ಇತ್ತೀಚಿಗೆ ಸದನದಲ್ಲಿ ಬಟ್ಟೆ ಬಿಚ್ಚಿ ಪ್ರತಿಭಟನೆ ಮಾಡಲು ಹೋಗಿ ಸದನದಿಂದ ಅಮಾನತ್ತು ಶಿಕ್ಷೆಗೆ ಒಳಗಾಗಿರುವ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಶಾಸಕ ಬಿ ಕೆ ಸಂಗಮೇಶ ಈ ರೀತಿ ವರ್ತನೆ ತೋರಿದ್ದು ತಮ್ಮ ಸ್ವಂತ ಬುದ್ಧಿಯಿಂದ ಅಲ್ವಂತೆ. ಇದಕ್ಕೆ ಕಾರಣ ಬೇರೆಯವರು ಇದ್ದಾರಂತೆ. ಈ ವಿಷಯದ ಕುರಿತು ಅಧಿಕೃತ ಮಾಹಿತಿ ಈಗಷ್ಟೇ ಹೊರ ಬಿದ್ದಿದೆ.
ಸೋಮವಾರ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ವಿಷಯದ ಕುರಿತು ಸುದೀರ್ಘ ಚರ್ಚೆಯಾಗಿದೆ. ಸದನದಲ್ಲಿ ಸಂಗಮೇಶ ಶರ್ಟ ಬಿಚ್ಚಿದ ಕುರಿತು ಅನೇಕ ಹಿರಿಯ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ವಿಷಯ ಚರ್ಚೆಗೆ ಬಂದಾಗ ಶಾಸಕ ಸಂಗಮೇಶ ನಾನು ಈ ರೀತಿ ಮಾಡಿದ್ದು ಶಾಸಕ ಬಿ ಜಡ್ ಜಮೀರ ಅಹ್ಮದ್ ಖಾನ್ ಅವರ ಸಲಹೆ ಮೇರೆಗೆ ಎಂದು ಉತ್ತರಿಸಿದ್ದಾರೆ ಇದಕ್ಕೆ ಮರು ಪ್ರಶ್ನೆ ಹಾಕಿದ ಹಿರಿಯ ಸದಸ್ಯರೊಬ್ಬರು “ ಜಮೀರು ನಾಳೆ ಚಡ್ಡಿ ಬಿಚ್ಚು ಅಂತಾ ಹೇಳ್ತಾರೆ ಆಗ ಚಡ್ಡಿ ಬಿಚ್ಚತೀರಾ” ಎಂದು ಕೇಳಿದ್ದಾರೆ. ಆಗ ಶಾಸಕ ಸಂಗಮೇಶ ಮರು ಮಾತನಾಡದೇ ಜಮೀರ್ ಮುಖ ನೋಡುತ್ತ ಕುಳಿತುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
Comments are closed.