ಚಿತ್ತಾಪುರದಲ್ಲಿ ನಿಷೇಧಾಜ್ಞೆ ದಿಢೀರ್ ಜಾರಿ
ಏಕಾಏಕಿ ಅಂಗಡಿ ಮುಂಗ್ಗಟ್ಟುಗಳನ್ನು ಬಂದ್ ಮಾಡಿದ ತಾಲೂಕು ಆಡಳಿತ, ಚಿಂತೆಯಲ್ಲಿ ವ್ಯಾಪಾರಿಗಳು
ಚಿತ್ತಾಪುರ: ಅಂಗಡಿ ಮುಂಗ್ಗಟ್ಟುಗಳನ್ನು ದಿಢೀರ್ ಬಂದ್ ಮಾಡಿದ್ದರಿಂದ ಪಟ್ಟಣದ ಮಾರುಕಟ್ಟೆ ಬೀದಿ ಬೀಕೋ ಎನ್ನುತ್ತಿರುವುದು.
ಚಿತ್ತಾಪುರ: ಪಟ್ಟಣದಲ್ಲಿ ಗುರುವಾರ ಸಾಯಂಕಾಲ 5 ಗಂಟೆಗೆ ಏಕಾಏಕಿ ಅಂಗಡಿ ಮುಂಗ್ಗಟ್ಟುಗಳನ್ನು ಪೊಲೀಸರು ಸಂಪೂರ್ಣ ಬಂದ್ ಮಾಡಿಸಿದ್ದು, ರಾಜ್ಯ ಮತ್ತೋಂದು ಲಾಕ್ಡೌನ್ನತ್ತ ಹೆಜ್ಜೆ ಇಡುತ್ತಿದೆಯೇ? ಹೀಗೆ ಆದರೆ ನಮ್ಮ ಮುಂದಿನ ಜೀವನದ ಕಥೆ ಹೇಗೆ ಎಂಬುವುದು ಬೀದಿ ಬದಿ ವ್ಯಾಪಾರಿಗಳ ಚಿಂತೆಗೆ ಕಾರಣವಾಗಿದೆ.
ಈ ಹಿಂದೆ ಸರ್ಕಾರ ರಾತ್ರಿ 9 ರಿಂದ ಬೆಳಗ್ಗೆ 6ರ ವರೆಗೆ ಮಿನಿ ಲಾಕ್ಡೌನ್ ಜಾರಿ ಮಾಡಿ ಜನಸಂಚಾರಕ್ಕೆ ಕಪ್ರ್ಯೂ ವಿಧಿಸಿತ್ತು. ಆದರೆ ಗುರುವಾರ ಯಾವುದೇ ಮುನ್ಸೂಚನೆ ನೀಡದ ಪೊಲೀಸರು ದಿಢೀರನೇ ಅಂಗಡಿ ಮುಂಗ್ಗಟ್ಟುಗಳ್ನನು ಬಂದ್ ಮಾಡಿಸಿದ್ದರಿಂದ ವ್ಯಾಪರಸ್ಥರಿಗೆ ತೀವ್ರ ಗೊಂದಲಕ್ಕೆ ಕಾರಣವಾಗಿದೆ. ಕಳೆದ ಲಾಕ್ಡ್ವನ್ನಲ್ಲಿ ಮಾಡಿದ ಸಾಲಗಳೆ ಇನ್ನೂ ತೀರದೆ ತೀರಿಲ್ಲ. ಇದೀಗ ಮತ್ತೊಂದು ಲಾಕ್ಡೌನ್ ಎದುರಾದರೆ ಮುಂದೇನು ಮಾಡಬೇಕು ಎಂಬ ಚಿಂತೆಯಲ್ಲಿದ್ದಾರೆ.
ಬದುಕಿನ ಕಥೆ ಏನು: ಬಹುತೇಕ ಬೀದಿ ಬದಿಯ ವ್ಯಾಪಾರಿಗಳ ವ್ಯವಹಾರ ಆರಂಭವಾಗುವುದೇ ಬೆಳಗ್ಗೆ 11ರ ನಂತರ ಇದೀಗ ಪವಿತ್ರ ರಂಜಾನ್ ಶುರುವಾಗಿದ್ದರಿಂದ ಮುಸ್ಲಿಂರು ಸಂಜೆ 5ರ ನಂತರ ವ್ಯವಹಾರಕ್ಕೆ ಬರುತ್ತಾರೆ. ಆದರೆ ಇದೇ ಸಮಯದಲ್ಲಿ ಬಂದ್ ಮಾಡಿಸಿದ್ದರಿಂದ ತಾವು ಮಾಡಿಟ್ಟುಕೊಂಡ ಎಲ್ಲಾ ಪದಾರ್ಥಗಳನ್ನು ತಿಪ್ಪೆಗೆ ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗೆ ಮುಂದುವರೆದರೆ ನಮ್ಮ ಬದುಕಿನ ಕಥೆ ಹೇಗೆ? ಕಳೆದ ವರ್ಷ ಮಾರ್ಚ್ನಿಂದ ಆರಂಭವಾದ ಲಾಕ್ಡೌನ್ ಸತತ 5 ತಿಂಗಳುಗಳ ಕಾಲ ಇನ್ನಿಲ್ಲದಂತೆ ಕಾಡಿದ್ದು, ಮನೆ ಬಾಡಿಗೆ ಕಟ್ಟದೆ ಜೀವನಕ್ಕೆ ಯಾವುದೇ ಆಧಾರವಿಲ್ಲದೆ ಸಾಲದ ಸುಳಿಯಲ್ಲಿ ಸಿಲುಕಿರುವವರಿಗೆ ಈಗ ಮತ್ತೋಮ್ಮೆ ವ್ಯಾಪಾರ ವ್ಯವಹಾರಗಳಿಗೆ ಕತ್ತರಿ ಬಿದ್ದಿದ್ದು ಮುಂದಿನ ಬದುಕಿನ ಬಂಡಿ ಹೇಗೆ ಸಾಗಿಸಬೇಕು ಎಂದು ವ್ಯಾಪಾರಸ್ಥರು ಅಳಲು ತೋಡಿಕೊಂಡರು.
ಬೀದಿ ಬದಿ ವ್ಯಾಪಾರಿಗಳ ಕಥೆ ಹೀಗಾದರೆ ಇನ್ನೂ ಅಂಗಡಿ ಮುಂಗ್ಗಟ್ಟುಗಳಲ್ಲಿ ಎಪಿಎಂಸಿ ಮಾರುಕಟ್ಟೆಯ ಅಂಗಡಿಗಳಲ್ಲಿ ತಿಂಗಳಿಗೆ ನಾಲ್ಕೈದು ಸಾವಿರಕ್ಕೆ ಕೆಲಸ ಮಾಡುತ್ತಿರವ ದಿನಗೂಲಿ ಕಾರ್ಮಿಕರ ಬದುಕು ಮೊದಲೇ ಕಷ್ಟದ ಬದುಕಾಗಿದೆ. ಇನ್ನೂ ಈ ಮಿನಿ ಲಾಕ್ಡೌನ್ ಬಂದರೆ ಬದುಕು ಮತ್ತಷ್ಟು ಮೂರಾಬಟ್ಟೆಯಾಗಲಿದೆ. ಈ ಕಣ್ಣಿಗೆ ಕಾಣದ ಮಾರಣಾಂತಿಕ ಸೋಂಕು ಪ್ರತಿಯೊಬ್ಬರ ಬದುಕಿನಲ್ಲೂ ಒಂದೊಂದು ರೀತಿ ಕಾಡುತ್ತಿದ್ದು, ಈ ಕೊರೊನಾ ಮುಕ್ತಾಯದ ಹಂತಕ್ಕೆ ಇನ್ನೂ ಏನೇನು ಕಾದಿದೆಯೋ ಕಾದು ನೋಡಬೇಕಿದೆ.
ಕಳೆದ ಒಂದು ವರ್ಷದಿಂದ ಜಗತ್ತಿನ ಜನರನ್ನು ಇನ್ನಿಲ್ಲದಂತೆ ಕಾಡಿ ಲಾಕ್ಡೌನ್ನಿಂದಾಗಿ ಅನೇಕ ಜನರು ಕೆಲಸ ಕಳೆದುಕೊಂಡು ತುತ್ತು ಅನ್ನಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಮತ್ತೆ ಒಂದು ವರ್ಷದ ನಂತರ ಅಂತಹದ್ದೆ ಪರಿಸ್ಥಿತಿಯನ್ನು ರಾಜ್ಯ ಎದರಿಸುತ್ತಿದ್ದು ಬಡ, ಮಧ್ಯಮ, ಕೂಲಿ ಕಾರ್ಮಿಕರು, ಬೀದಿ ಬದಿಯ ವ್ಯಾಪಾರಿಗಳು ಮತ್ತೋಮ್ಮೆ ಸಂಕಷ್ಟಕ್ಕೆ ಸಿಲುಕಿದ್ದು ಇದಕ್ಕೆ ಆ ದೇವರೆ ದಾರಿ ತೋರಬೇಕಿದೆ.
Comments are closed.