ಆಳಂದ: ಮೇ 7ರಂದು ಭಾರತವು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಭಯೋತ್ಪಾದಕ ಶಿಬಿರಗಳ ಮೇಲೆ ಯಶಸ್ವಿಯಾಗಿ ನಡೆಸಿದ “ಆಪರೇಷನ್ ಸಿಂದೂರ್” ಸೇನಾ ಕಾರ್ಯಚರಣೆಗೆ ಅಭಿಮಾನದ ಸೂಚನೆಯಾಗಿ, ಆಳಂದ ಪಟ್ಟಣದ ನಗರೇಶ್ವರ ರಾಮಮಂದಿರದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು.
ಮಾಜಿ ಶಾಸಕ ಸುಭಾಷ ಆರ್. ಗುತ್ತೇದಾರ ಅವರು ಈ ಪೂಜೆಯನ್ನು ನಡೆಸಿ ಮಾತನಾಡುತ್ತಾ, “ಭಾರತದ ಸೇನೆ ಈ ಕಾರ್ಯಾಚರಣೆಯ ಮೂಲಕ ವಿಶ್ವದ ಮುಂದೆ ತನ್ನ ಶಕ್ತಿಯನ್ನು ಮತ್ತೊಮ್ಮೆ ಪ್ರದರ್ಶಿಸಿದೆ. ನಮ್ಮ ಯೋಧರಿಗೆ ಒಳಿತಾಗಲಿ, ಭಾರತೀಯ ಸೇನೆಗೆ ಭಗವಂತನು ಇನ್ನಷ್ಟು ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇವೆ,” ಎಂದು ಹೇಳಿದರು.
ಈ ಸಂದರ್ಭ, ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಂದಗೂಳೆ, ಹಿರಿಯ ಮುಖಂಡ ಸಂಜಯ ಮಿಸ್ಕಿನ್, ಎಸ್ಸಿ ಮೋರ್ಚಾ ಉಪಾಧ್ಯಕ್ಷ ಸುನಿಲ ಹಿರೋಳಿಕರ, ಪ್ರಧಾನ ಕಾರ್ಯದರ್ಶಿ ಪ್ರಕಾಶ ಮಾನೆ, ಪುರಸಭೆ ಸದಸ್ಯ ಶಿವಪುತ್ರ ನಡಗೇರಿ. ಮಂತೃಜಯ ಆಲೂರೆ, ಪ್ರಭಾಕರ ಘನಾತೆ, ಬಸವರಾಜ ಹತ್ತರಕಿ, ಮಲ್ಲಿಕಾರ್ಜುನ ಕರಲಗಿ,ತಾಲೂಕ ಬ್ರಾಹ್ಮಣ ಸಮಾಜದ ಅಧ್ಯಕ್ಷರಾದ ವಿಜಯಕುಮಾರ ಕೋಥಳಿಕರ, ಮುಖಂಡ ನಾಗನಾಥ ಏಟೆ, ಅರ್ಪಣಾ ಹೊದಲುರಕರ, ರಾಘವೇಂದ್ರ ಪೊದ್ದಾರ, ಸುರೇಶ ಕುಲಕರ್ಣಿ ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥತಿದ್ದರು.
Prev Post
Comments are closed.