಧ್ಯವನ್ನು ಮೈಸೂರು ಉರಿಲಿಂಗ ಪೇದ್ದಿ ಮಠದ ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿ, ಅಣದೂರ ಬುದ್ಧ ವಿವಾಹರದ ಬಂತೇ ವರಜ್ಯೋತಿ ಥೆರೋ ನೇತೃತ್ವ ವಹಿಸುವರು. ನಿರಗುಡಿಯ ಹವಾ ಮಲ್ಲಯ್ಯಾ ಮುತ್ತಾö್ಯ, ಶಾಸಕ ಬಿ.ಆರ್. ಪಾಟೀಲ, ಮಾಜಿ ಶಾಸಕ ಸುಭಾಷ ಗುತ್ತೇದಾರ, ಆಗಮಿಸುವರು, ಸಮಾರಂಭ ಉದ್ಘಾಟನೆಯನ್ನು ಮಾಜಿ ಸಚಿವ ಎನ್. ಮಹೇಶ ನೆರವೇರಿಸುವರು. ಅಧ್ಯಕ್ಷತೆ ಸಮಿತಿ ಗೌರವ ಅಧ್ಯಕ್ಷ ಪಾಂಡುರAಗ ಮೊದಲೆ, ಉದ್ಯಮಿ ಸಿ.ಕೆ.ಪಾಟೀಲ ವಹಿಸುವರು. ಜೆಡಿ(ಎಸ್) ಜಿಲ್ಲಾಧ್ಯಕ್ಷೆ ಮಹೇಶ್ವರಿ ಎಸ್. ವಾಲಿ, ಜಿಪಂ ಮಾಜಿ ಸದಸ್ಯ ಹರ್ಷಾನಂದ ಗುತ್ತೇದಾರ, ಕೆಎಂಎಫ್ ಅಧ್ಯಕ್ಷ ಆರ್.ಕೆ.ಪಾಟೀಲ, ರಾಜಕುಮಾರ ಎಚ್. ಕಪನೂರ, ದಲಿತ ಸೇನೆ ರಾಜ್ಯಾಧ್ಯಕ್ಷ ಹಣಮಂತ ಯಳಸಂಗಿ ಆಗಮಿಸುವರು. ರಾಜ್ಯಸಭಾ ಸದಸ್ಯೆ ಜ್ಯೋತಿ ವಾಘ್ಮೋರೆ, ಸೇರಿದಂತೆ ಅನೇಕ ಅಧಿಕಾರಿಗಳು, ರಾಜಕೀಯ, ಸಾಮಾಜಿಕ ಹಾಗೂ ಧಾರ್ಮಿಕ ಮುಖಂಡರು ಭಾಗವಹಿಸಲಿದ್ದಾರೆ ಎಂದರು.
ಮೇ ೭ರಂದು ಬುದ್ಧ, ಬಸವ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಗಳೊಂದಿಗೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ದಿನವಿಡೀ ಭವ್ಯ ಮೆರವಣಿಗೆ ಹಮ್ಮಿಕೊಳ್ಳಳಾಗಿದೆ. ಈ ಮುನ್ನದಿವಾದ ಮೇ ೬ರಂದು ನಡೆಯುವ ಭಾರಿ ಬಹಿರಂಗ ಸಮಾರಂಭಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಗಂಗಾರಾಮ ಮುದಗಲೆ, ನಾಗರಾಜ ದೇವನೂರ, ಲಕ್ಷö್ಮಣ ಝಳಕಿಕರ್, ದಯಾನಂದ ಸಾಲೇಗಾಂವ, ಮುತ್ತಣ್ಣಾ ಜಂಗಲೆ, ಮತ್ತಿತರರು ಇದ್ದರು.

Comments are closed.

Don`t copy text!