Shubhashaya News

ತಡರಾತ್ರಿ ತೆರಳಿ ರೆಮ್‌ಡಿಸಿವಿರ್‌ ತಂದ ಸಂಸದ

ಕಲಬುರ್ಗಿ: ಜಿಲ್ಲೆಯ ಆಸ್ಪತ್ರೆಗಳಲ್ಲಿ ರೆಮ್‌ಡಿಸಿವಿರ್‌ ಚುಚ್ಚುಮದ್ದು ಕೊರತೆ ನೀಗಿಸಲು ಸಂಸದ ಡಾ.ಉಮೇಶ ಜಾಧವ ಅವರು ನಸುಕಿನ 1 ಗಂಟೆಗೆ ಬೆಂಗಳೂರಿನ ಸಹಾಯಕ ಔಷಧಿ ನಿಯಂತ್ರಕರ ಕಚೇರಿಗೆ ತೆರಳಿ, ಅಗತ್ಯ ಚುಚ್ಚುಮದ್ದು ಮಂಜೂರು ಮಾಡಿಸಿಕೊಂಡಿದ್ದಾರೆ.

ಕಲಬುರ್ಗಿ ಜಿಲ್ಲೆಗೆ 350 ವೈಲ್‌ ರೆಮ್‌ಡಿಸಿವಿರ್‌ ಚುಚ್ಚುಮದ್ದು ಬೇಡಿಕೆ ಸಲ್ಲಿಸಲಾಗಿತ್ತು. ಅವು ಗುರುವಾರದ ವೇಳೆಗೂ ತಲುಪುವ ಸಾಧ್ಯತೆ ಇಲ್ಲ ಎಂಬ ಮಾಹಿತಿ ಇತ್ತು. ರೆಮ್‌ಡಿಸಿವಿರ್‌ ಅಗತ್ಯದ ಬಗ್ಗೆ ಸ್ಥಳೀಯ ವೈದ್ಯರು ಸಂಸದರ ಗಮನಕ್ಕೆ ತಂದರು.

ತಾವೇ ಬೆಂಗಳೂರಿಗೆ ತೆರಳಿದ ಸಂಸದರು, ಕಲಬುರ್ಗಿ ಜಿಲ್ಲೆಯಲ್ಲಿ ಈ ಚುಚ್ಚುಮದ್ದು ದಾಸ್ತಾನು ಇಲ್ಲ ಎಂಬ ಬಗ್ಗೆ ಸಹಾಯಕ ಔಷಧಿ ನಿಯಂತ್ರಕರಿಗೆ ಮನವರಿಕೆ ಮಾಡಿಕೊಟ್ಟರು. 350 ರೆಮ್‌ಡಿಸಿವಿರ್‌ ವೈಲ್‌ಗಳನ್ನು ತಕ್ಷಣ ಮಂಜೂರು ಮಾಡಿಸಿಕೊಂಡು ಅವುಗಳನ್ನು ತಾವೇ ಕಲಬುರ್ಗಿಗೆ ತರುತ್ತಿದ್ದಾರೆ.

‘ಕಲಬುರ್ಗಿಗೆ ಮೊದಲ ವಿಮಾನದಲ್ಲಿ ಈ ಚುಚ್ಚುಮದ್ದು ವೈಲ್‌ಗಳೊಂದಿಗೆ ಬರುತ್ತಿದ್ದೇನೆ. ಬೆಳಿಗ್ಗೆ 9.30ರ ವೇಳೆಗೆ ಕಲಬುರ್ಗಿ ತಲುಪಲಿದ್ದು, 10 ಗಂಟೆಯ ವೇಳೆಗೆ ಅಗತ್ಯ ರೋಗಿಗಳಿಗೆ ಈ ಚುಚ್ಚುಮದ್ದು ನೀಡಲು ಸಾಧ್ಯವಾಗಲಿದೆ’ ಎಂದು ಸಂಸದರು ತಿಳಿಸಿದ್ದಾರೆ.

Comments are closed.

Don`t copy text!