ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ಸಿಂದೂರು ಕಾರ್ಯಾಚರಣೆ
ಬಸ್ ನಿಲ್ದಾಣ ಬಳಿ ಪಟಾಕಿ ಸಿಡಿಸಿ ಕಾಂಗ್ರೆಸ್, ಬಿಜೆಪಿ ಸಂಭ್ರಮ
ಆಳಂದ: ಪಾಕಿಸ್ತಾನದ ಉಗ್ರ ನೆಲೆ ದ್ವಂಸಗೊಳಿಸಿದ ಹಿನ್ನೆಲೆಯಲ್ಲಿ ಭಾರತೀಯ ಸೈನ್ಯಕ್ಕೆ ಬೆಂಬಲಿಸಿ ಪಟ್ಟಣದ ಬಸ್ ನಿಲ್ದಾಣ ಬಳಿ ಆಚರಿಸಿದ ಸಂಭ್ರಮಾಚರಣೆಯಲ್ಲಿ ಸಿದ್ಧನ್ಣಗೌಡ ಪಾಟೀಲ ಮಾತನಾಡಿದರು. ನ್ಯಾಯವಾದಿ ಬಾಬಾಸಾಹೇಬ ವಿ. ಪಾಟೀಲ, ಆನಂದ ಪಾಟೀಲ, ಮಲ್ಲಿಕಾರ್ಜುನ ಕಂದಗುಳೆ ಇತರರು ಇದ್ದರು.
ಅಳಂದ: ಜಮ್ಮು-ಕಾಶ್ಮೀರದ ಪಹಲ್ಗಾಮ್ನಲ್ಲಿ ಏಪ್ರಿಲ್ 22, 2025 ರಂದು ನಡೆದ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆಯು ಪಾಕಿಸ್ತಾನದ ಒಳಗೆ ನುಗ್ಗಿ ನಡೆಸಿದ ‘ಆಪರೇಷನ್ ಸಿಂದೂರು’ ಕಾರ್ಯಾಚರಣೆಯ ಯಶಸ್ಸಿನ ಬಗ್ಗೆ ಅಳಂದ ತಾಲೂಕಿನ ಜನತೆಯಲ್ಲಿ ಭಾರೀ ಚರ್ಚೆಯ ನುಡುವೆ ಸಂಭ್ರಮಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆ, ವಾಯುಪಡೆ ಮತ್ತು ನೌಕಾಪಡೆಗಳು ಒಗ್ಗೂಡಿ, ಪಾಕಿಸ್ತಾನದ ಪಂಜಾಬ್ ಪ್ರಾಂತ್ಯ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದ (ಪಿಒಕೆ) 9 ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿದ್ದು, ಲಷ್ಕರ್-ಎ-ತೊಯ್ಬಾ ಮತ್ತು ಜೈಶ್-ಎ-ಮೊಹಮ್ಮದ್ ಸಂಘಟನೆಗಳಿಗೆ ಭಾರೀ ಹೊಡೆತ ನೀಡಿದೆ ಎಂದು ಪಟ್ಟಣದ ಬಸ್ ನಿಲ್ದಾಣ ಬಳಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷ ಸೇರಿ ನಾಗರಿಕ ಪಕ್ಷಭೇದ ಮರೆತು ಕಾರ್ಯರ್ಕರು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಬಿಜೆಪಿ ಮಂಡಲ ಮಾಜಿ ಅಧ್ಯಕ್ಷ ಆನಂದರಾವ್ ಪಾಟೀಲ ಕೊರಳ್ಳಿ ಅವರು ಮಾತನಾಡಿ, “ನಮ್ಮ ಸೇನೆ ಪಾಕಿಸ್ತಾನದ ಒಳಗೆ ಹೋಗಿ ಉಗ್ರರನ್ನು ಹೊಡೆದಿರುವುದು ನಿಜಕ್ಕೂ ಹೆಮ್ಮೆಯ ವಿಷಯ. ಪಹಲ್ಗಾಮ್ನಲ್ಲಿ 26 ಅಮಾಯಕರನ್ನು ಕೊಂದ ಉಗ್ರರಿಗೆ ಇದು ತಕ್ಕ ಶಾಸ್ತಿ,” ಎಂದು ಹೇಳಿದರು.
ಕಾಂಗ್ರೆಸ್ ಯುವ ಮುಖಂಡ ಸಿದ್ಧನಗೌಡ ಪಾಟೀಲ ಮಗ್ಗಿ ಅವರು, “ಆಪರೇಷನ್ ಸಿಂದೂರು ಭಾರತದ ಶಕ್ತಿಯನ್ನು ತೋರಿಸಿದೆ. ರಫೇಲ್ ಯುದ್ಧವಿಮಾನಗಳು, ಕ್ರೂಸ್ ಕ್ಷಿಪಣಿಗಳನ್ನು ಬಳಸಿ ನಿಖರ ದಾಳಿ ನಡೆಸಿದ್ದು, ಪಾಕಿಸ್ತಾನಕ್ಕೆ ಖಡಕ್ ಸಂದೇಶ ರವಾನಿಸಿದೆ,” ಎಂದು ಉತ್ಸಾಹದಿಂದ ತಿಳಿಸಿದರು. ಭಾರತೀಯ ಸೈನಿಕರ ಸಹಾಯಸಕ್ಕೆ ಮೆಚ್ಚಿಗೆ ವ್ಯಕ್ತಪಡಿಸಿ ಬೆಂಬಲಿಸಿದರು. “ಪಾಕಿಸ್ತಾನ ಯಾವಾಗಲೂ ಉಗ್ರರನ್ನು ಬೆಂಬಲಿಸುತ್ತದೆ. ಈ ದಾಳಿಯಿಂದ ಅವರಿಗೆ ತಕ್ಕ ಪಾಠ ಕಲಿತಿರಬೇಕು,” ಎಂದು ಆಕ್ರೋಶದಿಂದ ಹೇಳಿದರು.
ಈ ಸಂದರ್ಭದಲ್ಲಿ ಪುರಸಭೆ ಮಾಜಿ ಸದಸ್ಯ ಲಿಂಗರಾಜ ಪಾಟೀಲ, ಸುನೀಲ ಹಿರೋಳಿಕರ್, ನ್ಯಾಯವಾದಿ ಬಾಬಾಸಾಹೇಬ ವಿ. ಪಾಟೀಲ, ಮಹೇಶ ಕೊರಳ್ಳಿ, ನಾಗೇಂದ್ರ ಕಾಬಡೆ, ಮಲ್ಲಿಕಾರ್ಜುನ ಕಂದಗುಳೆ, ಶ್ರೀಶೈಲ ಖಜೂರಿ, ಶಿವುಕುಮಾರ ಮರಡಿ, ಶರಣಗೌಡ, ಪ್ರಕಾಶ ಮಾನೆ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಪಾಕಿಸ್ತಾನ-ಭಾರತ ಯುದ್ಧದ ಭೀತಿ?
ಕೆಲವರು ಈ ಕಾರ್ಯಾಚರಣೆಯಿಂದ ಭಾರತ-ಪಾಕಿಸ್ತಾನದ ನಡುವೆ ಯುದ್ಧದ ಸಾಧ್ಯತೆಯ ಬಗ್ಗೆ ಚರ್ಚಿಸುತ್ತಿದ್ದಾರೆ. ಸ್ಥಳೀಯ ವ್ಯಾಪಾರಿಯೊಬರೊಬ್ಬರು “ಪಾಕಿಸ್ತಾನಕ್ಕೆ ಈ ದಾಳಿಯಿಂದ ಆಘಾತವಾಗಿದೆ. ಆದರೆ ಯುದ್ಧ ನಡೆದರೆ ಎರಡೂ ದೇಶಗಳ ಜನರಿಗೆ ತೊಂದರೆಯಾಗುತ್ತದೆ. ಭಾರತ ಈಗ ತನ್ನ ಶಕ್ತಿ ತೋರಿಸಿದೆ, ಇನ್ನು ರಾಜತಾಂತ್ರಿಕವಾಗಿ ಒತ್ತಡ ಹೇರಬೇಕು,” ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಇನ್ನೊಬ್ಬ ಗ್ರಾಮೀಣ ನಿವಾಸಿ ಬಸವರಾಜ ಮೂಲಗೆ ಅವರು, “1971ರ ಯುದ್ಧದ ನಂತರ ಇದೇ ಮೊದಲ ಬಾರಿಗೆ ಭಾರತದ ಮೂರು ಪಡೆಗಳು ಒಟ್ಟಾಗಿ ಇಂತಹ ದೊಡ್ಡ ಕಾರ್ಯಾಚರಣೆ ನಡೆಸಿವೆ. ಪಾಕಿಸ್ತಾನ ಇನ್ನಾದರೂ ಉಗ್ರರಿಗೆ ಬೆಂಬಲ ನೀಡುವುದನ್ನು ನಿಲ್ಲಿಸಬೇಕು, ಇಲ್ಲದಿದ್ದರೆ ಇನ್ನಷ್ಟು ಕಠಿಣ ಕ್ರಮ ಕಾಣಬೇಕಾಗುತ್ತದೆ,” ಎಂದು
ಸಿಂದೂರು ಕಾರ್ಯಾಚರಣೆ: ತಕ್ಕ ಪಾಠ
‘ಆಪರೇಷನ್ ಸಿಂದೂರು’ ಕಾರ್ಯಾಚರಣೆಯು ಕೇವಲ ಉಗ್ರರ ನೆಲೆಗಳನ್ನು ಗುರಿಯಾಗಿಸಿತ್ತು, ಪಾಕಿಸ್ತಾನದ ಸೇನಾ ಸೌಕರ್ಯಗಳ ಮೇಲೆ ದಾಳಿ ನಡೆಸಿಲ್ಲ. ಈ ಕಾರ್ಯಾಚರಣೆಯಲ್ಲಿ 80ಕ್ಕೂ ಹೆಚ್ಚು ಉಗ್ರರನ್ನು ಸಂಹರಿಸಲಾಗಿದ್ದು, ಭಾರತದ ರಕ್ಷಣಾ ಸಾಮಥ್ರ್ಯವನ್ನು ವಿಶ್ವಕ್ಕೆ ತೋರಿಸಿದೆ. ಅಳಂದದ ಜನರು ಈ ಕಾರ್ಯಾಚರಣೆಯನ್ನು “ಪಾಕಿಸ್ತಾನಕ್ಕೆ ತಕ್ಕ ಪಾಠ” ಎಂದು ಬಣ್ಣಿಸಿದ್ದಾರೆ.
Comments are closed.